ಉಡುಪಿ | ರಾಷ್ಟ್ರ ಪ್ರಶಸ್ತಿ ಪಡೆದರೂ ರಾಜ್ಯ ಪ್ರಶಸ್ತಿಗೆ ನಿಲುಕದ ಕಲಾವಿದ ಲಿಯಾಕತ್ ಅಲಿ

Date:

ಉಡುಪಿ ನಗರದ ಕಲಾ ಪ್ರೇಮಿಗಳಿಗೆ ಚಿರಪರಿಚಿತವಾದ ಸ್ಥಳವೆಂದರೆ ಅದುವೇ ಇನಾಯತ್‌ ಆರ್ಟ್‌ ಗ್ಯಾಲರಿ. ಬಣ್ಣಗಳ ಲೋಕದಲ್ಲಿ ಮನಸ್ಸು ತೇಲಾಡುವಂತೆ ಮಾಡುವ ಈ ಗ್ಯಾಲರಿಯಲ್ಲಿ ಜೀವಂತವಾಗಿರುವ ಕಲಾ ಪ್ರಪಂಚದ ಹಿಂದಿನ ಸ್ಫೂರ್ತಿಯೇ ಲಿಯಾಕತ್‌ ಅಲಿ. ಅಂಗವೈಕಲ್ಯವಿದ್ದರೂ ಸಹ ತಮ್ಮ ಕಲಾತ್ಮಕ ಶಕ್ತಿಯ ಮೂಲಕ ಚಿತ್ರಕಲೆಯಲ್ಲಿ ಅಸಾಧಾರಣ ಪ್ರತಿಭೆಯನ್ನು ಮೂಡಿಸಿರುವ ಅವರು, ಕಲೆ ಎನ್ನುವುದು ಕೇವಲ ಪ್ರತಿಭೆಯಲ್ಲ, ಅದು ಶ್ರಮ ಮತ್ತು ನಂಬಿಕೆಯ ಫಲವೆಂದು ತಮ್ಮ ಜೀವನದಿಂದ ತೋರಿಸಿದ್ದಾರೆ.

WhatsApp Image 2025 10 25 at 11.14.45 AM 1

ಲಿಯಾಕತ್ ಅಲಿ ಅವರ ಕಲಾ ಪಯಣ ಬಾಲ್ಯದಲ್ಲೇ ಆರಂಭವಾಯಿತು. ತಮ್ಮ ತಂದೆಯಿಂದಲೇ ಕಲಿತ ಚಿತ್ರಕಲೆ ಅವರನ್ನು ಜೀವನದ ಭಾಗವಾಯಿತು. ಚಿತ್ರಕಲೆ ಇವರಿಗೆ ಕೇವಲ ಹವ್ಯಾಸವಲ್ಲ ಅದು ಅವರ ಉಸಿರು. ಬಣ್ಣಗಳಲ್ಲಿ ಅವರು ಬದುಕಿನ ಕಥೆಗಳನ್ನು ಕಟ್ಟುತ್ತಿದ್ದಾರೆ.

1979ರಲ್ಲಿ ಸಿಂಡಿಕೇಟ್‌ ಬ್ಯಾಂಕ್ ಗೆ ಆರ್ಟಿಸ್ಟ್‌ ಆಗಿ ಸೇರಿದ ಲಿಯಾಕತ್ ಅಲಿ, ಬ್ಯಾಂಕ್‌ನ ವಿಶೇಷ ಸಂಚಿಕೆಗಳಿಗೆ ವಿನ್ಯಾಸ ಮಾಡುವ ಮೂಲಕ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಕೆಲಸದ ಜೊತೆಗೆ ಅವರು ಬಡ ಮಕ್ಕಳಿಗೆ ಚಿತ್ರಕಲೆಯ ತರಬೇತಿ ನೀಡುವ ಸಾಮಾಜಿಕ ಹೊಣೆಗಾರಿಕೆಯನ್ನು ಸಹ ಕೈಗೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈದಿನ.ಕಾಮ್‌ ಜೊತೆ ಮಾತನಾಡಿದ ಅವರು, ಕಲೆಯ ಆಸಕ್ತಿಯೇ ಮೊಬೈಲ್‌ನ ಕಾಲದಲ್ಲಿ ನಿಧಾನವಾಗಿ ಕುಗ್ಗಿದೆ. ಆದರೆ ನಾವು ಬಡ, ನಿರ್ಗತಿಕ, ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದೇವೆ ಎಂದು ಹೇಳಿದರು.

ಅವರ ಕಲೆಯು ಕೇವಲ ಚಿತ್ರದಲ್ಲಿ ಸೀಮಿತವಲ್ಲ, ಅದು ಸೇವೆಯ ರೂಪದಲ್ಲೂ ಕಾಣಿಸುತ್ತದೆ. ಉಚಿತವಾಗಿ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಚಿತ್ರಕಲೆ ಕಲಿಸುತ್ತಿರುವ ಅವರು, ಪ್ರಸ್ತುತ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಅವರೊಂದಿಗೆ ಅವರ ಪತ್ನಿ ಹಾಗೂ ಮೂವರು ಟೀಚರ್‌ ಗಳು ಸಹಕಾರ ನೀಡುತ್ತಿದ್ದಾರೆ.

ಕಳೆದ 27 ವರ್ಷಗಳಿಂದ ನಿರಂತರವಾಗಿ ಕಲಾ ಪ್ರದರ್ಶನಗಳನ್ನು ಆಯೋಜಿಸುತ್ತಿರುವ ಲಿಯಾಕತ್ ಅಲಿ, ಪ್ರತಿ ವರ್ಷ ಹೊಸ ಶೀರ್ಷಿಕೆ, ಹೊಸ ಕಲ್ಪನೆ, ಹೊಸ ಬಣ್ಣದ ಲೋಕವನ್ನು ಕಲಾಭಿಮಾನಿಗಳ ಮುಂದಿಡುತ್ತಿದ್ದಾರೆ. ಅವರ ಚಿತ್ರಗಳಲ್ಲಿ ಪ್ರಕೃತಿ, ಮಾನವೀಯತೆ, ಸಮಾಜದ ನೋವು ನಗುವುಗಳು ಜೀವಂತವಾಗಿ ಎದ್ದು ಕಾಣುತ್ತವೆ.

WhatsApp Image 2025 10 25 at 11.14.42 AM 1

1990ರಲ್ಲಿ ಆಗಿನ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಮನ್ ಅವರ ಕೈಯಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಗೌರವ ಇವರದಾಗಿದೆ. 2005ರಲ್ಲಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಹ ಅವರಿಗೆ ದೊರಕಿತು. ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದರೂ ಇಷ್ಟರವರೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅವರ ಹೆಸರಿಲ್ಲದೆ ಇರುವುದು ಉಡುಪಿಯ ಕಲಾಸಕ್ತರಿಗೆ ಬೇಸರ ತಂದಿದೆ. ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದರೂ ರಾಜ್ಯದ ಗೌರವದಿಂದ ವಂಚಿತರಾದ ಈ ಕಲಾವಿದರ ಸಾಧನೆ ಇಂದು ಪ್ರೇರಣೆಯಾಗಿದೆ. ಕಲೆಗಾಗಿ ಬದುಕಿ, ಕಲೆಯ ಮೂಲಕ ಸಮಾಜಕ್ಕೆ ಬೆಳಕು ನೀಡುವ ನಿಜವಾದ ಕಲಾವಿದರ ಬದುಕು ನಮಗೆಲ್ಲರಿಗೂ ಪ್ರೇರಣೆಯಾಗಲಿ.

ಅರ್
WhatsApp Image 2025 10 25 at 11.14.44 AM 1
WhatsApp Image 2025 10 25 at 11.14.43 AM
WhatsApp Image 2025 10 25 at 11.14.46 AM 1
WhatsApp Image 2025 10 25 at 11.14.46 AM
WhatsApp Image 2025 10 25 at 11.14.44 AM
WhatsApp Image 2025 10 25 at 11.14.42 AM 2
WhatsApp Image 2025 10 25 at 11.14.45 AM
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...