ಬೀದರ್‌ | ಭಾವೈಕ್ಯತೆ ಬದುಕಿಗೆ ದೇಶೀಯತೆ ಅಗತ್ಯ: ಡಾ. ಜಗನಾಥ ಹೆಬ್ಬಾಳೆ

Date:

ಕಳೆದು ಹೋಗುವ ಮನುಷ್ಯ ಸಂಬಂಧ ಉಳಿಸಿಕೊಳ್ಳಲು, ತನ್ನ ಸುತ್ತಲಿನ ಹಲವು ಜೀವಿಗಳ ಜೊತೆಗೆ ಬಾಂಧವ್ಯ ಕಾಪಾಡಲು, ಭಾವೈಕ್ಯತೆಯ ಬದುಕಿಗಾಗಿ ಹಾಗೂ ತನ್ನತನ ಮತ್ತು ಸ್ವಂತಿಕೆ ರೂಪಿಸಿಕೊಳ್ಳಲು ದೇಶೀಯತೆಯ ಅಗತ್ಯವಿದೆ ಎಂದು ಬೀದರ ವಿಶ್ವವಿದ್ಯಾಲಯ ಕಲಾ ನಿಕಾಯದ ಡೀನರಾದ ಪ್ರೊ. ಜಗನ್ನಾಥ ಹೆಬ್ಬಾಳೆ ಹೇಳಿದರು.

ಬಸವಕಲ್ಯಾಣ ನಗರದ ದೊಡ್ಡಪ್ಪ ಅಪ್ಪ ಬಿಇಡಿ ಕಾಲೇಜಿನಲ್ಲಿ ತಾಲೂಕು ಜಾನಪದ ಪರಿಷತ್ತು ಶುಕ್ರವಾರ ಆಯೋಜಿಸಿದ್ದ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸ್ಮೃತಿ ಹಾಗೂ ದೇಶಿ ಚಿಂತನೆ ಕುರಿತು ವಿಶೇಷ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ನಮ್ಮ ನೆಲದ ಸಂಸ್ಕೃತಿ, ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ಅಧ್ಯಾಪಕರ ಮೇಲಿದೆ” ಎಂದರು.

“ಜನಪದ ಹಾಡು, ಕತೆ, ಒಡಪು, ಒಗಟು, ಜನರ ಜ್ಞಾನ ಪರಂಪರೆಯ ಮೂಲಕ ಕನ್ನಡ ಸಾಂಸ್ಕೃತಿಕ ಚರಿತ್ರೆಯ ಪುನರ್ಕಟ್ಟುವಿಕೆ ಮಾಡುವ ಅನಿವಾರ್ಯತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ನಮ್ಮ ಮಣ್ಣಿನಲ್ಲಿ ಸೃಷ್ಟಿಸಿದ ಜ್ಞಾನ, ತಿಳುವಳಿಕೆ ದೇಶಿ ಚಿಂತನೆಯ ಭಾಗವಾಗಿವೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ‘ದೇಶಿಯತೆ ಮತ್ತು ದೇಶಿವಾದ’ದ ಕುರಿತು ಮಾತನಾಡಿ, “ದೇಸಿ ಎಂಬುದು ಸ್ಥಳೀಯವಾದ ಜ್ಞಾನ ಮತ್ತು ಸಾಂಸ್ಕೃತಿಕ ಚಹರೆಯಾಗಿದೆ. ಮಾರ್ಗಕ್ಕೆ ಪರ್ಯಾಯವಾಗಿಯೂ, ಮಾರ್ಗದಿಂದ ಪ್ರೇರಣೆಗೊಂಡು ಸಾಹಿತ್ಯದಲ್ಲಿ ದೇಸಿತನದಿಂದ ರೂಪುಗೊಂಡ ಬಗೆಯಾಗಿದೆ. ಸಾಹಿತ್ಯ ಮತ್ತು ಸಂಗೀತ ವಲಯದಲ್ಲಿ ಮಾರ್ಗ ಅಧಿಕಾರಯುತವಾಗಿ ಬಳಕೆಯಾಗಿದೆ. ಆ ಅಧಿಕಾರಕ್ಕೆ ಪ್ರತಿರೋಧಿಸುವ, ಪರ್ಯಾಯವನ್ನು ಕಟ್ಟಿಕೊಡುವ ಶಕ್ತಿ ದೇಸಿತನಕ್ಕಿದೆ” ಎಂದರು.

“ಕನ್ನಡದಲ್ಲಿ ವಚನಗಳು, ಕೀರ್ತನೆಗಳು, ತತ್ವಪದಗಳು, ಮರಾಠಿಯಲ್ಲಿ ಅಭಂಗ, ವಾರಕರಿ ಸಂಪ್ರದಾಯ, ಹಿಂದಿಯಲ್ಲಿ ದೋಹೆಗಳು ಇವೆಲ್ಲವು ದೇಶಿ ತಾತ್ವಿಕತೆಯನ್ನು ಸಾರಿವೆ. ಪ್ರಧಾನ ಸಂಸ್ಕೃತಿಗೆ ಪ್ರತಿ ಸಂಸ್ಕೃತಿಯಾಗಿ, ಪರ್ಯಾಯ ಪಂಥವಾಗಿಯೂ ರೂಪುಗೊಂಡಿವೆ” ಎಂದರು.

“ವಸಾಹತುಶಾಹಿ ಒಡ್ಡಿದ ವಿಸ್ಮೃತಿಯಿಂದ ಹೊರಬರಲು, ಜಾಗತೀಕರಣ ತಂದ ತಲ್ಲಣ ಮತ್ತು ಆತಂಕಗಳಿಂದ ತಪ್ಪಿಸಿಕೊಳ್ಳಲು ದೇಶಿಯತೆಯ ದಾರಿ ಮಹತ್ವದ್ದು. ಏಕತ್ವದ ಹೇರಿಕೆಯಿಂದ ಪಾರಾಗಿ, ಬಹುತ್ವವನ್ನು ಉಳಿಸಿಕೊಳುವ ತತ್ವ ದೇಶಿವಾದ ಪ್ರತಿಪಾದಿಸುತ್ತದೆ. ಯಜಮಾನ್ಯ ಹಾಗೂ ಪ್ರಭುತ್ವಗಳಿಗಿಂತ ಜನ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ದೇಶಿವಾದದಲ್ಲಿ ಹೆಚ್ಚು ಮನ್ನಣೆಯಿದೆ. ವಿಮರ್ಶೆಯಲ್ಲಿ ದೇಶಿವಾದವು ಸಿದ್ಧಾಂತವಾಗಿ ಬಳಕೆಯಾಗುತ್ತಿದೆ” ಎಂದು ನುಡಿದರು.

“ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಕತೆ -ಕಾದಂಬರಿಗಳಲ್ಲಿ ನಿರ್ಲಕ್ಷಿತ ಸಮುದಾಯದ, ಅಂಚಿನ ಕೊನೆಯಲ್ಲಿರುವವರನ್ನು, ಕಾಡು, ಪ್ರಾಣಿಗಳನ್ನೆಲ್ಲ ನಾಯಕರನ್ನಾಸಿದ್ದಾರೆ. ಮಂದಣ್ಣ, ತಬರ, ಕಿರಗೂರಿನ ಗಯ್ಯಾಳಿಗಳು ಸೇರಿ ಹಲವರು ಈ ನೆಲದ ದೇಸಿತನದ ಅಸ್ಮಿತೆಗಳಾಗಿದ್ದಾರೆ. ತೇಜಸ್ವಿ ಅವರ ಸಾಹಿತ್ಯದ ಒಂದು ಕೇಂದ್ರ ಪರಿಸರವಾದಿಯಾದರೆ ಇನ್ನೊಂದು ಕೇಂದ್ರ ದೇಶಿವಾದವಾಗಿದೆ. ತಾತ್ವಿಕತೆಯ ದೃಷ್ಟಿಯಿಂದ ಒಟ್ಟು ಕನ್ನಡ ಸಾಹಿತ್ಯ ಸ್ಥಳೀಯ ಹಾಗೂ ದೇಶಿಯ ನೆಲೆಯನ್ನು ದಾಟಿ ವಿಶ್ವಾತ್ಮಕ ನೆಲೆಗೆ ನಿಲ್ಲುತ್ತದೆ” ಎಂದರು.

ಬಸವಕಲ್ಯಾಣ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಬಸವರಾಜ ಸ್ವಾಮಿ ಮಾತನಾಡಿ, “ಜಾನಪದ ಎಂಬುದು ಬದುಕಿನ ಎಲ್ಲ ವಲಯಗಳಲ್ಲಿ ತುಂಬಿದೆ. ಜಾಗತೀಕರಣ, ಖಾಸಗೀಕರಣಗಳ ಭರಾಟೆಯಲ್ಲಿ ದೇಶಿ ಸಂಸ್ಕೃತಿ ನಾಶವಾಗುತ್ತಿದೆ. ಜಾನಪದ ವೈದ್ಯಕೀಯ ಪದಧತಿಯಲ್ಲಿ ಹಲವು ರೋಗಗಳಿಗೆ ಔಷಷಧಗಳಿವೆ. ನಮ್ಮ ದಿವ್ಯ ನಿರ್ಲಕ್ಷ್ಯದಿಂದ ನಮ್ಮ ಅರಿವಿನಿಂದ ಅವು ದೂರ ಉಳಿದಿವೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ರಾಚಯ್ಯ ಮಠಪತಿ ಮಾತನಾಡಿ, “ಜಾನಪದದಲ್ಲಿ ಎಲ್ಲವೂ ಅಡಗಿದೆ. ನಮ್ಮ ಸಂಸ್ಕೃತಿಯ ತಾಯಿ ಬೇರು ಜಾನಪದದಲ್ಲಿವೆ. ಪ್ರಶಿಕ್ಷಣಾರ್ಥಿಗಳು ಜಾನಪದದ ಜ್ಞಾನ ಪರಂಪರೆಯನ್ನು ಅರಿಯಬೇಕು. ಆ ಮೂಲಕ ಬದುಕಿನ ಸತ್ವ ಗ್ರಹಿಸಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ಆರೆಸ್ಸೆಸ್‌ ಸಿದ್ಧಾಂತಕ್ಕೆ ಇಂದು ಮೋದಿ ಮುಖ – ನಾಳೆ ಮತ್ತೊಬ್ಬರ ಮುಖ: ಸ್ಟಾಲಿನ್

ಗಾಯಕ ವಿವೇಕಾನಂದ ಸ್ವಾಮಿ ವಸ್ತ್ರದ ಅವರು ಜಾನಪದ ಮತ್ತು ತತ್ವಪದಗೀತೆ ಹಾಡಿದರು. ಡಾ. ಬಸವರಾಜ ಖಂಡಾಳೆ, ಸಂಗೀತಾ ಮಠಪತಿ, ಡಾ. ರೂಪೇಶ ಭೋಸ್ಲೆ , ಶಿವಾನಂದ ಬಿರಾದಾರ ತೊಗಲೂರ, ಅರುಣಾ ಕಾಡಾದಿ ಸೇರಿದಂತೆ ಹಲವರಿದ್ದರು. ನೀಲೇಶ್ ಟೊಂಪೆ ಸ್ವಾಗತಿಸಿದರು. ರೇಣುಕಾ ಡೊಂಗರಗಾಂವ ನಿರೂಪಿಸಿದರು. ಬಸವರಾಜ ಸೇರಿ ವಂದಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...