ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮುಖ್ಯ ಕಛೇರಿ ಎದುರು ಕರ್ನಾಟಕ ಚಕ್ರವರ್ತಿ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿಯ ಆಳೆತ್ತರದ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ಹುಬ್ಬಳ್ಳಿಯ ವೀರ ಪುಲಿಕೇಶಿ ಕನ್ನಡ ಬಳಗದ ವತಿಯಿಂದ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹಾಗೂ ಮಹಾಪೌರರಾದ ಜ್ಯೋತಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ದಕ್ಷಿಣಾ ಪಥೇಶ್ವರ ಬಿರುದಾಂಕಿತನಾದ ಮತ್ತು ಕನ್ನಡ ನಾಡು ನುಡಿಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು, ಉತ್ತರ ಭಾರತದವರಿಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ, ಜಗತ್ತಿನ ಚಕ್ರವರ್ತಿ ಎಂದು ಬೀಗುತ್ತಿದ್ದ ಹತ್ತು ಅಲೆಕ್ಸಾಂಡರ್ ಗೂ ಮೀರಿದ, ಅಪ್ರತಿಮ ಪರಾಕ್ರಮಿ, ಧರ್ಮ ರಕ್ಷಕ, ಹಿಂದೂ ಸಾಮ್ರಾಟ ವೀರ ಪುಲಿಕೇಶಿಯ ಆಳೆತ್ತರದ ಪ್ರತಿಮೆಯ ಅನಾವರಣ ಮಾಡಬೇಕೆಂದು ನಾಡ ಜನತೆಯ ಪರವಾಗಿ ಒತ್ತಾಯಿಸುತ್ತಿದ್ದೇವೆ ಎಂದು ಮನವಿಯಲ್ಲಿ ಕಾಣಿಸಲಾಗಿದೆ.
ಇದನ್ನೂ ಓದಿ ಧಾರವಾಡ | ಕರೋಕೆ ಸಂಗೀತಗಾರರ ಪ್ರಯತ್ನ, ವಿಶ್ವಾಸವನ್ನು ನಾವೆಲ್ಲ ಮೆಚ್ಚಲೆಬೇಕು: ಸತೀಶ ತುರಮರಿ
ವೀರ ಪುಲಿಕೇಶಿ ಕನ್ನಡ ಬಳಗದ ಅಧ್ಯಕ್ಷ ವೆಂಕಟೇಶ್ ಮರೆಗುದ್ದಿ, ಎಸ್ ಕೆ ಆದಪ್ಪನವರ, ಡಾ. ಲಿಂಗರಾಜ ಅಂಗಡಿ, ಡಾ. ಡಿ ಟಿ ಪಾಟೀಲ್, ವಿದ್ಯಾ ವಂಟಮುರಿ, ಸುನಿತಾ ಹುಬ್ಳೀಕರ, ವೀರಣ್ಣ ಹುಬ್ಳೀಕರ, ಮನೋಹರ ಗೋಸಿ, ಚಳ್ಳಪ್ಪ ಜೈನರ ಇದ್ದರು. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಮಹಾಪೌರರು ಪ್ರತಿಮೆ ಸ್ಥಾಪನೆ ಮಾಡಲು ಭರವಸೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.





