ಹಾವೇರಿ | ಉಮ್ಮತ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿವಾಹ ಸ್ಥಿತಿ ಹಾಗೂ ಶಿಕ್ಷಣ ಸಾಕ್ಷರತಾ ಸಮೀಕ್ಷೆ ಆರಂಭ

Date:

ಸಮುದಾಯದ ವಾಸ್ತವಿಕ ಸಾಮಾಜಿಕ ಚಿತ್ರಣ ಸಿದ್ಧಪಡಿಸುವ ಉದ್ದೇಶವಾಗಿದ್ದು, ವಿವಾಹ ಸ್ಥಿತಿ ಹಾಗೂ ಶಿಕ್ಷಣ, ಸಾಕ್ಷರತಾ ಸಮೀಕ್ಷೆಯನ್ನು ಉಮ್ಮತ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ, ಸಮೀಕ್ಷಾ ಕಾರ್ಯ ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದಲ್ಲಿ ಆರಂಭವಾಗಿದೆ. 

“ಟ್ರಸ್ಟ್ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಮೌಲಿಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿ ಭವಿಷ್ಯದಲ್ಲಿನ ನೆರವು, ಕಲ್ಯಾಣ ಯೋಜನೆಗಳು ಮತ್ತು ಶಿಕ್ಷಣ ಉತ್ತೇಜನ ಕಾರ್ಯಕ್ರಮಗಳ ರೂಪೀಕರಣಕ್ಕೆ ಮಾರ್ಗದರ್ಶಿಯಾಗಲಿದೆ” ಎಂದು ಟ್ರಸ್ಟಿ ತಿಳಿಸಿದೆ.

“ಸಮೀಕ್ಷೆಯಲ್ಲಿ ವಿವಾಹ ಸ್ಥಿತಿ ಕುರಿತು, ಸಮುದಾಯದ ವಿವಾಹ ವಯೋಮಾನದ ವಿವರಗಳು, ಸಮೀಪ ಭವಿಷ್ಯದ ವಿವಾಹಕ್ಕೆ ತಯಾರಿ, ಆರ್ಥಿಕ ಸ್ಥಿತಿ, ಕುಟುಂಬದ ರಚನೆ, ಅವಲಂಬಿತರ ಸಂಖ್ಯೆ, ವಿವಾಹ ಸಹಾಯ ಅಗತ್ಯ ಇರುವ ಕುಟುಂಬಗಳ ಗುರುತಿಸುವುದು” ಎಂದು ತಿಳಿಸಿದೆ 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಈ ಡೇಟಾದ ಆಧಾರದಲ್ಲಿ ಟ್ರಸ್ಟ್ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿವಾಹ ನೆರವು, ಮಾರ್ಗದರ್ಶನ ಹಾಗೂ ಸಂಯೋಜನೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸಲು ಉದ್ದೇಶಿಸಿದೆ” ಎಂದು ತಿಳಿಸಿದೆ.

“ಶಿಕ್ಷಣ ಸಾಕ್ಷರತಾ ಸಮೀಕ್ಷೆ ಕುರಿತು, ಸಮುದಾಯದ ಸಾಕ್ಷರತಾ ಮಟ್ಟ, ಶಾಲೆ/ಕಾಲೇಜು ಪ್ರವೇಶ ಮತ್ತು ಹಾಜರಾತಿ, ಮಧ್ಯದಲ್ಲಿ ಅಧ್ಯಯನ ಬಿಟ್ಟಿರುವ ವಿದ್ಯಾರ್ಥಿಗಳ ಸ್ಥಿತಿ ಮತ್ತು ಕಾರಣಗಳು, ಮಹಿಳಾ ಶಿಕ್ಷಣ, ವಿದ್ಯಾರ್ಥಿಗಳ ಭವಿಷ್ಯದ ಗುರಿಗಳು ಮತ್ತು ಕೌಶಲ್ಯಾಭಿವೃದ್ಧಿ ಅಗತ್ಯಗಳನ್ನು ಗುರುತಿಸುವುದು” ಎಂದು ತಿಳಿಸಿದೆ.

“ಈ ಮಾಹಿತಿಯನ್ನು ಆಧರಿಸಿ ಟ್ರಸ್ಟ್ ಬಡ ವಿದ್ಯಾರ್ಥಿಗಳಿಗೆ ಟ್ಯೂಷನ್ ಸಹಾಯ, ವಿದ್ಯಾರ್ಥಿವೇತನ, ಸ್ಕಿಲ್ ತರಬೇತಿ, ಮಹಿಳಾ ಶಿಕ್ಷಣ ಜಾಗೃತಿ ಹಾಗೂ ಭವಿಷ್ಯದ ಮಾರ್ಗದರ್ಶನ ಶಿಬಿರಗಳನ್ನು ರೂಪಿಸಲು ಯೋಜನೆ ಮಾಡುತ್ತಿದೆ” ಎಂದು ತಿಳಿಸಿದೆ.

1002567401

ಸಮೀಕ್ಷೆಯಲ್ಲಿ ಮುಸ್ತಾಕೆ ಅಹ್ಮದ್ ಸೈಗಲ್ಗಾರ್ – ಅಧ್ಯಕ್ಷರು, ಜೀಲಾನಿ ಉಪಾಧ್ಯಕ್ಷರು, ಅಂಸಾರ್ ಖಾಜಿ – ಖಜಾಂಚಿ, ಘೌಸ್ ಸಲಹೆಗಾರರು, ರಫೀಕ್ ಟ್ರಸ್ಟಿ, ನೌಷಾದ್ ಟ್ರಸ್ಟಿ, ಸರಫರಾಝ್ ಟ್ರಸ್ಟಿ ಪಾಲ್ಗೊಳ್ಳುವರು.

ಇದನ್ನು ಓದಿದ್ದೀರಾ? ಹಾವೇರಿ | ಸಮಗ್ರ ಕೃಷಿ ಅಳವಡಿಸಿಕೊಂಡು ಲಕ್ಷಾಂತರ ಆದಾಯ ಗಳಿಸುತ್ತಿರುವ ರೈತನ ಯಶೋಗಾಥೆ

“ಸಮೀಕ್ಷೆಯ ಮಾಹಿತಿ ಸಂಗ್ರಹಣೆ ಪೂರ್ಣಗೊಂಡ ನಂತರ, ಟ್ರಸ್ಟ್ ವಿವರಣಾತ್ಮಕ ವರದಿಯನ್ನು ಪ್ರಕಟಿಸುವುದಾಗಿ ತಿಳಿಸಿದೆ. ಯೋಗ್ಯ ಕುಟುಂಬಗಳಿಗೆ ವಿವಾಹ ಸಹಾಯ, ಶಿಕ್ಷಣ ನೆರವು, ಕೌಶಲ್ಯಾಭಿವೃದ್ಧಿ ಹಾಗೂ ಹಲವು ಸಮಾಜೋಪಕಾರ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು” ಎಂದು ಟ್ರಸ್ಟ್ ಪ್ರಕಟಿಸಿದೆ.

ಸಮೀಕ್ಷೆಯಲ್ಲಿ ಸಹಕರಿಸುತ್ತಿರುವ ಸಾರ್ವಜನಿಕರಿಗೆ ಟ್ರಸ್ಟ್ ಕೃತಜ್ಞತೆ ಸಲ್ಲಿಸುತ್ತದೆ. ಸಮುದಾಯದ ಸತ್ಯಸ್ಥಿತಿಯನ್ನು ಅರಿತು ಪರಿಹಾರ ರೂಪಿಸುವಲ್ಲಿ ಜನರ ಸಹಭಾಗಿತ್ವ ಮಹತ್ವದ್ದಾಗಿದೆ” ಟ್ರಸ್ಟಿ ತಿಳಿಸಿದೆ.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...