ಗುಬ್ಬಿ | ಬೆಣಚಗೆರೆಯಲ್ಲಿ ಹೊಯ್ಸಳರ ಕಾಲದ ಶಾಸನ ಪತ್ತೆ

Date:

ಗುಬ್ಬಿ ತಾಲ್ಲೂಕಿನ‌ ನಿಟ್ಟೂರು ಹೋಬಳಿಯ ಬೆಣಚಗೆರೆಯಲ್ಲಿ ಮಣ್ಣಿನಲ್ಲಿ ಹುದುಗಿ ಹೋಗಿದ್ದ ಹನ್ನೆರಡನೇಯ ಶತಮಾನದ ಹೊಯ್ಸಳರ ಕಾಲದ ಶಾಸನವೊಂದು ದೊರೆತಿದೆ. ಇಲ್ಲಿನ ಅಗ್ರಹಾರ (ಬೆಣಚಗೆರೆ) ಗ್ರಾಮವನ್ನು ಇಲ್ಲಿನ ಬ್ರಾಹ್ಮಣರಿಗೆ ಮತ್ತು ಇಲ್ಲಿನ ಬ್ರಹ್ಮೇಶ್ವರ ದೇವಸ್ಥಾನಕ್ಕೆ ಬೊಮ್ಮಲಾದೇವಿ ದಾನ ನೀಡಿದ ಕುರಿತು ಶಾಸನ ಹೇಳುತ್ತದೆ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

“ಹೊಯ್ಸಳರ ಅರಸ ವಿಷ್ಟುವರ್ಧನನ ಕೊನೆಯ ಪಟ್ಟದ ರಾಣಿ ಬೊಮ್ಮಲಾದೇವಿಯು ದಾನ ನೀಡಿದ ಕುರಿತು ಶಾಸನದಲ್ಲಿದೆ. ರಾಣಿ ಬೊಮ್ಮಲಾದೇವಿಯು ಶಾಂತಲೆಯ ನಂತರದ ಪಟ್ಟದ ರಾಣಿಯಾಗಿದ್ದು, ವಿಷ್ಟುವರ್ಧನ ತನ್ನ ಕೊನೆಯ ದಿನಗಳನ್ನು ಬೊಮ್ಮಲಾದೇವಿಯೊಂದಿಗೆ ಹಾನುಂಗಲ್ (ಇಂದಿನ ಹಾನಗಲ್) ಪ್ರದೇಶದಲ್ಲಿ ನೆಲೆಗೊಂಡಿದ್ದನು” ಎಂದು ಇತಿಹಾಸ ಉಪನ್ಯಾಸಕ ಎ ಜಿ ಶ್ರೀನಿವಾಸ್ ಹೇಳಿದರು.

“ಶಾಸನದ ತುದಿಯಲ್ಲಿ ಸೂರ್ಯ ಚಂದ್ರ ಅದರ ಕೆಳಭಾಗದಲ್ಲಿ ನಂದಿ, ಶಿವಲಿಂಗ, ಪಕ್ಕದಲ್ಲಿ ಪೂಜಿಸುವ ಯತಿ ಕೆತ್ತಲಾಗಿದೆ. ನಂದಿಯ ಮೇಲೆ ಚಾಕುವಿನ ಗುರುತಿದೆ. ಇದರಲ್ಲಿ, ನಂದಿ ಮತ್ತು ಶಿವಲಿಂಗ ಕೆತ್ತನೆಯು ಶೈವಧರ್ಮದ ಸೂಚಕವಾಗಿದ್ದು, ಈ ದಾನವು ಸೂರ್ಯ ಚಂದ್ರರು ಇರುವವರೆಗೂ ಶಾಶ್ವತವಾಗಿರಲೆಂದು ಇದರಲ್ಲಿನ ಸೂರ್ಯ, ಚಂದ್ರ ಕೆತ್ತನೆಗಳು ಸೂಚಿಸುತ್ತವೆ.
ಚೋಳರು ಮತ್ತು ಗಂಗರನ್ನು ಸೋಲಿಸಿ ಈ ಭಾಗದಲ್ಲಿ ಅವರಿಂದ ವಶಪಡಿಸಿಕೊಂಡ ಪ್ರದೇಶಗಳ ಉಲ್ಲೇಖವೂ ಇದೆ.”

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಶಾಸನವು ಮಣ್ಣಿನಲ್ಲಿ ಹುದುಗಿ ಹೋಗಿತ್ತು. ಬೆಣಚಗೆರೆ ಗ್ರಾಮದ ರೈತ ಕಾಂತರಾಜು ಅವರು ತಮ್ನ ತೋಟದಲ್ಲಿ ಬದು ನಿರ್ಮಾಣ ಮಾಡುವ ಸಂದರ್ಭದಲ್ಲಿ ಶಾಸನ ಪತ್ತೆಯಾಗಿದೆ. ಸ್ಥಳಕ್ಕೆ ನಿವೃತ್ತ ಕನ್ನಡ ಉಪನ್ಯಾಸಕ ಸಂಗಪ್ಪ, ನಿವೃತ್ತ ಸೈನ್ಯಾಧಿಕಾರಿ ರಾಜಶೇಖರ್ ಶಶಿಭೂಷಣ್, ಸಂಗಮೇಶ್ವರ ಸ್ವಾಮಿ, ಸಂಗಪ್ಪ, ರಘು ಸೇರಿದಂತೆ ಗ್ರಾಮಸ್ಥರ ನೆರವಿನಿಂದ ಶಾಸನವನ್ನು ರಕ್ಷಿಸಿಡಲಾಗಿದೆ. ಒಂದು ಗ್ರಾಮದ ಸಾಂಸ್ಕೃತಿಕ ಚರಿತ್ರೆ ಕಟ್ಟಿಕೊಡುವಲ್ಲಿ ಶಾಸನಗಳು ಪ್ರಮುಖ ಪಾತ್ರವಹಿಸುತ್ತವೆ. ಕರ್ನಾಟಕದಲ್ಲಿ ದಾನ ಶಾಸನಗಳೇ ಹೆಚ್ಚಾಗಿದ್ದು, ಇಲ್ಲಿನ ಶಾಸನ ದಾನ ಶಾಸನವಾಗಿದ್ದು ಅನೇಕ ವಿಶೇಷಗಳಿಗೆ ಸಾಕ್ಷಿಯಾಗಿದೆ‌” ಎಂದು ಇತಿಹಾಸ ಉಪನ್ಯಾಸಕ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ವರದಿ: ಲಕ್ಷ್ಮೀಕಾಂತರಾಜು ಎಂ ಜಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...