ನಾಗಮೋಹನ್ ದಾಸ್ ವರದಿಯಲ್ಲಿ ಬಲಗೈ ಸಮುದಾಯದ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ ಎಂಬ ಆರೋಪದ ಹಿನ್ನೆಲೆ, ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿ ಮಾರ್ಚ್ 25ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ಬಲಗೈ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಜೇವರ್ಗಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ‘ಬಲಗೈ ಹೋರಾಟ ಸಮಿತಿ’ಯ ಪೂರ್ವಭಾವಿ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಮಾತನಾಡಿ, “ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸುವುದು ಅಗತ್ಯವಾಗಿದೆ. ಜೇವರ್ಗಿ ತಾಲ್ಲೂಕಿನಿಂದ ಸುಮಾರು 1000ಕ್ಕೂ ಹೆಚ್ಚು ಜನರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮರಿಯಪ್ಪ ಬಡಿಗೇರ್ ಮಾತನಾಡಿ, “ಸಮುದಾಯದ ಹಕ್ಕುಗಳ ರಕ್ಷಣೆಗೆ ನಡೆಯುತ್ತಿರುವ ಈ ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಹಿರಿಯ ಮುಖಂಡರಾದ ಸುಭಾಷ್ ಚನ್ನೂರ ಹಾಗೂ ಪುಂಡಲೀಕ ಗಾಯಕ್ವಾಡ್ ಮಾತನಾಡಿ, ಹಕ್ಕೊತ್ತಾಯದ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಒಳ ಮೀಸಲಾತಿ ಗೊಂದಲ ನಿವಾರಿಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸುವಂತೆ ಎಐಡಿಎಸ್ಒ ಆಗ್ರಹ
ಸಭೆಯಲ್ಲಿ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಬಸಣ್ಣ ಸರ್ಕಾರ್, ಹಯ್ಯಾಳಪ್ಪ ಗಂಗಾಕರ್, ವಕೀಲರಾದ ರಾಜಶೇಖರ್ ಶಿಲ್ಪಿ, ಮಲ್ಲಿಕಾರ್ಜುನ್ ಕಟ್ಟಿಮನಿ, ಸಿದ್ಧರಾಮಕಟ್ಟಿ, ಮಹಾದೇವ ಕೋಳಕೂರ, ಶ್ರೀಹರಿ ಕರ್ಕಳ್ಳಿ, ರವಿ ಕುಳಗೇರಿ, ದೌಲಪ್ಪ ಮದನ್, ಸಿದ್ದು ಕೆರೂರ್, ಮಾಪಣ್ಣ ಕಟ್ಟಿ, ಗುಂಡಪ್ಪ ಜಡಗಿ, ವಿಶ್ವಾರಾಧ್ಯ ಗೋಪಾಲ್ಕರ್, ರಾಯಪ್ಪ ಬಾರಗಿಡ, ಶ್ರೀಮಂತ ಧನ್ಯಕರ, ಹರಿಚಂದ್ರ ಕೊಡಚಿ, ನಿಜಲಿಂಗ ದೊಡ್ಡಮನಿ, ಶಾಂತು ಜಮಖಂಡಿ, ಸಂಗಮೇಶ ಕೊಂಬಿನ, ಶಿವಕುಮಾರ್ ಗೋಲ, ಬಾಗರೆಡ್ಡಿ ಆಂದೋಲ, ಮಲ್ಲಮ್ಮ ಕೊಬ್ಬಿನ, ಜಗದೇವಿ ಜಟ್ಟನಾಕರ್, ವಿಜಯ್ ಕುಮಾರ್ ಧರೆನ್, ಪ್ರಭಾಕರ್ ಸಾಗರ್, ಮರೆಪ್ಪ ಬೇಗಾರ್, ಶರಣು ಬಡಿಗೇರ್, ರಾಜು ಹಾಲಗಡ್ಲ, ಶಿವ ಶರಣಪ್ಪ ಮಾರಡಗಿ, ಸೂರ್ಯಕಾಂತ್ ಡುಗನ್ನರ್, ರೇವಣಸಿದ್ದ ಬಿರಾಳ್, ಯಶವಂತ ಬಡಿಗೇರ್, ಶ್ರೀಮಂತ ಕಿಲ್ಲೇದಾರ್ ಮಂಡೇವಾಲ್, ಹಣಮಂತ ಟೇಲರ್, ಮಿಲಿಂದ ಸಾಗರ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.





