ಮಾಜಿ ದೇವದಾಸಿಯರ ಮರು ಸಮೀಕ್ಷೆಯ ಅವಧಿಯನ್ನು ಡಿಸೆಂಬರ 30 ರ ತನಕ ವಿಸ್ತರಿಸಬೇಕೆಂದು ಒತ್ತಾಯಿಸಿ, ಸಮತಾ ಸೈನಿಕ ದಳ ಮತ್ತು ಭಾರತೀಯ ಮೂಲನಿವಾಸಿಗಳ ದ್ರಾವಿಡ್ ಒಕ್ಕೂಟ ರಾಜ್ಯ ಸಮೀತಿ ವತಿಯಿಂದ ಹುಬ್ಬಳ್ಳಿ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದರು.
ಮಾಜಿ ದೇವದಾಸಿಯವರ ಮತ್ತು ಸಮೀಕ್ಷೆಯ ಸಾಧಕ ಭಾದಕಗಳ ಬಗ್ಗೆ ಸಮಾಲೋಚನೆ ನಡೆಸಿದ ನಂತರ, ಮರು ಸಮೀಕ್ಷೆಗೆ ಆದೇಶ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (ಸಿ.ಡಿ.ಪಿ.ಓ) ಕಚೇರಿಯಲ್ಲಿ ಫಲಾನುಭವಿಗಳಿಗೆ ಸೆಪ್ಟೆಂಬರ 27 ರ ತನಕ ಅರ್ಜಿಯನ್ನು ಕೊಡಲಾಗಲಿಲ್ಲ. ಜಿಲ್ಲಾ ಮಟ್ಟದ ಸಮಿತಿಗೆ ಈ ಸಮಿಕ್ಷೆಯ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಈ ವರೆಗೆ ತಲುಪಿಲ್ಲ. ಸಮಿಕ್ಷೆ ವೇಳೆ ಕೇಳುತ್ತಿರುವ ದಾಖಲೆಗಳ ವಿಚಾರದಲ್ಲಿ ಸ್ಪಷ್ಟತೆಯಿಲ್ಲ. ಸಮಿಕ್ಷೆ ನಡೆಸುವ ಬಗ್ಗೆ ಆಗಲೀ ಮಾಜಿ ದೇವದಾಸಿಯರ ಮರು ಸಮಿಕ್ಷೆ ಬಗ್ಗೆಯಾಗಲಿ ಸರಕಾರ ಮಾಜಿ ದೇವದಾಸಿ ಪುರ್ನವಸತಿ ಹೋರಾಟಗಾರರ ಸಂಘಟನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಸಾಧಕ ಭಾದಕಗಳ ಬಗ್ಗೆ ಚರ್ಚಿಸಬೇಕಾಗಿತ್ತು.
ಈ ಸುದ್ಧಿ ಓದಿದ್ದೀರಾ? ಹುಬ್ಬಳ್ಳಿ | ಅಪರಿಚಿತ ಮಹಿಳೆಯ ಶವ ಪತ್ತೆ
ಈ ಕುರಿತು ಜಿಲ್ಲಾ ಸಮಿಕ್ಷಕರಿಗೆ ಸಮಗ್ರ ಮಾಹಿತಿಯ ಕೊರತೆಯಿದ್ದು, ಅವರಿಗೆ ತರಬೇತಿ ನೀಡಬೇಕಾಗಿತ್ತು. ಸರಕಾರ ಮಾಜಿ ದೇವದಾಸಿಯರ ಮತ್ತು ಸಮಿಕ್ಷೆಗೆ 45 ವರ್ಷ ಮೇಲ್ಪಟ್ಟವರನ್ನು ಮಾತ್ರ ಪರಿಗಣಿಸುವ ನಿರ್ಧಾರವನ್ನು ಕೈಬಿಟ್ಟು 35 ವರ್ಷದವರನ್ನು ಆದಿಯಾಗಿ ಪರಿಗಣಿಸಬೇಕು. ಮರಣ ಹೊಂದಿದ ಮಾಜಿ ದೇವದಾಸಿಯರ ಸಂಬಂಧಿಗಳ ದಾಖಲೆಗಳನ್ನು ಹೊಂದಿಸಿಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ಫಲಾನುಭವಿಗಳ ಅರ್ಜಿಯಲ್ಲಿ ವಂಶವೃಕ್ಷ, ಆದಾಯ, ಮತ್ತು ಜಾತಿ ಪ್ರಮಾಣ ಪತ್ರ, ವಾರಸಾ ಇತ್ಯಾದಿಗಳನ್ನು ಸಲ್ಲಿಸಬೇಕು. ಆದರೆ ಮಾಜಿ ದೇವದಾಸಿಯರು ಅನಕ್ಷರಸ್ಥರಿದ್ದು ಎಲ್ಲಾ ದಾಖಲೆಗಳ ಕ್ರೂಢಿಕರಣಕ್ಕೆ ಸುಮಾರು ದಿನಗಳು ಬೇಕಾಗುತ್ತದೆ. ಮರು ಸಮೀಕ್ಷೆಗೆ ಹೆಚ್ಚಿನ ಕಾಲಾವಕಾಶ ಅಗತ್ಯವಿರುತ್ತದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಚಲವಾದಿ, ಶಂಕರ ಅಜ್ಮನೆ, ಮಂಜುನಾಥ ಕೊಂಡಪಲ್ಲಿ ಸೇರಿದಂತೆ ಸಂಘಟಕರು, ಮಾಜಿ ದೇವದಾಸಿಯರು ಇದ್ದರು.





