ಕಲಬುರಗಿ ಜಿಲ್ಲಾ ವಿದ್ಯುತ್ ಶಕ್ತಿ ನಿಗಮ ನಿಯಮಿತದಿಂದ ಜೇವರ್ಗಿ ತಾಲೂಕಿನ ಮಾರಡಿಗಿ ಗ್ರಾಮದ ಬುದ್ಧ ನಗರದಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಮತ್ತು ಬೀದಿದೀಪದ ಕಂಬಗಳು ಹಾಗೂ ಹೊಸ ಲೈನ್ ಅಳವಡಿಸಲಾಯಿತು ಎಂದು ಜೆಸ್ಕಾಂ ಎಇಇ ರಾಜೇಂದ್ರ ಕಟ್ಟಿಮನಿ ತಿಳಿಸಿದರು.
ತಾಲೂಕಿನ ಮಾರಡಿಗಿ ಗ್ರಾಮದ ಬುದ್ಧ ನಗರದಲ್ಲಿ ಬೀದಿದೀಪ ಮತ್ತು ಟಿ ಸಿ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಎಸ್ಡಿಪಿ ಯೋಜನೆ ಅಡಿ 2015-16ನೇ ಸಾಲಿನಲ್ಲಿ ಟಿ ಸಿ, ಬೀದಿದೀಪಗಳನ್ನು ಹಾಕುವುದಾಗಿ ಆದೇಶ ನೀಡಿದ್ದರೂ ಕೂಡ ಗ್ರಾಮಸ್ಥರು ತಕರಾರು ಮಾಡಿದ ಕಾರಣಗಳಿಂದ ಟಿ ಸಿ, ಬೀದಿದೀಪ ಅಳವಡಿಸಿಲು ಸಾಧ್ಯವಾಗಿರಲಿಲ್ಲ. ದಲಿತ ಸೇನೆ ಮುಖಂಡ ಪ್ರಕಾಶ್ ಕಾಂಬ್ಳೆ, ಭೀಮರಾಯ ಕಾಂಬ್ಳೆ, ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ಪ ಹೊಸಮನಿ ಅವರ ನೇತೃತ್ವದಲ್ಲಿ ಟಿ ಸಿ, ಬೀದಿದೀಪ ಅಳವಡಿಸಲು ಸಾಧ್ಯವಾಯಿತು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಾದಕ ವಸ್ತು ಸೇವನೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ
ಈ ಸಂದರ್ಭದಲ್ಲಿ ಗುತ್ತೇದಾರ್ ಚಾಂದ್ ಪಾಶ, ಮಲ್ಕಪ್ಪ, ಗುರುಲಿಂಗಪ್ಪ ಗೌಡ ಪೊಲೀಸ್ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯ ಶಿವಪ್ಪ ಹೊಸಮನಿ, ಪ್ರಕಾಶ್ ಕಾಂಬಳೆ, ದೇವೇಂದ್ರಪ್ಪ ಬಂಗಾರಪ್ಪ, ಭೀಮರಾಯ ಕಾಂಬಳೆ, ಶರಣಪ್ಪ ಹೊಗೆನೂರ್, ಮಲ್ಲಪ್ಪ ನಡುವಿನಕೇರಿ, ದೇವಿಂದ್ರಪ್ಪ, ಚಂದಪ್ಪ ಹೊಸಮನಿ ಇದ್ದರು.




