ದೇಶದ ಇತಿಹಾಸದಲ್ಲಿ ಸಾಮ್ರಾಜ್ಯ, ಸಂಪತ್ತು ಹಾಗೂ ಅಧಿಕಾರಕ್ಕಾಗಿ ಅನೇಕ ಯುದ್ಧಗಳು ನಡೆದಿದ್ದರೂ, ಭೀಮಾ ಕೋರೆಗಾಂವ್ ಯುದ್ಧವು ಸ್ವಾಭಿಮಾನಕ್ಕಾಗಿ ನಡೆದ ಮಹತ್ವದ ಹೋರಾಟವಾಗಿದೆ ಎಂದು ಡಾ. ಅಶೋಕ ದೊಡ್ಮನಿ ಹೇಳಿದರು.
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ‘ಎರಡನೇ ಬಾಜಿರಾಯ ಪೇಶ್ವೇ ಮಹಾರ್ ಸಮುದಾಯವನ್ನು ಸೇನೆಯಲ್ಲಿ ಸೇರಿಸಿಕೊಳ್ಳದೆ ಅವಮಾನಿಸಿದ ಹಿನ್ನೆಲೆ, ಮಹಾರ್ ರೆಜಿಮೆಂಟ್ ಸ್ವಾಭಿಮಾನಕ್ಕಾಗಿ ಬ್ರಿಟಿಷರೊಂದಿಗೆ ಸೇರಿ ಪೇಶ್ವೇ ಸೈನ್ಯವನ್ನು ಎದುರಿಸಿತು’ ಎಂದು ವಿವರಿಸಿದರು.

‘1818ರ ಜನವರಿ 1ರಂದು ನಡೆದ ಯುದ್ಧದಲ್ಲಿ ಪೇಶ್ವೇಯರ 28 ಸಾವಿರ ಸೈನಿಕರನ್ನು ಕೇವಲ 500 ಮಹಾರ್ ಸೈನಿಕರು ಸೋಲಿಸಿದ ಘಟನೆ ಇತಿಹಾಸದಲ್ಲಿ ದಾಖಲಾಗಿದ್ದು, ಈ ಮಹತ್ವದ ಇತಿಹಾಸವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂಶೋಧಿಸಿ ಜಗತ್ತಿಗೆ ಪರಿಚಯಿಸಿದ್ದಾರೆ’ ಎಂದರು.
ಇದನ್ನು ಓದಿದ್ದೀರಾ? ಯಾದಗಿರಿ | ಮನರೇಗಾ ಕೂಲಿ ಕಾರ್ಮಿಕರಿಂದ ಹೊಸ ವರ್ಷದ ಸಂಭ್ರಮ
ಕಾರ್ಯಕ್ರಮದಲ್ಲಿ ರುಕುಮ್ ಪಟೇಲ್ ಇಜೇರಿ, ಲಾಲಯ್ಯ ಗುತ್ತೇದಾರ, ಈರಣ್ಣ ಅವರಾದಿ, ಅಣ್ಣರಾಯ ಯಂಕಂಚಿ, ಅಮೀರ್ ಹಮೀಜ್ ಲಖನಾಪುರ, ಅಲ್ಲಪಟೇಲ್, ಈರಣ್ಣ ತಳವಾರ, ಪಿಡಿಒ ನಂದುಕುಮಾರ್, ಕಾಲಿದಮಿಯಾ, ದೇವು ಪೂಜಾರಿ, ಕಳ್ಳೆಪ್ಪಾ ಬೋವಿ, ಸೋಮನಾಳ ಗ್ರಾಮ ಸದಸ್ಯ, ಮಹಿಬೂಬ ಸೌದಗರ, ಸೈದಪ್ಪ ಶ್ರುತಿ, ಸೈದಪ್ಪ ಹೊಸಮನಿ, ನಿಂಗಣ್ಣ ಗುಳ್ಯಾಳ್, ಅಮೀನಪ್ಪ ಕಟ್ಟಿಮನಿ, ಸೈದಪ್ಪ ಮೂಡಬೂಳ, ಡಿಎಸ್ಪಿ ಪ್ರಕಾಶ, ಸದಾಶಿವ ಹಳ್ಳಿಗಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.





