ಕಲಬುರಗಿ | ಯುವ ಪತ್ರಕರ್ತರಿಂದ ಮಾಧ್ಯಮಕ್ಕೆ ಭವಿಷ್ಯವಿದೆ: ಸೂರ್ಯಕಾಂತ ಜಮಾದಾರ

Date:

ಡಿಜಿಟಲ್ ಮಾಧ್ಯಮ ಈಗ ತಾನೆ ಜನಿಸಿದ ಕೂಸು. ಈ ಮಾಧ್ಯಮಗಳು ನೈತಿಕತೆ ಕಾಪಾಡುವುದು ಮುಖ್ಯ. ಸುದ್ದಿ ಪ್ರಕಟ ಮಾಡುವ ಅವಸರದಲ್ಲಿ ಸತ್ಯಾಂಶವನ್ನು ಶೋಧಿಸುವಲ್ಲಿ ಅನೇಕ ಡಿಜಿಟಲ್ ಮಾಧ್ಯಮಗಳು ವಿಫಲವಾಗುತ್ತಿವೆ. ಯುವ ತಲೆಮಾರು ಮಾಧ್ಯಮ ಕ್ಷೇತ್ರಕ್ಕೆ ಬರಬೇಕು ಎಂದು ಹಿರಿಯ ಪತ್ರಕರ್ತ ಸೂರ್ಯಕಾಂತ ಜಮಾದಾರ ಅಭಿಪ್ರಾಯಪಟ್ಟರು.

ಕಲಬುರಗಿಯಲ್ಲಿ ಈಸುದ್ದಿ.ಕಾಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪತ್ರಕರ್ತರು ಜನರ ನಂಬಿಕಯನ್ನು ಪಡೆದುಕೊಳ್ಳುವುದು ಮುಖ್ಯ, ಜನರ ನಂಬಿಕೆಯಿಂದ ಮಾಧ್ಯವಗಳು ಉಳಿದುಕೊಳ್ಳಲು ಸಾಧ್ಯ ಎಲ್ಲಾ ವರ್ಗದ ಯುವಜನರಲ್ಲಿ ಆಕ್ರೋಶವಿದೆ ಹಾಗೂ ಪ್ರಶ್ನೆ ಮಾಡ್ತಾರೆ ಆದರೆ ಆ ಪ್ರಶ್ನೆಗಳಿಗೆ ನೈತಿಕತೆ ಇದೆಯಾ? ಎಂದು ತಮ್ಮನ್ನು ತಾವೆ ಪ್ರಶ್ನೆ ಮಾಡಿಕೊಳ್ಳಬೇಕು. ಪತ್ರಕರ್ತರ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮುಂದಿನ ಹೆಜ್ಜೆಯನ್ನಿಡಬೇಕು” ಎಂದರು.

“ವಿದ್ಯುನ್ಮಾನ ಮಾಧ್ಯಮಗಳು ಟಿಆರ್‌ಪಿಗಾಗಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಇದರ ನಡುವೆ ಡಿಜಿಟಲ್ ಮಾಧ್ಯಮಗಳು ಪದಾರ್ಪಣೆ ಮಾಡಿದ್ದು, ಅತಿವೇಗವಾಗಿ ಜನರಿಗೆ ತಲುಪುವ ಮತ್ತು ವಸ್ತುಸ್ಥಿತಿ ಹೊಂದಿರುವ ವರದಿಗಳನ್ನು ಜನರಿಗೆ ತಲುಪಿಸಿ ಅತಿ ವೇಗವಾಗಿ ಬೇಳೆಯುತ್ತಿವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ಮಾವಿನಕರ್, ” ಪ್ರತಿಷ್ಠಿತ ಮಾಧ್ಯಮಗಳು ಬಡ ಜನರ ಸಮಸ್ಯೆಗಳನ್ನು ಬಿಟ್ಟು ವೈಭವೀಕರಣದ ಹಿಂದೆ ಬಿದ್ದಿವೆ ಜನರ ಸಮಸ್ಯೆಗಳು ಕಣ್ಮಂದೆ ಕಂಡರು ಕೂಡ ಕಾಣದ ರೀತಿಯಲ್ಲಿ ವರ್ತಿಸುತ್ತಿವೆ. ಜನರಿಗೆ ಬೇಡಾವಾದ ಸುದ್ದಿಗಳನ್ನೆ ಮತ್ತೆ ಮತ್ತೆ ತೋರಿಸಿ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಿವೆ” ಎಂದು ಹೇಳಿದರು.

“ಡಿಜಿಟಲ್ ಮಾಧ್ಯಮಗಳು ಸತ್ಯಾಂಶವದ ಹುಡುಕಾಟ ಮಾಡಿ ಜನರ ದ್ವನಿಯಾಗಬೇಕು. ಕೆಲ ಜನರಪ ಮೀಡಿಯಾಗಳು ವೈಭವೀಕರಣದ ಸುದ್ದಿ ಚಾನೆಲ್ ಗಳ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಾಮಾನ್ಯ ಜನರಿಗೆ ಸತ್ಯ ತಲುಪುತ್ತಿದೆ, ಡಿಜಿಟಲ್ ಮಾಧ್ಯಮಗಳ ಮೇಲೆ ಜನರು ಹೆಚ್ಚು ಒಲವು ತೋರುತ್ತಿದ್ದಾರೆ” ಎಂದರು.

ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪಗಡೆ, ಸಂವಾದ ಯುವಜನ ಕಾರ್ಯಕರ್ತರಾದ ನಾಗೇಶ ಹರಳಯ್ಯ, ಸಂಶೋದಕಿಯಾದ ವಿಜಯಲಕ್ಷ್ಮಿ ದೊಡ್ಡಮನಿ, ರಾಜೇಂದ್ರ ರಾಜುವಾಳ, ಲಕ್ಷ್ಮಣ್ ಮಂಡಲಗೇರಾ, ಚಾಮರಾಜ ದೊಡ್ಡಮನಿ ಸೇರಿದಂತೆ ಇನ್ನಿತರರು ಇದ್ದರು…

ವರದಿ: ಅಶೋಕ್, ವಾಲೆಂಟಿಯರ್

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...