ಬೈಕ್ ಸವಾರನನ್ನು ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದ ಯುವಕರ ಗುಂಪೊಂದು ಅಡ್ಡಗಟ್ಟಿ ಜಗಳ ಸೃಷ್ಟಿಸಿ ಹಲ್ಲೆ ನಡೆಸಿರುವ ಘಟನೆ ನಗರದ ಗೋಕುಲ ರೋಡ್ ಮಚಲಿ ಹೋಟೆಲ್ ಹತ್ತಿರ ನಡೆದಿದೆ.
ಮಾಹಿತಿಯ ಪ್ರಕಾರ, ಬೈಕ್ ಸವಾರನ ಕೈಯಲ್ಲಿದ್ದ ಮೊಬೈಲ್ ಎಗರಿಸಲು ಯುವಕರ ಗುಂಪು ಯತ್ನಿಸಿದ್ದು, ಈ ವೇಳೆ ಗಲಾಟೆ ಉಂಟಾಗಿದೆ. ಘಟನೆಯ ಸಮಯದಲ್ಲಿ ಸ್ಥಳದಲ್ಲಿ ಹಾದುಹೋಗುತ್ತಿದ್ದ ಸ್ಥಳೀಯರು ಮಧ್ಯ ಪ್ರವೇಶಿಸಿ, ಆ ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತದನಂತರ ಬೈಕ್ ಸವಾರ ಪೊಲೀಸ್ ಸ್ಟೇಷನ್ ಹೋಗುವುದಾಗಿ ಅಲ್ಲಿಂದ ಹೋದ ಬೆನ್ನೆಲೆ ಆ ಯುವಕರ ಗುಂಪು ಆ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸುದ್ಧಿ ಓದಿದ್ದೀರಾ? ಹುಬ್ಬಳ್ಳಿ | ಗಬ್ಬು ನಾರುತ್ತಿದೆ ಕೆಂಪಕೆರೆ ಉದ್ಯಾನವನ; ಎಚ್ಚೆತ್ತುಕೊಳ್ಳುವರೇ ಅಧಿಕಾರಿಗಳು?
ಈ ಘಟನೆ ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.





