ಇಂಥವರೇ ಓಟ್ ಹಾಕಬೇಕು ಎನ್ನುವ ತೀರ್ಮಾನ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ. ಈ ದೇಶದ ಮೂಲನಿವಾಸಿಗಳ ನಾಗರೀಕತ್ವವನ್ನೇ ಕಸಿದುಕೊಳ್ಳುವ ವಿರುದ್ಧ ಬೃಹತ್ ಆಂದೋಲನದ ಅವಶ್ಯವಿದೆ ಎಂದು ಚಿಂತಕ ಶಿವಸುಂದರ ಹೇಳಿದರು.
ಮೇ ಸಾಹಿತ್ಯ ಬಳಗ, ಸಂವಿಧಾನ ಸುರಕ್ಷಾ ಸಮಿತಿಯ ವತಿಯಿಂದ ಎಸ್ಐಆರ್ ಪೌರತ್ವದ ಪ್ರಶ್ನೆ: ಪ್ರಭುತ್ವದ ಹುನ್ನಾರಗಳು ವಿಷಯದ ಕುರಿತು ಹುಬ್ಬಳ್ಳಿಯ ಅಕ್ಕನ ಬಳಗದಲ್ಲಿ ಧಾರವಾಡದ ಸಮುದಾಯ ಸಂಸ್ಥೆ, ರೈತ, ಕಾರ್ಮಿಕ, ದಲಿತ, ಮಹಿಳಾ, ಸೌಹಾರ್ದ, ಕನ್ನಡಪರ, ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ, ಸಂವಾದ ಗೋಷ್ಠಿಯಲ್ಲಿ ಮಾತನಾಡಿದರು.
ಈ ದೇಶದ ಬುದ್ಧಿಜೀವಿಗಳಲ್ಲಿ, ರಾಜಕಾರಣಿಗಳಲ್ಲಿ ಕನಿಷ್ಠ ಮಾನವೀಯತೆ ಇಲ್ಲದಿರುವುದು ದುರಂತ. ಹೀಗಾಗಿ ಜನರೇ ಜನರ ಪರವಾಗಿ ನಿಲ್ಲಬೇಕಿದೆ. ಹಿಂದೆ ಸ್ಥಿತಿವಂತರಿಗೆ ಮಾತ್ರ ಓಟ್ ಮಾಡುವ ಹಕ್ಕಿತ್ತು. ಅದು ಸಂವಿಧಾನದ ಮೂಲಕ ಬದಲಾಗಿದೆ. ಸ್ವಾತಂತ್ರ್ಯ ಎಂದರೆ ಎಲ್ಲ ಬಗೆಯ ಗುಲಾಮಗಿರಿಯಿಂದ ಹೊರಬರುವುದು. ಹುಟ್ಟಿನಿಂದ ಏನೇ ಆಗಿದ್ದರೂ ಹುಟ್ಟಿನ ಆಧಾರದಲ್ಲಿ ತಾರತಮ್ಯ ಮಾಡಬಾರದು. ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾವೆಲ್ಲರೂ ಸಮಾನರು ಎಂಬ ಸಂವಿಧಾನ ಬಂತು. ಎಸ್ಐಆರ್ ಎಂದರೆ ಕೇವಲ ಮತಪಟ್ಟಿ ಪರಿಷ್ಕರಣೆ ಮಾತ್ರವಲ್ಲ. ಈ ದೇಶದ ನಾಕರೀಕರ ಪರಿಶೀಲನೆಯಾಗಿದೆ. ಎಸ್ಐಆರ್ ರದ್ದಾಗಬೇಕು. ಒಂದು ವೇಳೆ ಜಾರಿಯಾದರೆ ನಮ್ಮನ್ನು ರದ್ದು ಮಾಡುತ್ತದೆ. ಆದ್ಧರಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಇದೇ ವೇಳೆ ಮತ್ತೋರ್ವ ಚಿಂತಕ ಗಣೇಶ ದೇವಿ ಮಾತನಾಡಿ, ಸಂವಿಧಾನ ವಿರೋಧಿಗಳ ತಲೆಯಲ್ಲಿ ಸಂವಿಧಾನ ವಿರೋಧಿ ಯೋಚನೆ ಮಾತ್ರವಿಲ್ಲ. ಮತ್ತೇನೋ ಇದೆ ಎಂಬ ಸತ್ಯವನ್ನು ಅರಿಯಬೇಕಿದೆ. ಒಟ್ಟಾರೆಯಾಗಿ ಎಸ್ಐಆರ್ ಸಂವಿಧಾನ ಭಾಹಿರವಾಗಿದೆ ಎಂದು ಹೇಳುತ್ತಾ ಡಿಲಿಮಿಟೇಶನ್ ಕುರಿತು ವಿವರಿಸಿದರು.
ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್ಐಆರ್ನ ಮೂಲಕ ನಡೆಯುತ್ತಿರುವ ಪ್ರಭುತ್ವದ ಹುನ್ನಾರಗಳನ್ನು ನಾವು ಅರ್ಥೈಸಕೊಳ್ಳಬೇಕಿದೆ ಎಂದರು.
ಇದನ್ನೂ ಓದಿ ದಾವಣಗೆರೆ | ಅನಾಮಧೇಯ ವಯೋವೃದ್ಧರನ್ನು ಆರೈಕೆ ಮಾಡಿ ಕುಟುಂಬಕ್ಕೆ ಒಪ್ಪಿಸಿದ ಪೊಲೀಸ್ ಸಿಬ್ಬಂದಿ
ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟಕರು, ಮಹಿಳೆಯರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಹಲವರು ಭಾಗವಹಿಸಿದ್ದರು. ಮೈಲಾರಲಿಂಗ ಕಬ್ನೂರ ನಿರೂಪಿಸಿದರು.





