ಕಲಬುರಗಿ | ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ ಬದುಕುತ್ತಿರುವ ಅಲೆಮಾರಿ ಕುಟುಂಬಗಳು

Date:

ಕಲಬುರಗಿಯ ನೃಪತುಂಗ ಕಾಲೋನಿಯಲ್ಲಿ ಇನ್ನೂರು ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಟುಂಬಗಳು ತುಂಬಾ ವರ್ಷದಿಂದ ವಾಸವಾಗಿದ್ದು, ಇವರುಗಳಿಗೆ ಈವರೆಗೂ ಕನಿಷ್ಠ ಮೂಲಭೂತ ಸೌಲಭ್ಯಗಳನ್ನೂ ನೀಡಿಲ್ಲ.

ಇವರು ವಾಸವಿರುವ ಜಾಗದಲ್ಲಿ ನೀರು,ಮನೆ, ಬಟ್ಟೆ, ವಿದ್ಯುತ್ ಅಷ್ಟೇ ಅಲ್ಲ ರಸ್ತೆಕೂಡ ಇಲ್ಲ. ʼನಮಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಇರಲಿಲ್ಲ. ಆದರೆ, ನಮ್ಮ ಅಲೆಮಾರಿ ಜನಾಂಗ ಮಕ್ಕಳಾದರೂ ವಿದ್ಯಾವಂತರಾಗಿ, ಎಲ್ಲರಂತೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ  ಪಡೆಯಬೇಕು ಎಂಬುವುದು ನಮ್ಮ ಆಸೆʼ ಎನ್ನುವುದು ಈ ಜನರ ಕನಸು.

ಬುಡಕಟ್ಟು ಜನಾಂಗದ ಈರಮ್ಮ ಈದಿನ.ಕಾಮ್ ನೊಂದಿಗೆ ಮಾತನಾಡಿ, “ಸುಮಾರು 30 ವರ್ಷದಗಳಿಂದ ಗುಡಿಸಲು ಕಟ್ಟಿಕೊಂಡು, ಜೋಪಡಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಮಳೆ ಬಂದಾಗ ಗುಡಿಸಲಲ್ಲಿ ಮಲಗುವುದಕ್ಕೂ ಜಾಗ ಇರುವುದಿಲ್ಲ. ಮಳೆ ನೀರು ಗುಡಿಸಲಿಗೆ ನುಗ್ಗುತ್ತದೆ. ರಸ್ತೆ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಕೇಸರಿನಲ್ಲಿ ನಡೆದುಕೊಂಡು ಓಡಾಡಬೇಕು. ವಿದ್ಯುತ್ ಸಂಪರ್ಕ ಇಲ್ಲ. ಕತ್ತಲಲ್ಲಿ ಜೀವನ ನಡೆಸುತ್ತಿದ್ದೇವೆ. ಈ ಹಿಂದೆ ಹಾವು ಕಡಿದು ಒಂದು ಮಗು ತೀರಿಕೊಂಡಿದೆ. ನಮ್ಮ ಕಷ್ಟಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ. ನೀರಿಗಾಗಿ ಕೊಡ ಹಿಡಿದುಕೊಂಡು ಪ್ರತಿಭಟನೆ ಮಾಡಿದ್ದೇವೆ. ಆದರು ಕೂಡ ಸಮಸ್ಯೆ ಬಗ್ಗೆ ಹರಿದಿಲ್ಲ. ನಮ್ಮ ಗೋಳು ಕೇಳುವವರು ಯಾರು ಇಲ್ಲ” ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗಜರಪ್ಪ ಮಾತನಾಡಿ, “ನಾವು ಜೋಪಡಿಯಲ್ಲಿ ಇರುವುದರಿಂದ ನಮಗೆ ಕಿಮ್ಮತ್ತೇ (ಗೌರವ) ಇಲ್ಲ. ಈ ಮೊದಲು ಕಲಬುರಗಿ ನಗರದ ರಾಜಾಪುರ ಕಾಲೋನಿಯಲ್ಲಿ ವಾಸವಾಗಿದ್ದೇವು. ಅಲ್ಲಿಂದ ನಮ್ಮನ್ನ ಓಡಿಸಿದರು. ನಂತರ ನೃಪತುಂಗ ಕಾಲೋನಿಗೆ ಬಂದು ವಾಸವಾಗಿದ್ದೇವೆ. ನಾವು ಇಲ್ಲಿಗೆ ಬಂದು ಸುಮಾರು ವರ್ಷಗಳೇ ಕಳೆದರು ರಸ್ತೆ, ನೀರು, ವಿದ್ಯುತ್ ಯಾವುದೇ ಸೌಲಭ್ಯವಿಲ್ಲದೇ, ಕಾಡಿನಲ್ಲಿ ಇದ್ದಹಾಗಿದೆ ನಮ್ಮ ಪರಿಸ್ಥಿತಿ. ನಾಯಕರುಗಳು ಓಟು ಕೇಳಲು ಬರುತ್ತಾರೆ. ಚುನಾವಣೆ ಮುಗಿದ ಬಳಿಕ ಇತ್ತಾ ಸುಳಿಯುವುದಿಲ್ಲ. ಇಷ್ಟು ವರ್ಷ ಕಳೆದರು ಒಂದು ಮನೆ ಮಾಡಿಲ್ಲ. ಎಷ್ಟು ಹೋರಾಟ ಮಾಡಿದರು ಪ್ರಯೋಜನ ಆಗಿಲ್ಲ” ಎಂದು ಬೇಸರ ಹೊರಹಾಕಿದರು.

ಸಾಬಮ್ಮಾ ಮಾತನಾಡಿ, “ನಮ್ಮ ಜನಾಂಗದವರಿಗೆ ಏನಾದರೂ ಆರೋಗ್ಯದಲ್ಲಿ ಸಮಸ್ಯೆ ಆದರೆ ಮುದುಕರು, ಮಕ್ಕಳು, ಎಲ್ಲರೂ ನಡೆದುಕೊಂಡೆ ಆಸ್ಪತ್ರೆ ಹೋಗಬೇಕು. ಹೆಣ್ಣು ಮಕ್ಕಳಿಗೆ ಹೆರಿಗೆ ಸಂದರ್ಭದಲ್ಲಿ ಆಂಬುಲೆನ್ಸ್ ಕೂಡ ಬರುವುದಿಲ್ಲ. ರಸ್ತೆ ಸರಿ ಇಲ್ಲ ಬರಲು ಆಗುವುದಿಲ್ಲ ಎಂದು ಹೇಳುತ್ತಾರೆ. ರಸ್ತೆ ಮಧ್ಯ ಏನಾದರು ಅನಾಹುತ ಆದರೆ ಯಾರು ಹೊಣೆ? ನಮ್ಮ ನೋವು ಯಾರು ಕೇಳುವವರಿಲ್ಲ. ನಮಗೆ ನೀರು, ಕರೆಂಟ್, ರಸ್ತೆ ಮಾಡಿಕೊಡಬೇಕು” ಎಂದು ಮನವಿ ಮಾಡಿಕೊಂಡರು.

ಮಹದೇವಪ್ಪ ಮಾತನಾಡಿ, “ಯಾವ ಪಕ್ಷದವರಾದರೂ ಬರಲಿ. ಅವರು ಯಾರೂ ನಮಗೆ ಸೌಲಭ್ಯ ಒದಗಿಸಿ ಕೊಡೋದಿಲ್ಲ. ನಮ್ಮ ಮಕ್ಕಳಿಗೆ ಶಿಕ್ಷಣದ ಬಗ್ಗೆ ಕಿಂಚಿತ್ತು ತಿಳುವಳಿಕೆ ಇಲ್ಲ. ನಾವು ಶಾಲೆ ಕಲಿತಿಲ್ಲ. ಆದರೆ, ನಮ್ಮ ಮಕ್ಕಳಿಗಾದರು ಒಳ್ಳೆ ವಿದ್ಯಾಭ್ಯಾಸ ಸಿಗಬೇಕು ಎನ್ನುವುದು ನಮ್ಮ ಆಶಯ. ಚುನಾವಣೆ ಸಂದರ್ಭದಲ್ಲಿ ಓಟು ಹಾಕುವುದಕ್ಕೆ ನಾವು ಬೇಕು. ಅದರ ನಂತರದಲ್ಲಿ ನಾವು ಅವರಿಗೆ ಬೇಡಾ. ನಾವು ಯಾವ ಸ್ಥಿತಿಯಲ್ಲಿದ್ದೀವಿ, ನಮ್ಮ ಮಕ್ಕಳು ಪರಿಸ್ಥಿತಿ ಏನಾಗಿದೆ? ಎಂಬುವುದು ಸರ್ಕಾರಕ್ಕೆ ಬೇಡದೆ ಇರುವ ವಿಚಾರವಾಗಿದೆ. ನಮ್ಮ ತಾತಾ, ಮುತ್ತಾತ, ಅಪ್ಪ, ನಾವು ಗುಡಿಸಲಲ್ಲಿಯೇ ಜೀವನ ಕಳೆದಿದ್ದೇವೆ. ನಮಗೆ ಒಂದು ಒಳ್ಳೆಯ ಜೀವನ ಸಿಕ್ಕಿಲ್ಲ. ನಮ್ಮ ಮಕ್ಕಳಿಗಾದರು ಒಳ್ಳೆಯ ಅವಕಾಶ ಕಲ್ಪಿಸಿಕೊಡಲು ಸರ್ಕಾರ ಮುಂದಾಗಬೇಕು” ಎಂದು ಬೇಡಿಕೊಂಡರು.

ಅಲೆಮಾರಿ ಜನಾಂಗದ ಮರಲಿಂಗಪ್ಪ ಮಾತನಾಡಿ, “ಸಾಬವ್ವ ಆಕೆಗೆ ಕಿವಿ ಕೇಳಿಸುವುದಿಲ್ಲ ಜೊತೆಗೆ ಅವಳ ಗಂಡ ತೀರಿಕೊಂಡಿದ್ದಾನೆ, ಮಗುವಿನೊಂದಿಗೆ ಗುಡಿಸಲಲ್ಲಿ ಜೀವನ ನಡೆಸುತ್ತಿದ್ದಾಳೆ. ವಿಧವಾ ವೇತನಕ್ಕೆ ಅರ್ಜಿ ಹಾಕಿದರೆ. ಜಾತಿ, ಆದಾಯ ಪ್ರಮಾಣ ಪತ್ರದಲ್ಲಿ ಐವತ್ತು ಸಾವಿರ ರೂಪಾಯಿ ಆದಾಯ ತೋರಿಸಿದ ಸಲುವಾಗಿ ಅವಳಿಗೆ ವಿಧವಾ ವೇತನ ಬರುವುದಿಲ್ಲ ಎಂದು ವಾಪಾಸ್ ಕಳುಹಿಸಿದ್ದಾರೆ. ಐವತ್ತು ಸಾವಿರ ರೂಪಾಯಿ ಆದಾಯ ಇದ್ದಿದ್ದರೇ, ಗುಡಿಸಲಲ್ಲಿ ಯಾಕೆ ಜೀವನ ನಡೆಸುತ್ತಾರೆ? ಅಧಿಕಾರಿಗಳು ವಿಚಾರ ಮಾಡದೇ ಈ ತಪ್ಪುಗಳು ಮಾಡಿ, ಬಡವರ ಹೊಟ್ಟೆ ಮೇಲೆ ಹೊಡೆಯುತ್ತಾರೆ. ಬಡ ಜನರಿಗೆ ಸರ್ಕಾರ ಸಹಾಯ ಮಾಡದಿದ್ದರೆ. ಇನ್ನು ಎಂತವರಿಗೆ ಸರ್ಕಾರ ಸಹಾಯ ಮಾಡುತ್ತದೆ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಒಟ್ಟಿನಲ್ಲಿ, ತಲೆ ತಲೆ ಮಾರುಗಳಿಂದ ಗುಡಿಸಲಲ್ಲಿ ವಾಸವಿರುವ ಈ ಅಲೆ ಮಾರಿಗಳು ಓಟುಗಳಾಗಿ ಮಾತ್ರ ಕಣ್ಣಿಗೆ ಕಾಣಿಸುತ್ತಾರೆಯೇ ಹೊರತು ಅವರ ಸಮಸ್ಯೆಗಳು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುವರೇ ಕಾದುನೋಡಬೇಕು.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...