ಯುವಕರಲ್ಲಿ ನಾಯಕತ್ವದ ಗುಣ ಬೆಳೆಸುವ ಕ್ರೀಡೆ ಕ್ರಿಕೆಟ್ ಎಂದು ಸಾಮಾಜಿಕ ಕಾರ್ಯಕರ್ತ ಮಿಲಿಂದ ಸಾಗರ ಅವರು ಹೇಳಿದರು.
ಜೇವರ್ಗಿ ಪಟ್ಟಣದ ಹೊರವಲಯದಲ್ಲಿರುವ ಕ್ರೀಡಾಂಗಣದಲ್ಲಿ ಚಾಂಪಿಯನ್ ಪ್ರೀಮಿಯರ್ ಲಿಂಗ್ ಜೇವರ್ಗಿ ವತಿಯಿಂದ ಆಯೋಜಿಸಲಾದ ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
‘ಕ್ರಿಕೆಟ್ ಕೇವಲ ಆಟವಲ್ಲ; ಅದು ಶಿಸ್ತು, ಸಹನೆ ಕಲಿಸುವ ಜೀವನ ಪಾಠವಾಗಿದೆ. ಗೆಲುವಿಗಿಂತ ಪ್ರಯತ್ನಕ್ಕೆ ಮೌಲ್ಯ ನೀಡಬೇಕು. ಸೋಲಿನಿಂದ ಪಾಠ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಎಂ.ಜಿ ರಸ್ತೆ ದುರಸ್ತಿ ವಿಳಂಬ ನೀತಿಯನ್ನು ಖಂಡಿಸಿ ವೆಲ್ಫೇರ್ ಪಾರ್ಟಿ ಪ್ರತಿಭಟನೆ
‘ಪ್ರತಿದಿನ ಕ್ರಿಕೆಟ್ ಅಭ್ಯಾಸ, ಆರೋಗ್ಯದ ಕಾಳಜಿ ಮತ್ತು ಸತ್ಯನಿಷ್ಠ ಆಟ ಇವೇ ನಿಜವಾದ ಚಾಂಪಿಯನ್ನ ಗುರುತು. ಕ್ರಿಕೆಟ್ ಕ್ರೀಡೆಯಿಂದ ಯುವಕರಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಲು ಇಂದಿನ ಯುವಜನತೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಲು ಮಾರಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾತಾಗೇಡ್, ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಪರಶುರಾಮ್ ನಡಗಟ್ಟಿ, ಅಮರ್ ಬೊಮ್ಮನಹಳ್ಳಿ, ಸುನಿಲ್ ಜವಾಳಗಿ, ಮಾಂತೇಶ ಬಡಿಗೇರ್ ಸೇರಿದಂತೆ ಅನೇಕ ಯುವಕರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.





