ಕಲಬುರಗಿ | ಚಳಿಗಾಲದ ಅಂತ್ಯ – ವಸಂತಕಾಲದ ಆಗಮನ ಸೂಚಿಸುವ ಹೋಳಿ ಹಬ್ಬ

Date:

ಹೋಳಿಯು ದೇಶದಾದ್ಯಂತ ಹೆಚ್ಚು ಉತ್ಸಾಹ ಮತ್ತು ಸಡಗರ ಸಂಭ್ರಮದಿಂದ ಆಚರಿಸಲಾಗುವ ಬಣ್ಣಗಳ ಹಬ್ಬ ಹೋಳಿಯನ್ನು ಸಾಂಪ್ರದಾಯಿಕವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಆಚರಿಸಲಾಗುತ್ತದೆ. ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಹೋಳಿಹಬ್ಬ ಆಚರಣೆ ದುಲಂಡಿ ಅಂದರೆ, ಬಣ್ಣ ಆಡುವ ಹಿಂದಿನ ದಿನ ಸಂಜೆ ಎಲ್ಲರ ಮನೆಯಿಂದ ಕಟ್ಟಿಗೆ ಸಂಗ್ರಹಣೆ ಮಾಡಿ ಬಯಲು ಪ್ರದೇಶದಲ್ಲಿ ಕುಳ್ಳಿನ ಬಣಮೆ ಮಾಡಿ ಅದಕ್ಕೆ ಪೂಜೆಮಾಡಿ ನೈವೇದ್ಯ ಸಲ್ಲಿಸಿ, ಸಂಗ್ರಹಣೆ ಮಾಡಿರುವ ಕಟ್ಟಿಗೆ ಬಣಮೆ ಸುತ್ತಲೂ ಜೋಡಿಸಿ ಬೆಂಕಿ ಹಚ್ಚಿ ಬಣಮೆ ಸುತ್ತ, ಊರಿನ ಹಿರಿಯರು ಕಿರಿಯರು ಮಹಿಳೆಯರು ಸೇರಿಕೊಂಡು ಕಾಮಣ್ಣ ಸತ್ತರೆ ಭೀಮಣ್ಣ ಅಳತ್ತಾನೆ, ಭೀಮಣ್ಣ ಸತ್ತರೆ ಕಾಮಣ ಅಳುತ್ತಾನೆ ಎಂದು ಹಾಡು ಹಾಡುತ್ತಾ ಕಾಮಣ್ಣನನ್ನು ಸುಡುತ್ತಾರೆ.

ಹಳೆಯ ಬಟ್ಟೆ ಧರಿಸಿ ಬಣ್ಣ ಖರೀದಿಸಿ ತಂದು ಬಕೆಟ್, ಜಗ್ಗಳಲ್ಲಿ‌ ಬಣ್ಣ ಕಲಿಸಿ, ಸಣ್ಣ ಮಕ್ಕಳು ಬಾಟಲ್, ಪಿಚಕಾರಿಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಎಲ್ಲರಿಗೂ ಬೆಣ್ಣ ಎರಚಿ ಹಬ್ಬ ಆಚರಿಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಂತರ ಯುವಕರೆಲ್ಲ ಸೇರಿಕೊಂಡು ಹುಡುಗರು ಸೀರೆ ಧರಿಸಿ, ಅವರಲ್ಲಿ ಒಬ್ಬನನ್ನು ಹೆಣ್ಣದ ಹಾಗೆ ಅಲಂಕಾರ ಮಾಡಿ ಅವರನ್ನು ಹೊತ್ತುಕೊಂಡು ಹಲಿಗೆ ಬಾರಿಸುತ್ತಾ ಮನೆ ಮನೆಗೆ  ಕಾಮಣ್ಣ ಸತ್ತಾನೋ ಎಂದು ಮೆರವಣಿಗೆ ಮಾಡುತ್ತಾ, ಒಬ್ಬರಿಗೊಬ್ಬರು ಬಣ್ಣ ಹಚ್ಚುತ್ತಾ ಹಬ್ಬ ಆಚರಿಸುತ್ತಾರೆ.

ಮಸರು ತುಂಬಿದ ಮಡಿಕೆಯೊಡೆಯುವ ಆಟ ಸಹ ಆಡುತ್ತಾರೆ. ಸಂಬಂಧಿಕರ ಮನೆಯಲ್ಲಿ, ನೆರೆಯ ಹೊರೆಯವರ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರಿಗೆ ಸಕ್ಕರೆ ಹಾರ ಹಾಕುತ್ತಾರೆ. ಊರಲ್ಲಿರುವ ಮಕ್ಕಳಿಗೂ ಈ ಸರಕಳುಹಿಸಿಕೊಟ್ಟು ಸಂಭ್ರಮಾಚರಣೆ ಮಾಡುತ್ತಾರೆ.

ಬಣ್ಣಆಡಿ ಸಂಭ್ರಮಿಸಿದ ಬಳಿಕ ಮನೆಗೆ ಬೃುವವರಿಗೆ ಮನೆಯಲ್ಲಿ ಊಟಕ್ಕೆ ಕಡುಬು, ಪುಂಡಿಪಲ್ಯ, ಉಳ್ಳಾಗಡ್ಡಿ ಚಟ್ನ,ಕಡ್ಲಿ ಪಲ್ಯ ಮಾಡುತ್ತಿದರು ನಂತರ ಸಂಜೆ ಮಾಂಸದ ಅಡುಗೆ ಊಟ ಸವಿಯುವುದು.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...