ಅಸ್ಪೃಶ್ಯತೆಯ ಜಾತಿ ವ್ಯವಸ್ಥೆಯಲ್ಲಿ ಕೆಲವು ನಿರ್ದಿಷ್ಟ ಸಮುದಾಯಗಳನ್ನು “ಕೀಳು” ಎಂದು ಪರಿಗಣಿಸಿ, ಅವರೊಂದಿಗೆ ಸಾಮಾಜಿಕ ಸಂಪರ್ಕವನ್ನು ನಿರಾಕರಿಸುವುದು ಹಾಗೂ ಶೋಷಣೆ ಮಾಡುತ್ತಿರುವುದನ್ನು ನಾವು ಎಲ್ಲೆಡೆ ಗಮನಿಸುತ್ತಿರುವುದನ್ನು ನೋಡುತ್ತಿದ್ದೇವೆ. ಹಾಗೆಯೇ, ದೇವಾಲಯಗಳು, ಬಾವಿಗಳು, ಮತ್ತು ಇತರ ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಲು ಅವಕಾಶ ನಿರಾಕರಿಸುವುದನ್ನು ಹಿಂದಿನ ಕಾಲದಿಂದಲೂ ಕೇಳುತ್ತ,ನೋಡುತ್ತಾ ಬಂದಿದ್ದೇವೆ.

ಆದೇ ರೀತಿಯಲ್ಲಿ ಕುಡಿಯುವ ಬಾವಿ ನೀರಿನ ಸಮಸ್ಯೆ ಎದುರಾಗಿ ಸುಮಾರು ಐದು ವರ್ಷ ಕಳೆದರೆ ಶತಮಾನೋತ್ಸವ ಈ ನಂದಿ ಎಂಬ ಗ್ರಾಮಕ್ಕೆ ಆಗುತ್ತದೆ.

ಬೇರೆ ಸಮುದಾಯದಕ್ಕೆ ಸೇರಿದ ಕುಟುಂಬ ಒಂದು “ದಲಿತರು ಸಮುದಾಯದವರು ಬಳಸುತ್ತಿದ್ದ ಬಾವಿಗೆ ಮಲಮೂತ್ರ ವಿಸರ್ಜನೆಯ ಕಲುಷಿತವಾಗಿರುವ ನೀರನ್ನು ಬಾವಿ ಒಳಗೆ ಬಿಡುತ್ತಿರುವುದರ ಕುರಿತು ಈ ಗ್ರಾಮದ ಸಮಸ್ಯೆ ಕುರಿತು ಸೆಪ್ಟೆಂಬರ್ 12ರಂದು ಈದಿನ.ಕಾಮ್ ನಲ್ಲಿ ವಿಡಿಯೋ ಸುದ್ದಿ ಪ್ರಕಟಿಸಲಾಗಿತ್ತು”. ಆ ಗ್ರಾಮದ ವಿಡಿಯೋ ಸುದ್ದಿ ಕುರಿತು ಸಮಾಜ ಕಲ್ಯಾಣ ಇಲಾಖೆಯಿಂದ ಮರು ದಿನವೇ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು, “ಐದು ದಿನಗಳಲ್ಲಿ ನಂದಿ ಗ್ರಾಮದ ಸಮಸ್ಯೆ ಬಗ್ಗೆ ಗಮನ ಅರಿಸಿ ಕುಂದು ಕೊರತೆ ಬಗ್ಗೆ ಮಾಹಿತಿ ಪಡೆದು ತಿಳಿಸುತ್ತೇವೆಂದು ತಿಳಿಸಿದ್ದರು.

ತರೀಕೆರೆ ತಾಲ್ಲೂಕು ನಂದಿ ಗ್ರಾಮದ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಕುಡಿಯುವ ನೀರಿನ ಬಾವಿಯನ್ನು ಇದ್ದು, ಸದರಿ ಬಾವಿಯನ್ನು ಅದೇ ಗ್ರಾಮದ ಸವರ್ಣೀಯರು ಅತಿಕ್ರಮ ಮಾಡಿಕೊಂಡಿರುವ ಜೊತೆಗೆ ಬಾವಿಯ ಪಕ್ಕದಲ್ಲಿಯೇ ಶೌಚಾಲಯವನ್ನು ಕಟ್ಟಿದ್ದು, ಬಾವಿಯ ನೀರು ಕಲಿಷಿತ ಮಾಡಿದಲ್ಲದೇ ಬಾವಿಯನ್ನು ಮಣ್ಣಿನಿಂದ ಮುಚ್ಚಿರುತ್ತಾರೆ ಎಂಬ ವಿಷಯದ ಬಗ್ಗೆ ಉಲ್ಲೇಖಿತ ದಿನಾಂಕದಲ್ಲಿ ಈ ದಿನ.ಕಾಮ್ ಟ್ವಿಟರ್ನಲ್ಲಿ ಪ್ರಕಟವಾಗಿರುತ್ತದೆ.

ಆದರಂತೆ ಸದರಿ ವಿಷಯದ ಬಗ್ಗೆ ಈಗಾಗಲೇ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿನ ನೊಂದ ಸಂತ್ರಸ್ಥರಿಗೆ ರೂ:8.00ಲಕ್ಷಗಳ ಪರಿಹಾರ ಧನವನ್ನು ಮಂಜೂರು ಮಾಡಿಲಾಗಿದೆ. ಹಾಗೂ ಬಾವಿಯ ಜೀರ್ಣೋದಾರಕ್ಕಾಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ತರೀಕೆರೆರವರಿಂದ ಬಾವಿಯ ಜೀರ್ಣೋದಾರಕ್ಕಾಗಿ ತಗಲುವ ರೂ:5.95ಲಕ್ಷಕ್ಕೆ ಅಂದಾಜು ಪಟ್ಟಿಯನ್ನು ತಯಾರಿಸಿ ಮಾನ್ಯ ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು ರವರಿಂದ ಅನುಮೋಧನೆಯನ್ನು ಪಡೆಯಲಾಗಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ಬಾವಿಯ ಜೀರ್ಣೋದಾರವನ್ನು ಕೈಗೊಳ್ಳಲಾಗುವುದು ಎಂಬ ಅಂಶವನ್ನು ತಮ್ಮ ಅವಗಾಹನೆಗೆ ಸಲ್ಲಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ
ವರ್ಷಗಟ್ಟಲೇಯಿಂದ ಸಮಸ್ಯೆ ಎದುರಿಸುತ್ತಿದ್ದ ನಂದಿ ಗ್ರಾಮದ ಸಮಸ್ಯೆಗೆ ಅಂತ್ಯ ಖಂಡಿದೆ. ದಲಿತ ಸಮುದಾಯಕ್ಕೆ ಸೇರಿದ ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ.





