ಜನವರಿ 27 ರಿಂದ ಫೆಬ್ರವರಿ 3, 2026 ರವರೆಗೆ ಮೈಸೂರಿನ ಜೆ.ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಕ್ರಿಕೆಟ್ ಪುರುಷ ಪಂದ್ಯಾವಳಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳ ತಂಡ ಭಾಗವಹಿಸಲಿದೆ.
ಈ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದು, ‘ಪಂದ್ಯಾವಳಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕ್ರಿಕೆಟ್ ತಂಡವು ಸಂಪೂರ್ಣ ಸಿದ್ಧತೆಯೊಂದಿಗೆ ಮೈಸೂರಿಗೆ ತೆರಳಲಿದೆ’ ಎಂದು ತಿಳಿಸಿದ್ದಾರೆ.
ಪ್ರಕಟಣೆ ಪ್ರಕಾರ, ಚೈತನ್ಯ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ತಂಡದ ಸದಸ್ಯರಾಗಿ ಸುನೀಲ, ಇನಿತ್, ನಂದೀಶ, ಖಾದಿರ್, ಗಣೇಶ, ಅಭೀಷೇಕ ಎಸ್., ಓಂಕಾರ, ಸನಮಯಾ, ಶ್ರೀಕೃಷ್ಣ, ಮಹಮ್ಮದ್ ಅಬ್ದುಲ್ ಘಫೀರ್, ಮನೋಜ, ಮಹೇಶ, ಅಭೀಷೇಕ, ವಿವೇಕ ನಾಯಕ ಹಾಗೂ ಓಂ ರಂಜೋಲಕರ್ ಇವರು ಆಯ್ಕೆಯಾಗಿದ್ದಾರೆ.
‘ತಂಡದ ತರಬೇತುದಾರ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೇಡಂನ ಡಾ. ಜೆ.ಎಸ್. ಪಟ್ಟಣ್ಣಕರ್ ಕಾರ್ಯನಿರ್ವಹಿಸಲಿದ್ದಾರೆ. ಹಾಗೆಯೇ ತಂಡದ ವ್ಯವಸ್ಥಾಪಕರಾಗಿ ಗುಂಡೆಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೇಡಂನ ಡಾ. ಗಿರೀಶ ಜಂಗೆ ಇವರು ತಂಡದೊಂದಿಗೆ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಮದ್ಯ ನಿಷೇಧ ಆಂದೋಲನ; ಕಪ್ಪುಪಟ್ಟಿ ಧರಿಸಿ ಮಹಿಳೆಯರ ಮೌನ ಪ್ರತಿಭಟನೆ
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಶಿಕಾಂತ ಎಸ್. ಉಡಿಕೇರಿ, ಕುಲಸಚಿವರಾದ ಪ್ರೊ. ರಮೇಶ್ ಲಂಡನಕರ್, ಡಾ. ಎನ್.ಜಿ. ಕಣ್ಣೂರ (ಕುಲಸಚಿವರು–ಮೌಲ್ಯಮಾಪನ), ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಎಚ್.ಎಸ್. ಜಂಗೆ, ಸಂಯೋಜಕರು ಹಾಗೂ ಪ್ರಾಂಶುಪಾಲರು, ದೈಹಿಕ ಶಿಕ್ಷಣ ವಿಭಾಗದ ಶ್ರೀ ಪ್ರಕಾಶ ಆರ್ಯಳಕರ್, ಕ್ರೀಡಾಪಟು ಡಾ. ಚಂದ್ರಕಾಂತ ಬಿರಾದಾರ, ಶ್ರೀ ಪ್ರಶಾಂತಕುಮಾರ ಡಿ. ಹಾಗೂ ಶ್ರೀ ಅರುಣಕುಮಾರ ಎಚ್. ಇವರು ತಂಡದ ಯಶಸ್ಸಿಗೆ ಶುಭ ಹಾರೈಸಿದ್ದಾರೆ.





