“ನಾವೆಲ್ಲರೂ ಸಮಾನತೆ ಸಾರೋಣ. ಸಮಾಜದ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು. ಒಲಮೀಸಲಾತಿ ಜಾರಿಗಾಗಿ ಹೋರಾಟ ಮಾಡುತ್ತಿರುವ ಭಾಸ್ಕರ್ ಪ್ರಸಾದ್ ಅವರಿಗೆ ನಾವು ಬೆಂಬಲ ಕೊಡಲು ಮೈಸೂರಿಗೆ ಹೋಗುತ್ತೇವೆ” ಎಂದು ಪತ್ರಿಕಾ ಗೋಷ್ಠಿಯಲ್ಲಿ ಮಾದಿಗ ಮುಖಂಡರು ಹೇಳಿದರು.
ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಮಾದಿಗ ಸಮಾಜದ ಮುಖಂಡರು ಮಹದೇವಪ್ಪ ಮಳಮ್ಮನವರ ಮಾತನಾಡಿ, “ಮಾದಿಗ ಸಮಾಜ ತಲತಲಾಂತರಗಳಿಂದ ಮೇಲ್ವರ್ಗದ ಸೇವೆ ಮಾಡಿಕೊಂಡು, ಕಷ್ಟ ಅನುಭವಿಸಿ, ಶೋಷಣೆ ಅನುಭವಿಸುತ್ತಾ ಬಂದಿದ್ದೇವೆ. ಜಸ್ಟೀಸ್ ನಾಗಮೋಹನದಾಸ್ ಹಾಗೂ ಸದಾಶಿವ ಆಯೋಗದ ವರದಿಯನ್ನು ಯತಾವತ್ತಾಗಿ ಜಾರಿಗೊಳಿಸಿ ಮಾದಿಗ ಸಮಾಜಕ್ಕೆ ಅನುಕೂಲ ಮಾಡಿಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರೆ. ಆದರೆ ಅವರ ಸಚಿವ ಸಂಪುಟದ ಸಚಿವ ಹೆಚ್ ಸಿ ಮಹದೇವಪ್ಪ ಅವರ ಹುನ್ನಾರ ಎಲ್ಲ ಜನರಿಗೆ ಗೊತ್ತಿದೆ. ಮಾದಿಗ ಸಮಾಜವದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದ್ದಕ್ಕಾಗಿ ಮಾದಿಗ ಸಮಾಜದ ಮುಖಂಡರು ಬಿ ಆರ್ ಭಾಸ್ಕರ್ ಪ್ರಸಾದ್ ಅವರು ಹರಿಹದಿಂದ ಮೈಸೂರು ವರೆಗೆ ಪಾದಯಾತ್ರೆ ಮಾಡಿ ಸಮಾಜದ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹೇಗೆ ವಂಚಿತರಾಗಿದ್ದೇವೆ” ಎಂಬುದು ಗೊತ್ತಾಗಿದೆ ಎಂದರು.
ಸಚಿವ ಹೆಚ್ ಸಿ ಮಹದೇವಪ್ಪ ಅವರ ಗುಲಾಮನಾಗಿ ಜ್ಞಾನ ಪ್ರಕಾಶ್ ಸ್ವಾಮೀಜಿಯ ಮಾತನ್ನು ಕಟ್ಟಿಕೊಂಡು ನಮ್ಮ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವುದು ಅವರ ಬಾಯಿಯಿಂದಲೇ ಬಂದಿರುವುದು ಗೊತ್ತಾಗಿದೆ. ಹಾಗಾಗಿ ಬಿ. ಆರ್. ಭಾಸ್ಕರ್ ಪ್ರಸಾದ್ ಅವರು ಮೈಸೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತಿದ್ದಾರೆ. ಆ ಪ್ರತಿಭಟನೆಗೆ ನಾವು ಕೂಡ ಹೋಗಿ ಬೆಂಬಲ ಸೂಚಿಸುತ್ತೇವೆ” ಎಂದು ಹೇಳಿದರು.
“ಹಾವೇರಿ ಜಿಲ್ಲೆಯ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ಮಾದಿಗ ಸಮಾಜದ ಜನರು ಭಾಸ್ಕರ್ ಪ್ರಸಾದ ಅವರ ಪ್ರತಿಭಟನೆಗೆ ಬೆಂಬಲ ಕೋರುತ್ತೇವೆ” ಎಂದು ಹೇಳಿದರು.
“224 ಶಾಸಕರಿಗೆ ಸ್ವಾಭಿಮಾನ ಇದ್ದರೆ, ಮಾದಿಗ ಸಮಾಜ ನಮಗೆ ಓಟು ಕೊಟ್ಟು ಗೆಲ್ಲಿಸಿದೆ. ಮಾದಿಗ ಸಮಾಜದ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಬೇಕು” ಎಂದರು.
“ಮುಂದೆ ಮತ್ತೆ ಚುನಾವಣೆ ಬರುತ್ತದೆ. ಸಚಿವ ಹೆಚ್ ಸಿ ಮಹದೇವಪ್ಪ ಅವರು ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ನಮ್ಮ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ನಾವೆಲ್ಲರೂ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ರಾಜು ತಾಳಿಕೋಟೆ ಅಗಲಿಕೆ ರಂಗಭೂಮಿಗೆ ತುಂಬಲಾರದ ನಷ್ಟ: ಹಿರಿಯ ಸಾಹಿತಿ ಸತೀಶ ಕುಲಕರ್ಣಿ
“ನಾಳೆಯಿಂದಲೇ ನಾವೆಲ್ಲರೂ ಬಿ ಆರ್ ಭಾಸ್ಕರ್ ಪ್ರಸಾದ ಅವರಿಗೆ ಬೆಂಬಲ ನೀಡಲು ಹೋಗುತ್ತಿದ್ದೇವೆ” ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾದಿಗ ಸಮಾಜದ ಮುಖಂಡರು ಮಾಲತೇಶ್ ಹೊಲಬಿಕೊಂಡ, ಚಂದ್ರಪ್ಪ ಬಾಲಣ್ಣವರ, ಬಸವರಾಜ ಕಲ್ಲಹಳ್ಳಿ, ಶೇಕಪ್ಪ ನಡುಗೇರಿ, ಕುಮಾರ್ ಪ್ರಭು ನಡುವಿನಮನಿ ಕುಮಾರ ದ್ಯಾವಣ್ಣವರ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.





