ಮುಂಗಾರಿಗೆ ಮುನ್ನುಡಿಯ ಹಬ್ಬ ‘ಕಾರ ಹುಣ್ಣಮೆ’

Date:

ಉತ್ತರ ಕರ್ನಾಟಕದ ರೈತರ ಸಾಂಸ್ಕೃತಿಕ ವೈಶಿಷ್ಟ್ಯತೆ, ವೈಭವತೆ ಮೆರೆಯುವುದು ಆ ನೆಲಮೂಲ ಸಂಸ್ಕೃತಿಯಿಂದಲೇ.., ಅಂತಹ ಸಂಸ್ಕೃತಿಯನ್ನು ಒಳಗೊಂಡ ಜನಪದರ ಹಬ್ಬವೇ ಕಾರಹುಣ್ಣಿಮೆ ಹಬ್ಬ. ಈ ಹಬ್ಬ ಬಂದಿತೆಂದರೆ ಬೆಳದಿಂಗಳು ಚೆಲ್ಲಿದ ಹಾಲಿನಂತೆ ರೈತರಲ್ಲಿ ಸಂತಸ ಮನೆ ಮಾಡಿರುತ್ತದೆ.

ಬೇಂದ್ರೆ ಅಜ್ಜ‌ ಮೇಘದೂತ ಕವನದಲ್ಲಿ ಕಾರ ಹುಣ್ಣುಮೆ ಕುರಿತು ಹೀಗೆ ಹೇಳಿದ್ದಾರೆ, “ಆಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತೂ ಇತ್ತು ಕೆಲವೇ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು ಕಾರಹುಣ್ಣಿಮೆಯ ಮಾರನೆಯ ದಿನವೇ ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ ಢಿಕ್ಕಿ ಯಾಡುವಾ ಆನೆ ಬೇಡಗನೊಪ್ಪಿ”

ಬಿರು ಬಿಸಿಲು ಕಳೆದು ಮುಂಗಾರು ಆರಂಭವಾಗುವ ಸಮಯಕ್ಕೆ, ರೈತ ಮುಂಗಾರಿ ಬಿತ್ತನೆಗೆ ತನ್ನ ಹೊಲವನ್ನು ಹದಗೊಳಿಸಲು ತನ್ನ ಎತ್ತುಗಳಿಗೆ ಪುರುಸೊತ್ತಿಲ್ಲದೇ ರೆಂಟಿ ಹೊಡಿಯೋದು, ಹರಗೋದು ಆದ ನಂತರ ಎತ್ತುಗಳಿಗೆ ಆರಾಮ್ ಇರಲು ಬಿಡುತ್ತಾನೆ. ತಾ ಕಸ ಕಡ್ಡಿ ಆರಿಸಿ ಮಳೆಗಾಗಿ ಮುಗಿಲಿಗೆ ಆಸೆಯಿಂದ ಕಣ್ಣಾಯಿಸುತ್ತಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಗ ಈ ಕಾರುಣ್ಣಿಮೆ ಹಬ್ಬ ಬರ್ತೈತಿ. ಆ ದಿನ ರೈತರು ಬೆಳ್ ಬೆಳಿಗ್ಗೆ ಎತ್ತುಗಳನ್ನ ಊರ ಹಳ್ಳಕ್ಕ ಕರ್ಕೊಂಡು ಹೋಗಿ ಸ್ವಚ್ಛಗ ಜಳಕ ಮಾಡಿಸಿ ಮನಿಗೆ ಬರುತ್ತಲೇ, ಹೆಣ್ಮಕ್ಕಳು ಹೋಳಗಿ ತಯಾರು ಮಾಡಿರ್ತಾರ. ಹೋಳಗಿ ತುಪ್ಪ ಗಡದ್ದಾಗಿ ಹೊಡದ ನಂತರ ಎತ್ತಿನ ಕೊಂಬುಗಳಿಗೆ ಹರಸಿನೆಣ್ಣಿ ಹಚ್ಚಿ, ಹಣೆಗೆ ಬಾಸಿಂಗ, ಹಣೆಪಟ್ಟಿ, ಕೊಂಬುಗಳಿಗೆ ಕೋಡಬಳಿ ಹಾಕಿ, ಜೂಲಾ ಕಟ್ಟಿ, ಎತ್ತಿನ ಮೈಮೇಲೆ ಚಿತ್ತಾರದ ಹೊದಿಕೆ ಹೊಚ್ಚಿ, ಕಾಲಿಗೆ ಗೆಜ್ಜಿ ಕಟ್ಟಿ, ಬಣ್ಣಗಳಿಂದ ಕಂಗೊಳಿಸುವಂತೆ ಅಲಂಕಾರ ಮಾಡುತ್ತಾರೆ.

ಕಾರು ಹುಣ್ಣಿಮೆ
ಊರ ಹಳ್ಳದಲ್ಲಿ ಎತ್ತುಗಳಿಗೆ ಜಳಕ ಮಾಡಿಸುತ್ತಿರುವುದು

ಸಾಯಂಕಾಲ ಊರ ಅಗಸಿ ಕಲ್ಲ, ಆಕ ಕಡೆ ಈ ಕಡೆ ಓಣಿ ಉದ್ದಕ್ಕೂ ಸಾವಿರಾರು ಜನರು ಎತ್ತುಗಳನ್ನ ನೋಡಾಕ ನಿಂತಿರುತ್ತಾರೆ. ಆ ಅಗಸಿ ಕಲ್ಲ ಎತ್ತರದ ಮೇಲೆ ಸೆಣಬಿಗೆ ಬೇವಿನ ಎಲೆಗಳನ್ನ ಸಾಲಿಡ್ದ ಕಟ್ಟಿ, ನಟ್ಟ ನಡುವೆ ಕೊಬ್ಬರಿ ಬೆಲ್ಲ ಕಟ್ಟಿ ಎಳೆ ಬಿಟ್ಟು, ಆ ಕಡೆ ಈ ಕಡೆ ಎಳೆದು ಕಟ್ಟುತ್ತಾರೆ. ಇದಕ್ಕ “ಎತ್ತಿನ ಕರಿ” ಅಂತಾರ. ರೈತರು ಸಿಂಗಾರಗೊಂಡ ತಮ್ಮ ತಮ್ಮ ಎತ್ತುಗಳು, ಹೋರಿಗಳನ್ನ ಸಾವಿರಾರು ಜನರ ನಡುವೆ ಎರಡು ಸುತ್ತು ಓಡಿಸಿಕೊಂಡು ಹೋಗುವುದನ್ನು ನೋಡುವುದೇ ಒಂದು ಸಂಭ್ರಮ.

ಹೀಗೆ ಎತ್ತುಗಳನ್ನು ಹೋರಿಗಳನ್ನ ಎರಡು ಸಾರಿ ಓಡಿಸಿದ ನಂತರ ಮೂರನೆ ಸಲಕ್ಕೆ ಕರಿ ಹರಿಯಬೇಕಿರುತ್ತದೆ. ಆಗ ರೈತರು ತಮ್ಮ ತಮ್ಮ ಹೋರಿಗಳನ್ನ ಓಡಿಸಿಕೊಂಡು ಬಂದು ಕೈಯಲ್ಲಿರುವ ಹಗ್ಗವನ್ನು ಕಟ್ಟಿದ ಕರಿಗೆ ಹರಿಯುತ್ತಾರೋ ಆ ಎತ್ತು, ಊರ ಜನರ ಬಾಯಲ್ಲಿ ಇಂತ ಎತ್ತು, ಕರಿ ಹರಿತು, ಅಂತ ಊರ ಖುಷಿಯಿಂದ ಹೇಳ್ತಾರ.

“ಎತ್ತಿನ ಕರಿ” ಹರಿದ ನಂತರ ನೋಡ್ತಿದ್ದ ಜನರು, ಒಮ್ಮಿಂದೊಮ್ಮೆ ಬೇವಿನ ತಪ್ಪಲ ತಗೊಳ್ಳೋಕೆ ಮುಗಿಬಿದ್ದು, ಕೈಗೆ ಸಿಕ್ಕಷ್ಟು ಮನಿಗೆ ತಂದು ಬೆಳೆಗಳನ್ನು ತುಂಬಿದ ಚೀಲದಲ್ಲಿ ಹಾಕಿದ್ರ ಉಣ್ಣಾಕ ತಿನ್ನಾಕ ಕೊರತೆ ಆಗಲ್ಲ ಅನ್ನೊ ನಂಬಿಕೆ.

ಕರಿ ಹರಿದ ಎತ್ತುಗಳನ್ನ ಊರ ತುಂಬ ಮೆರವಣಿಗೆ ಮಾಡಿ, ಮನಿಗೆ ಹೋಗಿ ಪೂಜೆ ಮಾಡಿ, ಎತ್ತಿಗೆ ಹೋಳಿಗೆ ತಿನ್ನಿಸಿ ಖಷಿಯಿಂದ ಮನೆಯಲ್ಲಿ ಕಟ್ತಾರೆ.

ಈ ಕಾರು ಹುಣ್ಣಿಮೆ ಮರುದಿನ ಮುಂಗಾರು ಮಳೆ ಚಾಲು ಆಗುತ್ತ. ಈ ಹಬ್ಬ ರೈತ ಹಾಗೂ ಪಶುಪ್ರಾಣಿಗಳ ಮೇಲೆ ಅಗಾದ ಪ್ರೀತಿ, ಕೃಷಿಯ ಮೇಲೆ ಇಟ್ಟಿರುವ ನಂಬಿಕೆ ಪ್ರತೀಕವಾಗಿದೆ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...