ಬ್ಯಾಂಕಿನಲ್ಲಿ ಅಡವಿಟ್ಟ ಬಂಗಾರದ ಆಭರಣಗಳ ಮರುಮೌಲ್ಯಮಾಪನ ಮಾಡಿದಾಗ ಕೆಲವೊಂದು ನಕಲಿ ಚಿನ್ನಾಭರಣಗಳೆಂದು ಪತ್ತೆಯಾಗಿರುವ ಘಟನೆ ಕಡೂರು ತಾಲೂಕಿನ ಕೆ. ಬಿದರೆ ಭಾಗದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನಡೆದಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೆ. ಬಿದರೆ ಶಾಖೆಯಲ್ಲಿ ಗ್ರಾಹಕರಿಗೆ ಚಿನ್ನದ ಆಭರಣಗಳ ಮೇಲೆ ಸಾಲ ಸೌಲಭ್ಯವಿರುತ್ತದೆ, ಚಿನ್ನದ ಆಭರಣಗಳ ಮೌಲ್ಯಮಾಪನ ಮಾಡುವ ಕೆಲಸವನ್ನು ಶ್ರೀ ಬಾಬು ಗೋಂವಿಂದ ಶೇಟ ಬಿನ್ ಗೋವಿಂದಪ್ಪ ಆಣೆಗೆರೆ, ಶ್ರೀ ಗಣೇಶ ಬಾಬು ಶೇಟ ಬಿನ್ ಬಾಬು ಗೋವಿಂದ ಶೇಟ ವಾಸ ಕೆ.ಬಿದರೆ ಗ್ರಾಮದವರಿಗೆ ವಹಿಸಿರುತ್ತಾರೆ. ಪ್ರಾದೇಶಿಕ ಕಛೇರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಿಕ್ಕಮಗಳೂರು ಪ್ರಾದೇಶಿಕ ವ್ಯವಸ್ಥಾಪಕರಾದ ರಾಮಪ್ಪ ಎಸ್ ಎನ್, 2025 ಮೇ 21ರಂದು ಕೆ. ಬಿದರೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಲ್ಲಿ ಚಿನ್ನಾಭರಣಗಳನ್ನು ಪರಿಶೀಲಿಸುವಾಗ ನಕಲಿ ಚಿನ್ನಾಭರಣಗಳೆಂದು ತಿಳಿದು ಬಂದಿರುತ್ತದೆ. ಈ ವಿಚಾರವಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. 5ಜನ ಗ್ರಾಹಕರಿಂದ 20 ಸಾಲದ ಖಾತೆಗಳಲ್ಲಿ ಒಟ್ಟು ರೂ-68.35 ಲಕ್ಷ ಸಾಲ ಪಡೆದಿದ್ದು, ಅದರಲ್ಲಿ ಪೂರ್ತಿ ಸಾಲ ಪಾವತಿಸಿರುತ್ತಾರೆ ಆದರೆ ಗ್ರಾಹಕರು ಇಟ್ಟಿರುವ ಆಭರಣಗಳು ನಕಲಿ ಆಭರಣಗಳೆಂದು ಇಂಟರನಲ್ ಆಡಿಟ್ ನಲ್ಲಿ ತಿಳಿದು ಬಂದಿದ್ದು, ಜೂನ್ 4ರಂದು ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೆ ಬಿದರೆ ಶಾಖೆಯ ಸಿಬ್ಬಂದಿಯಾದ ವಾಸವಿ ಕೆ.ಕೆ. ಕೋಂ ಗಿರೀಶ ಡಿ, ಸಹಾಯಕ ವ್ಯವಸ್ಥಾಪಕರು ಸಿಬ್ಬಂದಿ ಸಂಖ್ಯೆ-6075, ಚೇತನ ಕೆ.ಪಿ ಸಹಾಯಕ ವ್ಯವಸ್ಥಾಪಕರು ಸಿಬ್ಬಂದಿ ಸಂಖ್ಯೆ-6368 ಪ್ರಾದೇಶಿಕ ಕಛೇರಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಿಕ್ಕಮಗಳೂರು. ಚಿನ್ನದ ಆಭರಣಗಳ ಮೌಲ್ಯಮಾಪಕರಾದ ಬಾಬು ಗೋವಿಂದ ಶೇಟ ಬಿನ್ ಗೋವಿಂದಪ್ಪ, ಗಣೇಶ ಬಾಬು ಶೇಟ ಬಿನ್ ಬಾಬು ಗೋವಿಂದ ಶೇಟ ಹಾಗೂ ಬ್ಯಾಂಕ್ನ ಕೆಲವು ಗ್ರಾಹಕರಾದ ಮೈಲಾರಪ್ಪ, ಪ್ರತೀಮಾ ಆರ್, ರಂಜಿತಾ ವೈ ಆರ್, ರತ್ನಮ್ಮ, ಸುಶ್ಮಿ ಟಿ.ಕೆ ಕಾರಣರಾಗಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಜ. 7ರಂದು 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ
ಈ ಕುರಿತು ಪಂಚನಹಳ್ಳಿ ಠಾಣೆಯಲ್ಲಿ ಮೊ.ನಂ 36/2025, ಕಲಂ 318(2), 318(3), 318(4), 61(2),(A) ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಮುಚ್ಚು ಹಾಕಲು ಬೇರೆ ಬೇರೆ ಹೊನ್ನರ ರೂಪಿಸುತ್ತಿದ್ದಾರೆ. ಹಾಗೆಯೇ, ಆರೋಪಿಗಳಾಗಿರುವ ಶಾಖಾ ಮುಖ್ಯಸ್ಥರು ಲಕ್ಷಗಟ್ಟಲೇ ಹಣವನ್ನು ಬೇರೆಡೆ ಪಡೆದು, ತನಿಖೆ ಮುಚ್ಚು ಹಾಕಲು ಮುಂದಾಗಿದ್ದಾರೆ. ಈ ತನಿಖೆಯನ್ನು ನ್ಯಾಯ ಬದ್ಧವಾಗಿ ಕೈಗೊಳ್ಳಬೇಕೆಂದು ಕೆ.ಬಿದರೆ ಗ್ರಾಮದ ಗ್ರಾಮಸ್ಥರು ಆಗ್ರಹಿಸಿದ್ದಾರೆ.





