ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಬೇಕಾಗಿದ್ದ, ಪಥಸಂಚಲನಕ್ಕೆ ಅನುಮತಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪಥಸಂಚಲನ ರದ್ದುಗೊಂಡಿದ್ದು, ಪೊಲೀಸರು ಪಟ್ಟಣದೆಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಘಟಕದಿಂದ ಪಥಸಂಚಲನ ನಡೆಸಲು ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಹೈಕೋರ್ಟ್ ಅನುಮತಿ ನೀಡದ ಕಾರಣದಿಂದ ಸಂಘದ ಕಾರ್ಯಕರ್ತರು ತೀವ್ರ ನಿರಾಶೆ ವ್ಯಕ್ತಪಡಿಸಿರುವ ಬೆನ್ನೆಲೆ ಭಾನುವಾರ ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಪಥಸಂಚಲನಕ್ಕೆ ಅನುಮತಿ ನಿರಾಕರಣೆ; ಆರ್ಎಸ್ಎಸ್ ಗಣವೇಷಧಾರಿಗಳ ಬಂಧನ
ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ಅಥವಾ ಶಾಂತಿಗೆ ಧಕ್ಕೆ ಉಂಟಾಗದಂತೆ 120 ಕ್ಕೂ ಹೆಚ್ಚು ಪೊಲೀಸರನ್ನು, 10 ಉಪನಿರೀಕ್ಷಕರನ್ನು ಹಾಗೂ 6 ವೃತ್ತ ನಿರೀಕ್ಷಕರನ್ನು (ಸಿಪಿಐ) ನಿಯೋಜಿಸಿ ಬಂದೋಬಸ್ತ್ ಕೈಗೊಳ್ಳಲಾಯಿತು. ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಪಥಸಂಚಲನ ನಡೆಯಬೇಕಿದ್ದ ಮಾರ್ಗಗಳಲ್ಲಿ ಪೊಲೀಸರು ಕಾವಲು ಹಾಕಿದರು.

ಪಥಸಂಚಲನ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಿದ್ದರೂ, ದಿನವಿಡೀ ಪಟ್ಟಣದ ಮುಖ್ಯ ಮಾರ್ಗಗಳಲ್ಲಿ ಪೊಲೀಸರ ಕಣ್ಗಾವಲು ಮುಂದುವರಿದಿತ್ತು.





