ಕಡೂರು | ಕರ್ನಾಟಕ ಗ್ರಾಮೀಣ ಬ್ಯಾಂಕ್ : ನಕಲಿ ಚಿನ್ನಾಭರಣ ಪತ್ತೆ; ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ 

Date:

ಬ್ಯಾಂಕಿನಲ್ಲಿ ಅಡವಿಟ್ಟ ಬಂಗಾರದ ಆಭರಣಗಳ ಮರುಮೌಲ್ಯಮಾಪನ ಮಾಡಿದಾಗ ಕೆಲವೊಂದು ನಕಲಿ ಚಿನ್ನಾಭರಣಗಳೆಂದು ಪತ್ತೆಯಾಗಿರುವ ಘಟನೆ ಕಡೂರು ತಾಲೂಕಿನ ಕೆ. ಬಿದರೆ ಭಾಗದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನಡೆದಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೆ. ಬಿದರೆ ಶಾಖೆಯಲ್ಲಿ ಗ್ರಾಹಕರಿಗೆ ಚಿನ್ನದ ಆಭರಣಗಳ ಮೇಲೆ ಸಾಲ ಸೌಲಭ್ಯವಿರುತ್ತದೆ, ಚಿನ್ನದ ಆಭರಣಗಳ ಮೌಲ್ಯಮಾಪನ ಮಾಡುವ ಕೆಲಸವನ್ನು ಶ್ರೀ ಬಾಬು ಗೋಂವಿಂದ ಶೇಟ ಬಿನ್ ಗೋವಿಂದಪ್ಪ ಆಣೆಗೆರೆ, ಶ್ರೀ ಗಣೇಶ ಬಾಬು ಶೇಟ ಬಿನ್ ಬಾಬು ಗೋವಿಂದ ಶೇಟ ವಾಸ ಕೆ.ಬಿದರೆ ಗ್ರಾಮದವರಿಗೆ ವಹಿಸಿರುತ್ತಾರೆ. ಪ್ರಾದೇಶಿಕ ಕಛೇರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಿಕ್ಕಮಗಳೂರು ಪ್ರಾದೇಶಿಕ ವ್ಯವಸ್ಥಾಪಕರಾದ ರಾಮಪ್ಪ ಎಸ್ ಎನ್, 2025 ಮೇ 21ರಂದು ಕೆ. ಬಿದರೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಲ್ಲಿ ಚಿನ್ನಾಭರಣಗಳನ್ನು ಪರಿಶೀಲಿಸುವಾಗ ನಕಲಿ ಚಿನ್ನಾಭರಣಗಳೆಂದು ತಿಳಿದು ಬಂದಿರುತ್ತದೆ. ಈ ವಿಚಾರವಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. 5ಜನ ಗ್ರಾಹಕರಿಂದ 20 ಸಾಲದ ಖಾತೆಗಳಲ್ಲಿ ಒಟ್ಟು ರೂ-68.35 ಲಕ್ಷ ಸಾಲ ಪಡೆದಿದ್ದು, ಅದರಲ್ಲಿ ಪೂರ್ತಿ ಸಾಲ ಪಾವತಿಸಿರುತ್ತಾರೆ ಆದರೆ ಗ್ರಾಹಕರು ಇಟ್ಟಿರುವ ಆಭರಣಗಳು ನಕಲಿ ಆಭರಣಗಳೆಂದು ಇಂಟರನಲ್ ಆಡಿಟ್ ನಲ್ಲಿ ತಿಳಿದು ಬಂದಿದ್ದು, ಜೂನ್ 4ರಂದು ಪ್ರಕರಣ ದಾಖಲಿಸಲಾಗಿದೆ. 

Screenshot 2026 01 11 09 11 30 42 c37d74246d9c81aa0bb824b57eaf7062

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೆ ಬಿದರೆ ಶಾಖೆಯ ಸಿಬ್ಬಂದಿಯಾದ ವಾಸವಿ ಕೆ.ಕೆ. ಕೋಂ ಗಿರೀಶ ಡಿ, ಸಹಾಯಕ ವ್ಯವಸ್ಥಾಪಕರು ಸಿಬ್ಬಂದಿ ಸಂಖ್ಯೆ-6075, ಚೇತನ ಕೆ.ಪಿ ಸಹಾಯಕ ವ್ಯವಸ್ಥಾಪಕರು ಸಿಬ್ಬಂದಿ ಸಂಖ್ಯೆ-6368 ಪ್ರಾದೇಶಿಕ ಕಛೇರಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಿಕ್ಕಮಗಳೂರು. ಚಿನ್ನದ ಆಭರಣಗಳ ಮೌಲ್ಯಮಾಪಕರಾದ ಬಾಬು ಗೋವಿಂದ ಶೇಟ ಬಿನ್ ಗೋವಿಂದಪ್ಪ, ಗಣೇಶ ಬಾಬು ಶೇಟ ಬಿನ್ ಬಾಬು ಗೋವಿಂದ ಶೇಟ ಹಾಗೂ ಬ್ಯಾಂಕ್‌ನ ಕೆಲವು ಗ್ರಾಹಕರಾದ ಮೈಲಾರಪ್ಪ, ಪ್ರತೀಮಾ ಆರ್, ರಂಜಿತಾ ವೈ ಆರ್, ರತ್ನಮ್ಮ, ಸುಶ್ಮಿ ಟಿ.ಕೆ ಕಾರಣರಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಜ. 7ರಂದು 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ

ಈ ಕುರಿತು ಪಂಚನಹಳ್ಳಿ ಠಾಣೆಯಲ್ಲಿ ಮೊ.ನಂ 36/2025, ಕಲಂ 318(2), 318(3), 318(4), 61(2),(A) ಬಿಎನ್‌ಎಸ್ ರೀತ್ಯಾ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಮುಚ್ಚು ಹಾಕಲು ಬೇರೆ ಬೇರೆ ಹೊನ್ನರ ರೂಪಿಸುತ್ತಿದ್ದಾರೆ. ಹಾಗೆಯೇ, ಆರೋಪಿಗಳಾಗಿರುವ ಶಾಖಾ ಮುಖ್ಯಸ್ಥರು ಲಕ್ಷಗಟ್ಟಲೇ ಹಣವನ್ನು ಬೇರೆಡೆ ಪಡೆದು, ತನಿಖೆ ಮುಚ್ಚು ಹಾಕಲು ಮುಂದಾಗಿದ್ದಾರೆ. ಈ ತನಿಖೆಯನ್ನು ನ್ಯಾಯ ಬದ್ಧವಾಗಿ ಕೈಗೊಳ್ಳಬೇಕೆಂದು ಕೆ.ಬಿದರೆ ಗ್ರಾಮದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...