ರಾಮನಗರ ಜಿಲ್ಲೆ ಕನಕಪುರದ ಆರ್ಇಎಸ್ ಮೈದಾನದಲ್ಲಿ ಇಂದು ಹಾಗೂ ನಾಳೆ (ನ.29&30) ನಡೆಯಲಿರುವ ಬೃಹತ್ ಕೃಷಿ ಮೇಳಕ್ಕೆ ಸಿದ್ಧತೆ ನಡೆದಿದ್ದು, ಸುಮಾರು 150 ಸ್ಟಾಲ್ಗಳನ್ನು ನಿರ್ಮಿಸಿ ರೈತರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ರೂರಲ್ ಎಜುಕೇಶನ್ ಸೊಸೈಟಿ, ಜಿಕೆವಿಕೆ ಸಹಯೋಗದಲ್ಲಿ ಹಾಗೂ ಕೃಷಿ ಸಂಬಂಧಿತ ಎಲ್ಲಾ ಇಲಾಖೆಗಳು ಮೇಳಕ್ಕೆ ಸಹಕಾರ ನೀಡಿವೆ.
ಮೇಳದಲ್ಲಿ ಭಾಗವಹಿಸುವ ಜನರಿಗೆ ಕುಡಿಯುವ ನೀರು, ಊಟ, ಶೌಚಾಲಯ ವ್ಯವಸ್ಥೆ, ವೈದ್ಯರ ತಂಡ, ವಾಹನ ನಿಲುಗಡೆಗೆ ಜಾಗ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗೆ ಆಸ್ಪದವಿಲ್ಲದಂತೆ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು | ಕೇಂದ್ರದ ನೀತಿಗಳು, ರಾಜ್ಯ ಸರ್ಕಾರದ ಧೋರಣೆಗಳ ವಿರುದ್ಧ ಗುಡುಗಿದ ರೈತ-ಕಾರ್ಮಿಕರು
ತಾಲೂಕಿನಲ್ಲಿ ಮೊದಲ ಬಾರಿಗೆ ಕೃಷಿ ಮೇಳ ನಡೆಯುತ್ತಿದ್ದು, ಆಸಕ್ತರು ಪಾಲ್ಗೊಳ್ಳಲು ಆಯೋಜಕರು ಆಹ್ವಾನಿಸಿದ್ದಾರೆ.





