ಕಲಬುರಗಿ ಜಿಲ್ಲೆಗೆ ಜೀವಜಲವಾಗಿರುವ ಭೀಮಾನದಿ ಸಂರಕ್ಷಣೆಗಾಗಿ ಸಂವಾದ ಯುವಸಂಪನ್ಮೂಲ ಕೇಂದ್ರ ಮತ್ತು ಕರ್ನಾಟಕ ಯುವಮುನ್ನಡೆ ತಂಡವು ಜೇವರ್ಗಿ ತಾಲೂಕಿನಾದ್ಯಾಂತ ಭೀಮಾನದಿ ಸಂರಕ್ಷಣೆ ಕುರಿತು ಅಭಿಯಾನ ಮಾಡುತ್ತ ಪರಿಸರ ನ್ಯಾಯದ ಅರಿವು ಮೂಡಿಸುತ್ತಿದ್ದಾರೆ.
ಭೀಮಾನದಿ ವರ್ಷದಿಂದ ವರ್ಷಕ್ಕೆ ಕಲುಷಿತಗೊಳ್ಳುತ್ತಿವುದರ ಜತೆಗೆ ಅಳಿವಿನಂಚಿಗೆ ತಲುಪುತ್ತಿದೆ. ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು, ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಗೆ ಬಿಡುವುದರಿಂದ ನಾನಾ ರೋಗಗಳೂ ಕೂಡ ಕಾಣಿಸಿಕೊಂಡ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಭೀಮಾನದಿ ಸಂರಕ್ಷಣೆ ಕುರಿತು ಜಾಗೃತಿ ನಡೆಯುತ್ತಿದೆ.
ಜೇವರ್ಗಿ ಪಟ್ಟಣದ ಹಲವಾರು ಕಾಲೇಜುಗಳು ಸೇರಿದಂತೆ ಭೀಮಾ ಬ್ರಿಜ್ ಕಟ್ಟಿ ಸಂಗಾವಿ ಹಾಗೂ ಹಲವು ಗ್ರಾಮಗಳಲ್ಲಿ ಪ್ರತಿಯೊಬ್ಬರಿಗೂ ಸಸಿಗಳನ್ನು ನೀಡುವ ಮೂಲಕ ಗಿಡ ಮರ ಉಳಿಸುವಂತೆ ಅರಿವಿನ ಹಾಡುಗಳನ್ನು ಹಾಡುತ್ತ ಜಾಗೃತಿ ಮೂಡಿಸಿದರು.
ಈ ಸುದ್ದಿ ಓದಿದ್ದೀರಾ? ಸವಣೂರು | ಮನೆ ಗೋಡೆ ಕುಸಿದು ಅವಳಿ ಮಕ್ಕಳ ಸಹಿತ ತಾಯಿ ಮೃತ್ಯು; ಸ್ಥಳಕ್ಕೆ ಸಂಸದ ಬೊಮ್ಮಾಯಿ ಭೇಟಿ
ಈ ಸಂದರ್ಭದಲ್ಲಿ ಸಂವಾದ ಯುವಸಂಪನ್ಮೂಲ ಕೇಂದ್ರ ಮತ್ತು ಕರ್ನಾಟಕ ಯುವಮುನ್ನಡೆ ತಂಡದ ಮುಂದಾಳುಗಳಾದ ಅನುರಾಗ, ರಾಜಶ್ರೀ, ಅಶ್ಮಿತಾ, ವಿಜಯ್, ಶಾಂತು, ಸಾನ್ವಿ ಸೇರಿದಂತೆ ಮುಂತಾದವರು ಇದ್ದರು.





