ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದ ಸಮೀಪದ ಕರದಾಳ ಗ್ರಾಮದ ಕಸ್ತೂರಬಾ ವಸತಿ ನಿಲಯದಲ್ಲಿ 2 ವರ್ಷದಿಂದ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಭಾಗ್ಯಶ್ರೀ ನಾಯ್ಕೋಡಿ, ವಸತಿ ನಿಲಯದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ನಮ್ಮೆಲ್ಲರಲ್ಲೂ ಆಘಾತ ಮೂಡಿಸಿದೆ ಎಂದಿರುವ ಎಐಡಿಎಸ್ಒ ಸಾವಿನ ಸೂಕ್ತ ತನಿಖೆಗೆ ಆಗ್ರಹಿಸಿದೆ.
ಶನಿವಾರ (ಮಾ.9) ಎಐಡಿಎಸ್ಒ ನಿಯೋಗ ಕಸ್ತೂರಿ ಬಾ ವಸತಿ ನಿಲಯಕ್ಕೆ ಭೇಟಿ ನೀಡಿತ್ತು. ಈ ವೇಳೆ, ಸಾವು ದುಖಃಕರ, ಅದರಲ್ಲಿಯೂ ಹದಿಹರೆಯದವರ ಸಾವು ಮತ್ತಷ್ಟು ದುಖಃಕರ, ಇಂತಹ ಘಟನೆಗಳು ಸಮಾಜದಲ್ಲಿ ಮಡುಗಟ್ಟಿರುವ ಜೀವನದ ಕುರಿತಾಗಿನ ಭಯ, ಅನಿಶ್ಚಿತತೆಯನ್ನು ಬೊಟ್ಟು ಮಾಡಿ ತೋರಿಸುತ್ತವೆ. ಈ ಘಟನೆ ಕುರಿತಾಗಿ ನಿಶ್ಪಕ್ಷವಾದ ತನಿಖೆ ನಡೆಸಬೇಕು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರವು ಕ್ರಮ ಕೈಗೊಳ್ಳಬೇಕೆಂದು ಎಂದು ಎಐಡಿಎಸ್ಒ ಮನವಿ ಮಾಡಿದೆ.
ಎಐಡಿಎಸ್ಒ ಜಿಲ್ಲಾ ಅಧ್ಯಕ್ಷರಾದ ಸ್ನೇಹಾ ಕಟ್ಟೀಮನಿ, ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ, ಉಪಾಧ್ಯಕ್ಷರಾದ ಗೋವಿಂದ ಯಳವಾರ ಹಾಗೂ ಸಿದ್ದಾರ್ಥ್ ತಿಪ್ಪನೋರ, ತುಳಜರಾಮ. ಎನ್.ಕೆ, ಜಿಲ್ಲಾ ಕಾರ್ಯದರ್ಶಿ, ನಿಯೋಗದಲ್ಲಿದ್ದರು.




