“ಮನುಸ್ಮೃತಿಯಿಂದ ಅವನತಿ, ಅದರ ದಹನದಿಂದಲೇ ಸಮಸ್ಥರ ಉನ್ನತಿ” ಎಂಬ ಘೋಷವಾಕ್ಯದೊಂದಿಗೆ ಗುರುವಾರ ಮನುಸ್ಮೃತಿ ದಹಿಸಿ ಪ್ರತಿಭಟನೆ ಮಾಡಿದರು.
ಜೇವರ್ಗಿ ಪಟ್ಟಣದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಎದುರುಗಡೆ ವಿವಿಧ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರು, ಕಾರ್ಯಕರ್ತರು, ಯುವಕರು ಒಗ್ಗೂಡಿ ಮನುಸ್ಮೃತಿ ದಹನ ಮಾಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿದ ಅಸಮಾನತೆ, ಶೋಷಣೆ ಹಾಗೂ ಜಾತೀಯತೆಯಿಂದ ಕೂಡಿದ ಮನುಸ್ಮೃತಿಯ ಮನೋಭಾವ ಇಂದಿಗೂ ಸಮಾಜದಲ್ಲಿ ಜೀವಂತವಾಗಿದೆ ಎಂದು ಆರೋಪಿಸಿದರು. ಮನ್ಯಾಳ ಹತ್ಯೆಯಂತಹ ಘಟನೆಗಳಿಗೂ ಇದೇ ಮನುವಾದವೇ ಮೂಲ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾನತೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಮೇಲೆ ಆಧಾರಿತ ಸಮಾಜ ನಿರ್ಮಾಣವಾಗಬೇಕಾದರೆ, ಶೋಷಣೆ ಮತ್ತು ಜಾತಿ ಆಧಾರಿತ ಚಿಂತನೆಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಅವರು ಕರೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಮನುಸ್ಮೃತಿ ದಹನದಿಂದಲೆ ಸಮಸ್ಥರ ಉನ್ನತಿ ; ಕರಾದಸಂಸ ಬೃಹತ್ ಪ್ರತಿಭಟನೆ
ಈ ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರು, ಹಿರಿಯ ನಾಯಕರು ಹಾಗೂ ಅನೇಕ ಯುವಕರು ಸಕ್ರಿಯವಾಗಿ ಭಾಗವಹಿಸಿದ್ದರು.





