“ಕಾನೂನಿನ ಜ್ಞಾನದಿಂದ ಅನ್ಯಾಯಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಕಾನೂನು ಅರಿವು ಪ್ರತಿಯೊಬ್ಬ ನಾಕರಿಕನ ಜೀವನದಲ್ಲಿ ಅತ್ಯಂತ ಅಗತ್ಯವಾಗಿದೆ. ಭಾರತದಲ್ಲಿ ಮಕ್ಕಳು ಮತ್ತು ಮಹಿಳೆಯರರಿಗೆ ವಿಶೇಷ ಕಾನುನೂಗಳಿವೆ. ಆದ್ದರಿಂದ ಮಹಿಳೆಯರು ಕಾನೂನನ್ನು ತಿಳಿದುಕೊಂಡು ಮಹಿಳೆಯರ ಮೇಲೆ ನಡೆಯುವ ಕಾನೂನುಬಾಹಿರ ಚಟುವಟಿಕೆಗಳಿಗೆ ಮತ್ತು ದೌರ್ಜನ್ಯಗಳಿಗೆ ಧ್ವನಿ ಎತ್ತಿ ನಿಲ್ಲಬೇಕು” ಎಂದು ರವಿ ಓಲೇಕಾರ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ಕೊಪ್ಪರಿಸಿಕೊಪ್ಪ ಗ್ರಾಮದಲ್ಲಿ ಲೊಯೋಲ ವಿಕಾಸ ಕೇಂದ್ರ ಮತ್ತು ಸಮಗ್ರ ಸುಸ್ಥಿರ ಕಾರ್ಯಕ್ರಮ ವತಿಯಿಂದ ಕಾನೂನು ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
“ಮಹಿಳೆಯರು ಸಮಾಜದ ಭಾಗವಾಗಿದ್ದು, ಅವರ ಗೌರವ, ಸುರಕ್ಷತೆ ಮತ್ತು ಸಮಾನತೆ ಕಾಪಾಡಲು ಕಾನೂನು ಅತ್ಯಂತ ಪ್ರಮುಖಪಾತ್ರ ವಹಿಸುತ್ತದೆ. ಕಾನೂನು ಅರಿವು ಮಹಿಳೆಯರಿಗೆ ಆತ್ಮ ವಿಶ್ವಾಸ ನೀಡುವುದುರ ಜೊತೆಗೆ ತಮ್ಮ ಹಕ್ಕುಗಳನ್ನು ರಕ್ಷಸಿಕೊಳ್ಳಲು ಶಕ್ತಿಯನ್ನು ಒದಗಿಸುತ್ತದೆ. ಕಾನೂನು ಮಹಿಳೆಯರಿಗೆ ಶಿಕ್ಷಣ ಉದ್ಯೋಗ ಆಸ್ತಿ ಮದುವೆ ಮತ್ತು ವಿಚ್ಛೇದನ್ನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರ ಹಕ್ಕುಗಳನ್ನು ಕಾನೂನು ಸ್ವಸ್ಥವಾಗಿ ಗುರುತಿಸಿದೆ” ಎಂದು ಹೇಳಿದರು.
“ಗೃಹಹಿಂಸೆ ತಡೆ ಕಾಯ್ದೆ 2005, ಲೈಗಿಕ ಕಿರುಕುಳ ತಡೆಕಾಯ್ದೆ 2013, ಬಾಲ್ಯವಿವಾಹ ತಡೆಕಾಯ್ದೆ ಮತ್ತು ಮುಂತಾದ ಕಾನುನೂಗಳು ಮಹಿಳೆಯರ ಮೇಲೆ ನಡೆಯುವ ಹಿಂಸೆ ಮತ್ತು ದೌರ್ಜನ್ಯವನ್ನು ತಡೆಯಲು ಸಹಾಯವಾಗಿದೆ” ಎಂದು ಕಾಯಿದೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.
“ಅನ್ಯಾಯ ಸಂಭವಿಸಿದಾಗ ಪೊಲೀಸ್ ಠಾಣೆ. ನ್ಯಾಯಾಲಯ ಮಹಿಳಾ ಆಯೋಗ ಕಾನೂನು ಸೇವಾ ಪ್ರಾಧಿಕಾರಿಗಳ ಮೂಲಕ ನ್ಯಾಯ ಪಡೆಯಲ್ಲು ಕಾನೂನು ಮಹಿಳೆಯರಿಗೆ ಅವಕಾಶ ಕಲ್ಪಸುತ್ತದೆ” ಎಂದು ತಿಳಿಸದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪಿರಪ್ಪ ಶಿರಶಿ ನಿರೂಪಿಸಿದರು. ಮಂಜುಳಾ ನಾಗೋಜಿ ಸ್ವಾಗತಿಸಿದರು. ಹೊನ್ನಮ್ಮ ವಂದಿಸಿದರು.





