ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರನ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸುವಂತೆ ಆಗ್ರಹಿಸಿ ಬೌದ್ಧ ಉಪಾಸಕರ ಸಂಘ ಕಲಬುರಗಿ ಘಟಕ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ನಗರದ ಜಗತ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಂಪೂರ್ಣ ರಸ್ತೆ ತಡೆದು ಪ್ರತಿಭಟನಾಕಾರರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಮುಖಂಡ ದಿನೇಶ ದೊಡ್ಡಮನಿ ಮಾತನಾಡಿ, “ಅಕ್ಟೋಬರ್ 6ರಂದು ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ನಡೆದ ಈ ಘಟನೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಶೂ ಎಸೆದ ಜಾತಿವಾದಿ ವಕೀಲ ರಾಕೇಶ್ ಕಿಶೋರನ ಕೃತ್ಯ ಒಬ್ಬ ವ್ಯಕ್ತಿಯದು ಮಾತ್ರವಲ್ಲ; ಇದರ ಹಿಂದೆ ಬಿಜೆಪಿ, ಆರ್ಎಸ್ಎಸ್ ಹಾಗೂ ಹಿಂದೂ ಸನಾತನವಾದಿಗಳೆಂದು ಹೇಳಿಕೊಳ್ಳುವ ಕ್ಷುದ್ರ ಶಕ್ತಿಗಳು ಇವೆ ಎಂಬ ಅನುಮಾನ ಉಂಟಾಗಿದೆ. ಈ ಘಟನೆಯ ಕುರಿತು ತೀವ್ರ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದರು.
“ಮಾನ್ಯ ಗವಾಯಿ ಅವರು ಧೈರ್ಯ ಕಳೆದುಕೊಳ್ಳಬಾರದು. ಅವರ ಹಿಂದೆ ದೇಶದ ಅಂಬೇಡ್ಕರ್ವಾದಿಗಳು, ಪ್ರಜಾಪ್ರಭುತ್ವವಾದಿಗಳು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ನಿಂತಿದ್ದಾರೆ. ಅವರ ಪ್ರಾಮಾಣಿಕ ನ್ಯಾಯ ಸೇವೆ ಮುಂದುವರಿಯಲಿ” ಎಂದು ಹೇಳಿದರು.
ಇದನ್ನೂ ಓದಿ: ಕಲಬುರಗಿ | ಅಶೋಕ ವಿಜಯದಶಮಿ ಅಂಗವಾಗಿ ಪಂಚಶೀಲ ಧ್ವಜಾರೋಹಣ
ಈ ಸಂದರ್ಭದಲ್ಲಿ ಅರ್ಜುನ ಭದ್ರೆ, ಮತೆಪ್ಪ ಹಳ್ಳಿ, ಆರ್ ಕೆ ಹುಡಗಿ, ಹಣಮಂತ್ರಾಯ ದೊಡ್ಡಮನಿ, ಹಣಮಂತ ಬೋಧನಕರ, ಎ ಬಿ ಹೊಸಮನಿ, ಸಂತೋಷ ಮೇಲಿನಮನಿ, ಸೂರ್ಯಕಾಂತ ನಿಂಬಾಳಕರ, ದೇವೇಂದ್ರ ಸಿಮೂರ, ಪ್ರಕಾಶ ಮೂಲಭಾರತಿ, ಅರ್ಜುನ ಗೊಬ್ಬುರ್, ಸೂರ್ಯಕಾಂತ ಅಜಾದಪುರ್, ಸುನೀಲ್ ಮಾಲ್ಪಡೆ, ಆರ್ ಜಿ ಶೆಟಗಾರ, ರಜು ಕಂಪನೂರ್, ಮಲ್ಲಪ ಹೊಸಮನಿ, ಸುರೇಶ್ ಹಾದಿಮನಿ ಹಾಗೂ ಅನಿಲ್ ತೆಂಗಳಿ, ಈಶ್ವರ ಮಲ್ಕುಡಕರ್, ದೀಲಿಪ್ ಕಾಯಂಕರ್ ಇತರರು ಇದ್ದರು.





