ಕಲಬುರಗಿ ಜಿಲ್ಲೆಯ ರೈತರ ಜಮೀನು ಅಳತೆ ಮಾಡಲು ಸರ್ಕಾರಿ ಫೀಸ್ ಕಟ್ಟಿ ಹಾಕಿದ ಅರ್ಜಿಗಳು ಸರ್ವೇ ಅಧಿಕಾರಿಗಳಿಗೆ ತಲುಪಿದ ಮೇಲೆ ನಿಮ್ಮ ಹೊಲದ ಟಿಪ್ಪಣಿ ಇಲ್ಲವೆಂಬ ನೆಪ ಹೇಳಿ ಸತಾಯಿಸುತ್ತಿದ್ದು, ಸರ್ವೇ ಅಧಿಕಾರಿಗಳು ಕುಂಟುನೆಪ ಹೇಳಿ ದಿನದೂಡಿ ರೈತರ ಜೀವದ ಜತೆಗೆ ಚಲ್ಲಾಟವಾಡುತ್ತಿದ್ದಾರೆ. ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಸಿದರು.
ಕಲಬುರಗಿ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾ ಸಹಾಯಕ ಆಯುಕ್ತರು, ಪ್ರಾದೇಶಿಕ ಭೂ ದಾಖಲೆಗಳ ಇಲಾಖೆ, ಸರ್ವೆ ಇಲಾಖೆ ಸೆಟ್ಲಮೆಂಟ್ ಮತ್ತು ಭೂದಾಖಲೆಗಳ ಆಯುಕ್ತರು ಮತ್ತು ಕಂದಾಯ ಸಚಿವ ಕೃಷ್ಣೇಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.
“ರೈತರ ಹತ್ತಿರ ಹಣ ಸುಲಿಗೆ ಮಾಡುತ್ತಿರುವುದು ಸರ್ವೇ ಸಾಮನ್ಯವಾಗಿದೆ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಾಳಗಿ ಮತ್ತು ಚಿಂಚೋಳಿ ತಾಲೂಕಿನ ಬಡ ರೈತರ ಟಿಪ್ಪಣಿ ತಯಾರಿ ಜಮೀನನ್ನು ಸರಳವಾಗಿ ಅಳತೆ ಹದ್ದಬಸ್ತು ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

“ಸರ್ವೇ ಅಧಿಕಾರಿಗಳು, ಹೊಲದ ಟಿಪ್ಪಣಿ ಮಾಡಿಸಲು ಸರಾಸರಿ ₹40,000ದಿಂದ ₹50,000ದವರೆಗೆ ಸುಲಿಗೆ ಮಾಡುತ್ತಿದ್ದಾರೆ. ರೈತರ ಜೀವ ಹಿಂಡುತ್ತಿರುವ ಸರ್ವೇ ಅಧಿಕಾರಿಗಳು ರೈತ ವಿರೋಧಿ ಧೋರಣೆಯಾಗಿದೆ. ಜಿಲ್ಲಾಡಳಿತ ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಜಿಲ್ಲೆಯಲ್ಲಿ ಸುಮಾರು ಜನ ರೈತರು ಕಣ್ಣೀರಿನಿಂದ ಕೈ ತೊಳೆಯುತ್ತಿದ್ದಾರೆ. ಬಡವರ ಮುಗ್ದ ರೈತರ ಜಮೀನು ಅಳತೆ ಮಾಡದೆ ಬೇಜವಾಬ್ದಾರಿ ತೋರಿಸುತ್ತಿರುವು ಸ್ಪಷ್ಟವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ದೇವಾಲಯ ಪ್ರವೇಶ ಸಂಘರ್ಷ; ಶಾಸಕ, ಡಿಸಿ ಸಮ್ಮುಖದಲ್ಲಿ ಶಾಂತಿಸಭೆ
“ಕೃಷಿ ಸಚಿವರು, ಸರ್ವೇ ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿ ಸಭೆ ನಡೆಸಿ ರೈತರ ಜಮೀನು ಅಳತೆ ಸಂಬಂಧ ಸೂಕ್ತವಾದ ತನಿಖೆ ನಡೆಸಿ ರೈತರ ಜಮೀನು ಟಿಪ್ಪಣಿಯನ್ನು ಸರಳತೆಯಿಂದ ತಯಾರಿಸಿ ಜಮೀನು ಅಳತೆ ಮಾಡಲು ಸರ್ಕಾರ ರೈತರ ನೆರವಿಗೆ ಬರಬೇಕು” ಎಂದು ಒತ್ತಾಯಿಸಿದರು.
“ಟಿಪ್ಪಣಿ ತಯಾರಿಸಲು ರೈತರಿಂದ ಹಣ ಸುಲಿಗೆ ಮಾಡುತ್ತಿರುವ ಸರ್ವೇ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿ ತಪ್ಪಿತಸ್ಥ ಅಧಿಕಾರಿಗಳಿಂದ ಸೇವೆಯಿಂದ ಅಮಾನತುಗೊಳಿಸಿ ರೈತರಿಗೆ ನ್ಯಾಯ ದೊರಕಿಸಬೇಕು” ಎಂದು ಆಗ್ರಹಿಸಿದರು.





