ಹುಬ್ಬಳ್ಳಿ | ತಾಯಿಯ ಮನಸ್ಸು ಎಷ್ಟೇ ಸುಟ್ಟರೂ ಮಕ್ಕಳ ಆನಂದದಲ್ಲಿರುತ್ತಾಳೆ: ಡಾ. ಸುಪ್ರೀಯಾ ಮಲಶೆಟ್ಟಿ

Date:

ತಾಯಿಯ ಮನಸ್ಸು ಎಷ್ಟೇ ಸುಟ್ಟರೂ ಮಕ್ಕಳ ಆನಂದದಲ್ಲಿರುತ್ತಾಳೆ. ತಾಯಿಯಿದ್ದಾಗ ಭಗವದ್ಗೀತೆಯೂ ಬೇಡ ಅಂತಾ ಪಿ. ಲಂಕೇಶ್. ಮೊಬೈಲ್, ಟಿವಿ ಎನ್ನುವ ಯಂತ್ರಗಳು ಕ್ಷಣುಕ ಸುಖ ಕೊಟ್ಟರೂ ಪ್ರಯೋಜನವಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅವ್ವ ಸೇವಾ ಟ್ರಸ್ಟ್‌ನ ಸಂಯುಕ್ತ  ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಅವ್ವನೆಂಬ ಅಗೋಚರ ಶಕ್ತಿ’ ಎಂಬ ವಿಷಯದ ಮೇಲೆ ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಎಸ್‌ಜೆಎಂವಿಎಸ್ ಮಹಾವಿದ್ಯಾಲಯದ ಸಹಪ್ರಾದ್ಯಾಪಕಿ ಡಾ. ಸುಪ್ರೀಯಾ ಮಲಶೆಟ್ಟಿ ಮಾತನಾಡಿದರು.

‘ಅವ್ವನೆಂಬ ಅಗೋಚರ ಶಕ್ತಿ’ ವಿಚಾರವಾಗಿ ಮಾತನಾಡುತ್ತಾ, ತಾಯಿಯ ಮನಸ್ಸು ಎಷ್ಟೇ ಸುಟ್ಟರೂ ಮಕ್ಕಳ ಆನಂದದಲ್ಲಿರುತ್ತಾಳೆ. ತಾಯಿಯಿದ್ದಾಗ ಭಗವದ್ಗೀತೆಯೂ ಬೇಡ ಅಂತಾ ಪಿ. ಲಂಕೇಶ್. ಮೊಬೈಲ್, ಟಿವಿ ಎನ್ನುವ ಯಂತ್ರಗಳು ಕ್ಷಣುಕ ಸುಖ ಕೊಟ್ಟರೂ ಪ್ರಯೋಜನವಿಲ್ಲ. ತಾಯಿಯನ್ನು ಕಳೆದುಕೊಂಡಾಗಲೇ ಅವಳ ಮಹತ್ವ ತಿಳಿಯುತ್ತದೆ. ತಾಯಿ ಹೋರಮೇಲೆ ಅದೆಷ್ಟೊ ಕುಟುಂಬಗಳು ಕಳಚಿ ಬಿದ್ದಿರುವ ಉದಾಹರಣೆಗಳಿವೆ. ಪ್ರಸ್ತುತದಲ್ಲಿ ಎಲ್ಲವೂ ಇದೆ. ಆದರೆ; ಸಮಯವಿಲ್ಲ. ಮೊಬೈಲ್ ಬಂದಮೇಲೆ ಜಗತ್ತು ಎಷ್ಟೋ ಬದಲಾಗಿದೆ. ನಿಸ್ವಾರ್ಥತೆಯ ಮನಸ್ಸು ತಾಯಿಯಲ್ಲಿ ಕಾಣಲು ಮಾತ್ರ ಸಾಧ್ಯ ಎನ್ನುತ್ತಾ ಭಾವುಕರಾದರು. ಇರುವತನಕ ತಾಯಿಯನ್ನು ಎಂದಿಗೂ ಮರೆಯಬಾರದು. ಹೆಣ್ಣು ಮಕ್ಕಳು‌ ಕೂಡಾ ಮದುವೆ ಆದಮೇಲೆ ಅತ್ತೆಯನ್ನು ಅಮ್ಮ ಎಂಬ ಭಾವದಿಂದ ಬದುಕಬೇಕು. ತಂದೆ ತಾಯಿಗಳಿಗೆ ಗೌರವಕೊಟ್ಟು ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಕೊಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಅವ್ವ ಎಂದರೇನೆ ಒಂದು ರೀತಿಯ ಸಂತೋಷ. ವೀರಯೋಧನ‌ ಮಗಳಾಗಿರುವುದು ನನ್ನ ಹೆಮ್ಮೆ. ಶಿಕ್ಷಣದಿಂದಲೇ ಏನಾದರೂ ಸಾಧಿಸಿಲು ಸಾಧ್ಯ.‌ ವಿದ್ಯಾರ್ಥಿಗಳು ಕಲಿಸಿದ ಶಾಲೆ ಮತ್ತು ಹೆತ್ತವರ ಹೆಸರು ತರಬೇಕು. ಶಿಕ್ಷಕರು ಮಕ್ಕಳನ್ನು ಅದ್ಭುತ ಪ್ರಜೆಗಳನ್ನಾಗಿಸಲು ಪ್ರಯತ್ನ ಪಡುತ್ತಾರೆ. ನಮ್ಮ ಸಾಧನೆಯನ್ನು‌ ನೋಡಿ ನಿಮ್ಮ ಅಪ್ಪ ಅಮ್ಮ ಯಾರು? ಎಂದು ಕೇಳುವಂತಾಗಬೇಕು. ಇತ್ತಿಚೆಗೆ ಮೊಬೈಲ್ ನೋಡಿ ಹತ್ತವರಿಗೆ, ಗುರುಗಳಿಗೆ ಗೌರವ ಕೊಡುವ ಪ್ರವೃತ್ತಿ ಕಡಿಮೆ ಆಗುತ್ತಿದೆ ಎಂದರು. ಕಷ್ಟಪಟ್ಟು ಓದಿದರೆ ಮುಂದೆ ಬರುತ್ತೀರಿ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಸಂತ ಹೊರಟ್ಟಿ ಮಾತನಾಡಿ, ಗೌರಮ್ಮ ಹೊರಟ್ಟಿ ಜನಿಸದೆ ಇದ್ದಿದ್ದರೆ ಬಸವರಾಜ ಹೊರಟ್ಟಿ ಅಂತಹ ನಾಯಕರು ಹುಟ್ಟುತ್ತಿರಲಿಲ್ಲ. ಮತ್ತು ಅವರು ರಾಜಕೀಯಕ್ಕೆ ಬರುವ ಉದ್ದೇಶವೇ ಇರಲಿಲ್ಲ. ನಮಗೆ ಸಿಕ್ಕ ಶಿಕ್ಷಣ, ಗೌರವ ಇವೆಲ್ಲ ನಮ್ಮ ಅಜ್ಜಿಯ ಕೊಡುಗೆಯಾಗಿದೆ. ಎಲ್ಲರೂ ತಾಯಿಯಾಗಲಿ, ಅಜ್ಜಿಯನ್ನಾಗಲಿ ನಿರ್ಲಕ್ಷ್ಯ ಮನೋಭಾವದಿಂದ ನೋಡಬೇಡಿ. ಅವರ ಮಾತನ್ನು ಕೇಳಿರಿ. ಅವರು ಅನುಭವದಿಂದ ಹೇಳುತ್ತಿರುತ್ತಾರೆ. ಅವ್ವ ಟ್ರಸ್ಟ್ ಒಳ್ಳೆಯ ಕಾರ್ಯ ಮಾಡುತ್ತಿದೆ. ಎಲ್ಲರನ್ನೂ ಗೌರವಿಸುವ ಗುಣ ನಮ್ಮಲ್ಲಿ ಬರಬೇಕು ಎಂದರು.

ಲಿಂಗರಾಜ ಅಂಗಡಿ ಮಾತನಾಡಿ, ತಾಯಿಂದಿರು ತಮ್ಮ ಜೀವ ಒತ್ತೆಯಿಟ್ಟು ಮಕ್ಕಳನ್ನು ಸಲಹುತ್ತಾಳೆ. ಮತ್ತು ಹೆಂಡತಿಯು ಕೂಡಾ ತಾಯಿ ಇದ್ದಂತೆಯೆ. ಆದ್ಧರಿಂದ ಹೆಣ್ಷು ಮಕ್ಕಳ ಮನಸ್ಸನ್ನು ನೋಯಿಸಬಾರದು. ಕೆಟ್ಟ ಆಲೋಚನೆಗಳು ಇರಬಾರದು.

ಸನ್ಮಾನ ಸ್ವೀಕರಿಸಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಜಯಶ್ರೀ ಶಿವಾನಂದ ತಾಯಿ ಕೊಡುವ ಮೌಲ್ಯ ಭಗವದ್ಗೀತೆ, ಕುರಾನ್, ಬೈಬಲ್ ಯಾವ ಗ್ರಂಥವೂ ಕೊಡುವುದಿಲ್ಲ. ಒಂದು ದಿನದ ಮದರ್ಸ್ ಡೇ ಬೇಡ. ತಾಯಂದಿರು ಯಾವತ್ತೂ ಸುಳ್ಳು ಹೇಳು, ಕಳ್ಳತನ ಮಾಡಲು ಹೇಳುವುದಿಲ್ಲ. ನನಗೆ ಕೊಟ್ಟ ವಿದ್ಯೆ ಶಾಲೆಯಿರಬಹುದು. ಆದರೆ ತಾಯಿ ಜೀವನದ ಪಾಠ ಕೊಟ್ಟಿದ್ದಾಳೆ.‌ ಕುಂಬಾರ ಮಡಿಕೆ ಮಾಡುವ ರೀತಿಯಲ್ಲಿ ತಾಯಿ ತಿದ್ದುತ್ತಾಳೆ. ನೀವೆಷ್ಟೆ ಎತ್ತರಕ್ಕೆ ಹೋದರೂ, ಯಾವುದೇ ಹುದ್ದೆಯಲ್ಲಿದ್ದರೂ ತಾಯಿ ಬಾಲ್ಯದಲ್ಲಿ ಕೊಟ್ಟಿರುವ ನೈತಿಕ‌ ಬುತ್ತಿಗಂಟು ಮಾತ್ರ ಕೈಹಿಡಿಯುತ್ತದೆ. ಯಶಸ್ಸನ್ನು‌ ಕಾಣಬೇಕಾದರೆ ತ್ಯಾಗದ ಮನೋಭಾವ ಇರಬೇಕು. ಹೆರಿಗೆಯ ನೋವಿನ ಮುಂದೆ ಯಾವ ನೋವು ಇಲ್ಲ. ಆದರೂ ತಾಯಿ ಮಕ್ಕಳನ್ನು‌ ಪಡೆಯಲು ಖುಷಿಪಡುತ್ತಾಳೆ. ಮಾತೃಪ್ರಧಾನ ಸಮಾಜದಲ್ಲಿ ಅನ್ಯೊನ್ಯತೆ ಇರುತ್ತದೆ ಎಂದು ಒಂದು ಸಂಶೋಧನೆ ಹೇಳುತ್ತದೆ ಎಂದು ಹೇಳಿದರು.

ಇದನ್ನೂ ಓದಿ ಧಾರವಾಡ | ಮಹಾ ಪರಿನಿರ್ವಾಣ ದಿನದ ನಿಮಿತ್ತ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ

ಶಶಿ ಸಾಲಿ, ವಿದ್ಯಾ ವಂಟಮುರಿ ವೇದಿಕೆ ಮೇಲಿದ್ದರು. ಧಾರವಾಡಶೆಟ್ಟರ್ ವಂದಿಸಿದರು. ಕೌಜಲಗಿ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...