ಬೀದರ್‌ | ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ; ಬೇಕಿದೆ ಮಾರುಕಟ್ಟೆ ಸೌಲಭ್ಯ

Date:

ಸೀತಾಫಲ ಹಣ್ಣು ತಿನ್ನಲು ತುಂಬಾ ರುಚಿಕರ ಹಾಗೂ ಅಷ್ಟೇ ಸ್ವಾದಿಷ್ಟ, ರೋಗ ನಿರೋಧಕ ಶಕ್ತಿಯೂ ಹೊಂದಿರುವ ಕಾರಣ ಸೀತಾಫಲ ಸೀಜನ್‌ ನಲ್ಲಿ ಒಮ್ಮೆಯಾದರೂ ಈ ಹಣ್ಣು ಸವಿಯಲೇಬೇಕೆಂದು ಜನ ತುಂಬಾ ಇಷ್ಟಪಡುತ್ತಾರೆ.

ಬೆಟ್ಟ, ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಸೀತಾಫಲ ಹಣ್ಣು ಇದೀಗ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಹಣ್ಣಾಗಿದೆ. ವರ್ಷದಲ್ಲಿ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ಈ ಎರಡು ತಿಂಗಳು ಮಾತ್ರ ದೊರೆಯುವ ಸೀತಾಫಲ ಸಿಹಿ ಸವಿಯಲು ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಸೀತಾಫಲ ಹೆಚ್ಚಾಗಿ ಬೆಳೆಯುವುದು ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಕಲಬುರಗಿ ಹಾಗೂ ಬೀದರ್‌ ಜಿಲ್ಲೆಯಲ್ಲಿ, ಉಷ್ಣ ವಲಯದ ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯುವ ಸೀತಾಫಲ ಮಳೆಗಾಲ ಆರಂಭವಾಗುತ್ತಿದ್ದಂತೆ ಸ್ವಚ್ಛಂದವಾಗಿ ಚಿರುರೊಡೆದು, ಸುವಾಸನೆಯುಕ್ತ ಹೂಗಳಿಂದ ಕಂಗೊಳಿಸಿ ಕಾಯಿ ಬಿಡುತ್ತದೆ. ಹೆಚ್ಚು ಬೀಜಗಳು ಹೊಂದಿರುವ ಈ ಹಣ್ಣು ಒಮ್ಮೆ ಸವಿದರೆ ಸಾಕು ತಿನ್ನಲು ಮಜಾ ಬರುತ್ತದೆ. ಇಂಥ ಅಪರೂಪದ ಹಣ್ಣು ವರ್ಷ ಎಲ್ಲೆಡೆ ಉತ್ತಮ ಮಳೆಯಾದ ಕಾರಣ ಹೆಚ್ಚಾಗಿ ಬೆಳೆದಿದೆ, ಅಷ್ಟೇ ಬೇಡಿಕೆಯೂ ಹೆಚ್ಚಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೀತಾಫಲ ಹಣ್ಣಿಗೆ ಔರಾದ ʼಫೇಮಸ್ʼ :

ಬೀದರ್‌ ಜಿಲ್ಲಾದ್ಯಂತ ಸೀತಾಫಲ ಹಣ್ಣು ಬೆಳೆಯುತ್ತದೆ, ಆದರೆ ಅತೀ ಹೆಚ್ಚು ಬೆಳೆಯುವುದು ಔರಾದ ತಾಲೂಕಿನಲ್ಲಿ, ಗುಡ್ಡಗಾಡು ಪ್ರದೇಶ ಹೊಂದಿರುವ ಈ ತಾಲೂಕಿನಲ್ಲಿ ಸೀತಾಫಲ ಗಿಡಗಳು ಹೆಚ್ಚಾಗಿ ಬೆಳೆಯುತ್ತವೆ. ತಾಲೂಕಿನ ಚಿಂತಾಕಿ, ಸಂತಪೂರ ಸೇರಿದಂತೆ ಇತರೆ ಹೋಬಳಿಗಳಲ್ಲಿ ನೈಸರ್ಗೀಕವಾಗಿ ಬೆಳೆಯುವ ಸೀತಾಫಲ ಸಿಹಿಗೆ ಜಿಲ್ಲೆಯಲ್ಲಿ ಭಾರೀ ಡಿಮ್ಯಾಂಡ್‌.

ಪ್ರಾಕೃತಿಕವಾಗಿ ಅರಣ್ಯ ಪ್ರದೇಶ, ಗುಡ್ಡಗಾಡು ಪ್ರದೇಶಲ್ಲಿ ಬೆಳೆಯುವ ಸೀತಾಫಲಕ್ಕೆ 2 ತಿಂಗಳು ಸುಗ್ಗಿಯ ಕಾಲ, ಈ ಭಾಗದ ಹಲವು ಕುಟುಂಬಗಳಿಗೆ ಎರಡು ತಿಂಗಳು ತಕ್ಕ ಮಟ್ಟಿನ ಆದಾಯದ ಮೂಲವಾಗಿದೆ. ಸೀತಾಫಲ ಗಿಡಗಳಿಗೆ ಯಾರೂ ನೀರು, ಗೊಬ್ಬರ ಹಾಕಿ ಪೋಷಣೆ ಮಾಡುವುದಿಲ್ಲ. ತಂತಾನೇ ಬೆಳೆಯುವ ಸೀತಾಫಲ ಹಣ್ಣು ಪುಕ್ಕಟೆಯಾಗಿ ದೊರೆಯುತ್ತದೆ. ಹೀಗಾಗಿ ಅನೇಕ ಕುಟುಂಬಗಳು ಎರಡು ತಿಂಗಳು ಮುಂಜಾನೆ ಎದ್ದು ಕೈಯಲ್ಲಿ ಚೀಲ ಹಿಡಿದುಕೊಂಡು ಗುಡ್ಡಗಾಡು , ಅರಣ್ಯ ಪ್ರದೇಶದೊಳಗೆ ಹೊಕ್ಕರೆ ಸಾಕು ಹಣ್ಣು ಮತ್ತು ಕಾಯಿಯ ಚೀಲ ತುಂಬಿಕೊಂಡು ಬಂದು ಹಣ್ಣಿನ ವ್ಯಾಪಾರ ನಡೆಸಿ ಆದಾಯ ಗಳಿಸುತ್ತಾರೆ.

ಮಾರುಕಟ್ಟೆ ಇಲ್ಲ; ಬೀದಿಯಲ್ಲಿ ವ್ಯಾಪಾರ:

ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಎಲ್ಲಾ ಹಣ್ಣುಗಳು ರಾಸಾಯನಿಕ ಮಿಶ್ರಿತ, ಸೀತಾಫಲ ತೋಟಗಾರಿಕೆ ಬೆಳೆಯಾದರೂ ಬೆಳೆಯುವವರ ರೈತರ ಸಂಖ್ಯೆ ತುಂಬಾ ವಿರಳ. ಯಾವುದೇ ರಾಸಾಯನಿಕ ಮಿಶ್ರಿತವಿಲ್ಲದೇ ಇರುವ ಸೀತಾಫಲ ಹಣ್ಣಿಗೆ ಬೇಡಿಕೆ ಹೆಚ್ಚಿದ್ದರೂ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ವ್ಯಾಪಾರಿಗಳು ಬೀದಿಬದಿಯಲ್ಲಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ.

ಸುಮಾರು 30-40 ಕಿ.ಮೀ. ದೂರದ ಹಳ್ಳಿ-ತಾಂಡಾಗಳಿಂದ ಬೀದರ್‌ ನಗರಕ್ಕೆ ಬುಟ್ಟಿ ಹೊತ್ತಿಕೊಂಡು ಬರುವ ಬಡ ವ್ಯಾಪಾರಿಗಳು ಬೀದರ್‌ ನಗರದ ಸಿದ್ದಾರ್ಥ ಕಾಲೇಜು ಮುಂಭಾಗ, ಜನವಾಡ ರಸ್ತೆ, ಅಂಬೇಡ್ಕರ್‌ ವೃತ್ತ, ಹಳೆ ಬಸ್‌ ನಿಲ್ದಾಣ ಸೇರಿದಂತೆ ನಗರದ ವಿವಿಧ ಕಡೆ ಬೀದಿ ಮೇಲೆ ಕುಳಿತು ಮಾರಾಟ ಮಾಡುವ ವ್ಯಾಪಾರಿಗಳಿಗೆ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಬಿಸಿಲು, ಮಳೆಯಲ್ಲೇ ವಹೀವಾಟು ನಡೆಸುತ್ತಿದ್ದಾರೆ.

ಸೀತಾಫಲ ಮಾರಾಟ

ಸೀತಾಫಲ ಹಣ್ಣಾದ ನಂತರ ಎರಡ್ಮೂರು ದಿನಗಳ ಕಾಲ ಉಳಿಯುವುದಿಲ್ಲ. ಹೀಗಾಗಿ ಹಣ್ಣಾದ ದಿನವೇ ಮಾರಾಟ ಆಗಲೇಬೇಕು ಎಂಬುವ ಕಾರಣ ಅಂದಂದೇ ಸಾಗಾಣೆ ಮಾಡಿ ಮಾರಾಟ ಮಾಡುತ್ತಾರೆ. ಒಂದು ಹಣ್ಣಿಗೆ 5, 10 ರೂ. ಯಂತೆ ಬೇಡಿಕೆಯಿದೆ, ಇನ್ನು 100, 200, 400 ರೂಪಾಯಿಗೆ 1 ಬುಟ್ಟಿಯಂತೆ ಮಾರಾಟ ಮಾಡುತ್ತಾರೆ. ಎರಡು ತಿಂಗಳ ಸುಗ್ಗಿಯ ಕಾಲದಲ್ಲಿ ಕನಿಷ್ಠ 40-50 ಸಾವಿರ ಆದಾಯ ಗಳಿಸುತ್ತಾರೆ.

ಸೀತಾಫಲಕ್ಕೆ ಸೂಕ್ತ ಬೆಲೆ ನಿಗದಿಪಡಿಬೇಕು:

ಗ್ರಾಮೀಣ ಭಾಗದ ಕೆಲ ಕೂಲಿ ಕಾರ್ಮಿಕರು, ಕೃಷಿಕರು ವರ್ಷದ ಎರಡು ತಿಂಗಳು ಸೀತಾಫಲ ಹಣ್ಣಿನ ವ್ಯಾಪಾರ ಮಾಡುತ್ತಾರೆ. ಗುಡ್ಡಗಾಡು, ಅರಣ್ಯ ಪ್ರದೇಶಗಳಿಂದ ಕಷ್ಟಪಟ್ಟು ಕಡಿದು ತಂದು ಮಾರಾಟ ಮಾಡುವ ಬಡ ವ್ಯಾಪಾರಿಗಳಿಗೆ ದುಡಿಮೆಯಂತೆ ಆದಾಯ ಸಿಗುತ್ತಿಲ್ಲ. ಅವರಿಗೂ ಸೂಕ್ತ ಮಾರುಕಟ್ಟೆ ಹಾಗೂ ಸಾಗಾಣೆ ವ್ಯವಸ್ಥೆ ಕಲ್ಪಿಸಿ ನಿರ್ದಿಷ್ಟ ಬೆಲೆ ನಿಗದಿಪಡಿಸಿದರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಹಾಗೂ ಬೇರೆ ರಾಜ್ಯಗಳಿಗೆ ಸಾಗಾಟ ಮಾಡಲು ಅನುಕೂಲ ಆಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದರ ಈದಿನ.ಕಾಮ್‌ ದೊಂದಿಗೆ ಮಾತನಾಡಿ ಹೇಳಿದರು.

ನಗರಕ್ಕೆ ಹೆಚ್ಚಾಗಿ ಔರಾದ ತಾಲೂಕಿನಿಂದ ಸೀತಾಫಲ ಹಣ್ಣು ಬರುತ್ತದೆ, ಹಳ್ಳಿಗಳಿಂದ ತರುವ ಕೆಲ ವ್ಯಾಪಾರಿಗಳು ಬೀದಿ ಬದಿಯಲ್ಲೇ ಕುಳಿತು ಮಾರಾಟ ಮಾಡಿದರೆ ಉಳಿದವರು ಸಗಟು ಬೆಲೆಗೆ ಮಾರಾಟ ಮಾಡುತ್ತಾರೆ. ಒಂದು ಬುಟ್ಟಿಯಲ್ಲಿ ನೂರು, ಇನ್ನೂರು ಹೀಗೆ ಆಯಾ ಹಣ್ಣಿನ ರುಚಿಕರ ತಕ್ಕಂತೆ ಬೆಲೆ ಇರುತ್ತದೆ. ನಾವು ಬುಟ್ಟಿಯ ರೂಪದಲ್ಲಿ ಖರೀದಿಸಿ ಚಿಲ್ಲರೆ ಮಾರಾಟ ಮಾಡುತ್ತೇವೆ, ಇದರಿಂದ ದಿನಕ್ಕೆ 500, 600 ಆದಾಯ ಆಗುತ್ತದೆ ಎಂದು ಬೀದಿಬದಿ ವ್ಯಾಪಾರಿ ಪ್ರೇಮಾ ಮಿರಗಂಜಿ ಹೇಳುತ್ತಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಮನೆ ಗೋಡೆ ಕುಸಿದು 8 ವರ್ಷದ ಬಾಲಕಿ ಸಾವು

ಬೀದರ್‌ ತೋಟಗಾರಿಕೆ ಮಾಹಾವಿದ್ಯಾಲಯದ ಡೀನ್‌ ಡಾ. ಎಸ್.ವಿ.ಪಾಟೀಲ್‌ ಈದಿನ.ಕಾಮ್‌ ದೊಂದಿಗೆ ಮಾತನಾಡಿ, ” ಸೀತಾಫಲ ಹೆಚ್ಚಾಗಿ ಔರಾದ ತಾಲೂಕಿನಲ್ಲಿ ಬೆಳೆಯುತ್ತದೆ, ಎರಡು ತಿಂಗಳು ಕಾಲ ಇರುವ ಸೀತಾಫಲ ಸುಗ್ಗಿ ಅನೇಕರು ಆದಾಯದ ಮೂಲವಾಗಿದೆ. ಸೀತಾಫಲ ಹಣ್ಣಾದ ನಂತರ ಜಾಸ್ತಿ ದಿನಗಳಾದರೆ ಕೊಳೆಯುತ್ತದೆ. ಹೀಗಾಗಿ ದೂರದ ನಗರಗಳಿಗೆ ಸಾಗಾಣೆ ಮಾಡುವುದು ಕಷ್ಟಕರ. ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಗಳಲ್ಲಿ ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆಯಿದೆ. ಸೀತಾಫಲ ಹೆಚ್ಚಾಗಿ ಹಣ್ಣಿನ ಮಾರುಕಟ್ಟೆಗೆ ಹೋಗುವುದಿಲ್ಲ, ಬೀದಿ ಬದಿಯಲ್ಲಿ ಮಾತ್ರ ಮಾರಾಟ ನಡೆಯುತ್ತದೆ. ಇದಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಯೋಚಿಸೋಣ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...