“ಬರವಣಿಗೆಯು ಒಂದು ಕಲೆಯಾಗಿದ್ದು, ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಅಭಿವ್ಯಕ್ತಪಡಿಸುವ ವಿಧಾನ ಬರಹವಾಗಿದೆ. ಸರಳ ಭಾಷೆಯಲ್ಲಿ ನಿರೂಪಿಸುತ್ತ ಓದುಗರ ಮೇಲೆ ಪರಿಣಾಮ ಬಿರುವಂತೆ ಬರಹ ಇರಬೇಕು” ಎಂದು ಈದಿನ.ಕಾಮ್ ಜಿಲ್ಲಾ ವರದಿಗಾರರು ಶರಣಪ್ಪ ಎಚ್ ಸಂಗನಾಳ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ರೋಷನಿ ಸಂಸ್ಥೆ, ಈದಿನ.ಕಾಮ್ ಹಾಗೂ ನ್ಯಾಷನಲ್ ಟ್ರಸ್ಟ್ ಸಹಯೋಗದಲ್ಲಿ ಬಡ್ತೆ ಕದಂ ಅಟಿಸಂ, ಸೆರೆಬ್ರೇಲ್ ಪಾಲಸಿ, ಮಲ್ಟಿಪಲ್ ಡಿಜೆಬಿಲಿಟಿ, ಜಾಗೃತ ಕಾರ್ಯಕ್ರಮ ಹಾಗೂ ಸುದ್ದಿ ಬರವಣಿಗೆ ಕುರಿತು ಕಾರ್ಯಗಾರದಲ್ಲಿ ಮಾತನಾಡಿದರು.
“ಬರವಣಿಗೆ ಪೂರ್ವದಲ್ಲಿ ಸಾಕಷ್ಟು ಓದು ಇರಬೇಕು. ಆ ಓದು ಪ್ರಬುದ್ಧತೆಯಿಂದ ಬರವಣಿಗೆ ಕೂಡಿರುತ್ತದೆ. ಬರವಣಿಗೆಯಲ್ಲಿ ಸರಿಯಾದ ವ್ಯಾಕರಣ, ಪದಗಳ ಬಳಕೆ ಮತ್ತು ಶೈಲಿ ಬರವಣಿಗೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ” ಎಂದರು.
“ಸಮಾಜದಲ್ಲಿ ನಡೆಯುವಂತಹ ಅನ್ಯಾಯ, ದೌರ್ಜನ್ಯಗಳ ವಿರುದ್ಧ ದ್ವನಿ ಎತ್ತುವ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಸಿಟಿಜನ್ ಜರ್ನಲಿಸ್ಟ್. ಅವರ ಮೂಲಕವೂ ಸಮಾಜದ ಬದಲಾವಣೆ ಮಾಡಲು ಸಾಧ್ಯವಿದೆ” ಎಂದು ಹೇಳಿದರು.
ಜೋನಲ್ ಕೋಆರ್ಡಿನೇಟರ್ ಸಂತೋಷ್ ಎಚ್ ಎಮ್ ಮಾತನಾಡಿ, “ಪತ್ರಕರ್ತರು ವಾಸ್ತವದಲ್ಲಿ ಸರ್ಕಾರಗಳ ಸಾಕು ನಾಯಿಗಳಂತೆ ಕೆಲಸ ಮಾಡುತ್ತಿದ್ದಾವೆ. ಇದರಿಂದ ಮಾಧ್ಯಮಗಳ ಸ್ವಾತಂತ್ರ್ಯವನ್ನು ಉಳಿಸಿಕೊಂಡಿಲ್ಲ. ಮತ್ತು ಜನರ ಸಮಸ್ಯೆಗಳ ಬಗ್ಗೆ ಸುದ್ಧಿಗಳು ಬರೆಯುವುದು ಕಡಿಮೆ ಆಗಿದೆ. ಒಂದು ವರದಿಯಂತೆ ಸುದ್ಧಿಗಳಿಗಾಗಿ ಟಿವಿ ನೋಡುಗರ ಸಂಖ್ಯೆ ಕಡಿಮೆ ಆಗಿದೆ. ಆದ್ದರಿಂದ ಡಿಜಿಟಲ್ ಮಾಧ್ಯಮದ ಅವಶ್ಯವಿದೆ” ಎಂದರು.

ಕಾರ್ಯಾಗಾದಲ್ಲಿ ರೋಷನಿ ಸಂಸ್ಥೆಯ ನಿರ್ದೇಶಕರು ಅನಿತಾ ಡಿಸೋಜಾ ಮಾತನಾಡಿ, “ನಮ್ಮ ಸಮಸ್ಯೆಗಳನ್ನು ನಾವೇ ಸುದ್ದಿ ಬರೆಯುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅನ್ನಭಾಗ್ಯಕ್ಕೆ 12 ವರ್ಷದ ಸಂಭ್ರಮ; ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಅನ್ಯಾಯ
ಕಾರ್ಯಾಗಾರದಲ್ಲಿ ರೋಷನಿ ಸಂಸ್ಥೆಯ ಸಿಬ್ಬಂದಿಗಳು, ಸಾಮಾಜಿಕ ಹೋರಾಟಗಾರರು ಇನ್ನೂ ಅನೇಕರು ಉಪಸ್ಥಿತರಿದ್ದರು.





