ಕಲಬುರಗಿ | ಕುಸುನೂರ ಗ್ರಾಮ ಪಂಚಾಯತಿ ಅವ್ಯವಸ್ಥೆ; ಕಾರ್ಮಿಕರಿಗೆ ದೊರೆಯದ ಜಾಬ್ ಕಾರ್ಡ್

Date:

ಕೂಲಿ ಕಾರ್ಮಿಕರು ಕೆಲಸ ಮಾಡಿ 6, 7 ತಿಂಗಳು ಆದರೂ ವೇತನ ಕೊಡುತ್ತಿಲ್ಲ. ಹೀಗೆ ಸತಾಯಿಸಿದರೆ ಕೆಲಸಕ್ಕೆ ಯಾರು ಬರುತ್ತಾರೆ ಎನ್ನುತ್ತಾರೆ ಕೂಲಿ ಕಾರ್ಮಿಕರು

ಮನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರು ಕೆಲಸ ಮಾಡಿ 6, 7 ತಿಂಗಳುಗಳು ಕಳೆದಿವೆ. ಇನ್ನೂ ವೇತನ ಪಾವತಿಯಾಗಿಲ್ಲ. ಫಾರಂ ನಂ.6ಅನ್ನು ಭರ್ತಿ ಮಾಡಿ ಸಲ್ಲಿಸಿದ್ದೇವೆ. ಆದರೂ, ವೇತನ ಕೊಡುತ್ತಿಲ್ಲ. ಕೆವೈಸಿ ಅಪ್‌ಡೇಟ್‌ ಮಾಡಿಸಬೇಕೆಂದು ಪಂಚಾಯತಿ ಅಧಿಕಾರಿಗಳು ಹೇಳುತ್ತಾರೆ. ಕಂಪ್ಯೂಟರ್‌ ಸೆಂಟರ್‌ನಲ್ಲಿ ಚೆಕ್ ಮಾಡಿಸಿದರೆ, ಕೆವೈಸಿ ಅಪ್‌ಡೇಟ್ ಆಗಿದೆ. ಅನಗತ್ಯವಾಗಿ ಕಾರ್ಮಿಕರಿಗೆ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ಕಳೆದ ಬಾರಿ ಕೆಲಸ ಮಾಡಿದ್ದಾಗ ವೇತನ ಬಂದಿದೆ. ಈಗ ಹೇಗೆ ಸಮಸ್ಯೆಯಾಗುತ್ತದೆ? – ಇದು ಮನರೇಗಾ ಅಡಿಯಲ್ಲಿ ಕೂಲಿ ಕೆಲಸ ಮಾಡಿ, ವೇತನ ಪಡೆಯಲಾಗದ ಕಾರ್ಮಿಕರ ಮಾತು.

ಕಲಬುರಗಿ ಜಿಲ್ಲೆಯ ಕುಸುನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಕಾಲಿ ಕಾರ್ಮಿಕರು ಮನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಆದರೆ, ಪಂಚಾಯತಿ ಅವ್ಯವಸ್ಥೆ, ಬೇಜವ್ದಾರಿತನ, ನಿರ್ಲಕ್ಷ್ಯ ಧೋರಣೆಯಿಂದಾಗಿ ಕೂಲಿ ಕಾರ್ಮಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಫಾರಂ ನಂ.6ರಲ್ಲಿ ಎಲ್ಲ ವಿವರಗಳನ್ನ ಸ್ಪಷ್ಟವಾಗಿ ನೀಡಿದ್ದರೂ, ಅಧಿಕಾರಿಗಳೂ ಮಹಿಳಾ ಕಾರ್ಮಿಕರ ಹೆಸರಿನ ಜೊತೆಗೆ ಗಂಡನ ಹೆಸರು ಹಾಕುವಾಗ ಬೇರಾವುದೋ ಹೆಸರು ಹಾಕುತ್ತಿದ್ದಾರೆ. ಹೀಗಾಗಿ, ಮನೆಗಳಲ್ಲಿ ಮಹಿಳಾ ಕಾರ್ಮಿಕರೊಂದಿಗೆ ಅವರ ಗಂಡಂದಿರು ಜಗಳ ಮಾಡುತ್ತಿದ್ದಾರೆ. ಪಂಚಾಯತಿ ಅಧಿಕಾರಗಳ ಬೇಜಬ್ವಾರಿತನದಿಂದ ಸಂಸಾರಗಳು ಹಾಳಾಗುತ್ತಿವೆ ಎಂದು ಕಾರ್ಮಿಕರು ದೂರಿದ್ದಾರೆ.

ಕೂಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಈದಿನ.ಕಾಮ್‌ ಜೊತೆ ಮಾತನಾಡಿದ ಕಾರ್ಮಿಕ ಸುಭಾಷ್, “ಕುಸುನೂರ ತಾಂಡಾದ 300ಕ್ಕೂ ಹೆಚ್ಚು ಮಂದಿ ಜಾಬ್‌ ಕಾರ್ಡ್‌ ಮಾಡಿಸಿದ್ದಾರೆ. ಅವೆಲ್ಲವೂ ಪಂಚಾಯತ್‌ನಲ್ಲಿಯೇ ಇವೆ. ಹಳೆಯ ಜಾಬ್‌ ಕಾರ್ಡ್ ಪಡೆದುಕೊಂಡು, ಹೊಸ ಜಾಬ್‌ ಕಾರ್ಡ್‌ ವಿತರಿಸುವಂತೆ ಕೇಳಿದರೂ, ವಿತರಣೆ ಮಾಡುತ್ತಿಲ್ಲ. ನಾಳೆ-ನಾಳಿದ್ದು ಎಂದು ಕಾಲಹರಣ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಕಾರ್ಯಕರ್ತ ರೇವಣಸಿದ್ದಪ್ಪ ನಿಲಂಗಿಕರ್ ಮಾತನಾಡಿ, “ಕಳೆದ ಎರಡು ವರ್ಷಗಳಿಂದ ಕೂಲಿ ಕಾರ್ಮಿಕರ ಎನ್‌ಎಂಆರ್‌ (ಹಾಜರಾತಿ) ತೆಗೆದುಕೊಡುವಂತೆ ಪಂಚಾಯತಿಗೆ ಹಲವು ಬಾರಿ ಕೇಳಿದ್ದೇವೆ. ಫಾರಂ ನಂ.6 ಸರಿಯಾಗಿ ಬರೆದು ಕೊಟ್ಟರೂ ಎನ್‌ಎಂಆರ್‌ ತೆಗೆಯುವಾಗ ಕೆಲವರದ್ದಷ್ಟೇ ತೆಗೆದು, ಉಳಿದವರದ್ದು ಕೆವೈಸಿ ಸಮಸ್ಯೆಯಿದೆ ಎಂದು ಹೇಳುತ್ತಿದ್ದಾರೆ. ನಾವೇ ಎಲ್ಲರದ್ದೂ ಕೆವೈಸಿ ಅಪ್‌ಡೇಟ್ ಮಾಡಿಸಿದ್ದೇನೆ. ಆದರೂ, ಅಧಿಕಾರಿಗಳು ಬೇಜವ್ದಾರಿ ಧೋರಣೆ ತಳೆದಿದ್ದಾರೆ” ಎಂದು ಕಿಡಿಕಾರಿದ್ದಾರೆ.

“ಕೂಲಿ ಕಾರ್ಮಿಕರು ಕೆಲಸ ಮಾಡಿ 6, 7 ತಿಂಗಳು ಆದರೂ ವೇತನ ಕೊಡುತ್ತಿಲ್ಲ. ಹೀಗೆ ಸತಾಯಿಸಿದರೆ ಕೆಲಸಕ್ಕೆ ಯಾರು ಬರುತ್ತಾರೆ. ನಮಗೆ ಜಿಪಿಎಸ್ ಆ್ಯಪ್ ಒಂದೆ ಕೊಟ್ಟಿದ್ದಾರೆ. ಆದರೆ, ಲೆಟರ್‌ನಲ್ಲಿ 5 ಆ್ಯಪ್ ಕೊಟ್ಟಿದಿವಿ ಎಂದು ಸುಳ್ಳು ಬರೆದಿದ್ದಾರೆ” ಎಂದು ಆರೋಪಿಸಿದ್ದಾರೆ.

ಈದಿನ.ಕಾಮ್ ಜೊತೆ ಮಾತನಾಡಿದ ಕುಸುನೂರ ಗ್ರಾಮ ಪಂಚಾಯತಿ ಪಿಡಿಓ, “ಕಳೆದ ವರ್ಷ 2022ರಲ್ಲಿ ಮ್ಯಾಡೇಜ್ 7,000 ಸಾವಿರ ಇತ್ತು. ಕುಸುನೂರ್ ಗ್ರಾಮ ಪಂಚಾಯತಿಯಲ್ಲಿ ಒಟ್ಟು 250ರಿಂದ 260 ಜನ ಕೂಲಿ ಕಾರ್ಮಿಕರು ಕೆಲಸ ಮಾಡಿದ್ದಾರೆ. 38 ಲಕ್ಷ ರೂ. ಪೇಮೆಂಟ್ ಮಾಡಿದ್ದೇವೆ. 100 ದಿನಗಳ ಕಾಲ ಸಂಪೂರ್ಣ ಕೆಲಸ ಕೊಟ್ಟಿದ್ದೇವೆ. ಯಾವುದೇ ವೇತನ ಕೊಡುವುದು ಬಾಕಿ ಇಲ್ಲ” ಎಂದು ಹೇಳಿದ್ದಾರೆ.

“2023ರಲ್ಲಿ ಮ್ಯಾಡೇಜ್ 1,056 ಇದೆ. ಆಕ್ಟಿವ್ ಆಗಿ ಕೆಲಸ ಮಾಡುವ 280 ಕೂಲಿ ಕಾರ್ಮಿಕರಿದ್ದಾರೆ. ಏಪ್ರಿಲ್‌ನಿಂದ ಜುಲೈ ಅಂತ್ಯದ ವರೆಗೆ 22,000 ರೂ. ವೇತನ ಪಾವತಿ ಆಗಿದೆ. 14,000 ರೂ. ಬಾಕಿ ಇದೆ” ಎಂದು ಹೇಳಿದ್ದಾರೆ. ಆದರೆ, ಪೇಮೆಂಟ್ ಮಾಡಿರುವ ವೋಚರ್ ಕೇಳಿದಾಗ, ಅವುಗಳನ್ನು ಕೊಡಲು ಪಿಡಿಓ ನಿರಾಕರಿಸಿದ್ದಾರೆ. ಮಾಹಿತಿ ಕೊಡುವ ಆದೇಶವಿಲ್ಲ ವೆಂದು ಸಬೂಬು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...