ಕಲಬುರಗಿ ಜಿಲ್ಲೆಯಲ್ಲಿ ಸುಮಾರು 50 ಹಳ್ಳಿಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಸುವ ಉದ್ದೇಶವಿದೆ. ಆರೋಗ್ಯ ಇಲಾಖೆ ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆ ಸಿಬ್ಬಂದಿಗಳು ತಮಗೆ ಸಂಪೂರ್ಣ ಸಹಕಾರ ನೀಡಬೇಕೆಂದು ದಲಿತ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ ಹೇಳಿದ್ದಾರೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಅಂದೋಲಾ ಗ್ರಾಮದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ದಲಿತ ಸೇನೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಿತ್ತು.
ಆಂದೋಲಾ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳ ಹಲವಾರು ಮಂದಿ ಕಣ್ಣಿನ ತಪಾಸಣೆ ಮಾಡಿಕೊಂಡಿದ್ದಾರೆ. ಸುಮಾರು 20 ಜನರಿಗೆ ಶಸ್ತ್ರ ಚಿಕಿತ್ಸೆಗಾಗಿ ಕಲಬುರಗಿ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಶಿಬಿರದಲ್ಲಿ ಆಂದೋಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹಾದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಷ್ ರಾಠೋಡ್, ಪುರಸಭೆ ಮಾಜಿ ಸದಸ್ಯ ವಿಶ್ವನಾಥ್ ಇಮ್ಮಣ್ಣಿ, ಊರಿನ ಮುಖಂಡ ಸುರೇಶ್ ದೇಸಾಯಿ, ಮಲ್ಕಪ್ಪ ಹೊಸೂರು, ಸಿದ್ದಣ್ಣ ಅಣಬಿ, ಅರುಣ ಕುಮಾರ ಅಂಗಡಿ, ಅನೀಲ್ ಶೆಟ್ಟಿ, ಕರಣು ಹಳಿಮನಿ, ಕರಣು ಇಂಬಡಶೆಟ್ಟಿ ಕರೀಂ ಕುಕನೂರ, ದಲಿತ ಸೇನೆಯ ಖಮರ್ ಪೀರಾಸಾಬ, ಆರೋಗ್ಯ ಕೇಂದ್ರದ ಸಿಬ್ಬಂದಿ ಮಶಾಕ್, ರಾಜೇಂದ್ರ, ಮಹ್ಮದ್ ಖಲೀಲ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಮಡಿವಾಳಪ್ಪ, ಗ್ರಾಮ ಪಂಚಾಯತಿಯ ಲೆಕ್ಕ ಪರಿಶೋಧಕ ಮಡಿವಾಳಪ್ಪ ಪಾಟೀಲ್, ಸರ್ಕಾರಿ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ರಾಜಪ್ಪ,ಆಂದೋಲಾ ಗ್ರಾಮ ಪಂಚಾಯಿತಿ ಸದಸ್ಯ ಶರಬಯ್ಯ ಸ್ವಾಮಿ, ಹಣಮಂತ ಗುತ್ತೇದಾರ್,ಬಸವರಾಜ ದೇವದುರ್ಗ,ಮಲ್ಲಾರಿ ಮಹೇಂದ್ರಕರ್, ಅಯ್ಯಣ್ಣ ಶಹಾಪುರ,ಭೀಮು ಸುಣಗಾರ ಇದ್ದರು.




