ಕರಾವಳಿ ಜಿಲ್ಲೆಗಳಲ್ಲಿ ಸುಮಾರು ಎಂಟು ಲಕ್ಷಕ್ಕೂ ಅಧಿಕ ಅಲ್ಪಸಂಖ್ಯಾತ ಸಮುದಾಯದ ಮತದಾರರಿದ್ದಾರೆ ಚುನಾವಣೆ ಸಂದರ್ಭಗಳಲ್ಲಿ ಪಕ್ಷಕ್ಕಾಗಿ ಹಗಲಿರುಳು ದುಡಿದು ಪಕ್ಷ ಸಂಘಟನೆ ಮಾಡುವ ಹಲವಾರು ನಾಯಕರುಗಳು ಇದ್ದಾರೆ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಯಾವುದೇ ರೀತಿಯ ಪ್ರಾತಿನಿಧ್ಯ ಕೊಡಲಿಲ್ಲ, ಜಿಲ್ಲೆಯಲ್ಲಿ ಪ್ರಮುಖ ಕೆಪಿಸಿಸಿ ಉನ್ನತ ಹುದ್ದೆಯ ಪದಾಧಿಕಾರಿಗಳಿದ್ದಾರೆ ಅಲ್ಪಸಂಖ್ಯಾತರ ಮುಂಚೂಣಿ ಘಟಕದ ಅಧ್ಯಕ್ಷರು, ಹಲವಾರು ನಾಯಕರುಗಳಿದ್ದಾರೆ. ಹಲವಾರು ಮಂದಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗೆ ಪಕ್ಷಕ್ಕೆ ಕೆಲಸ ಮಾಡುವ ನಾಯಕರು ಜಿಲ್ಲೆಯಲ್ಲಿ ಇದ್ದಾರೆ ಆದ್ದರಿಂದ ಈ ಬಾರಿ ಕರಾವಳಿ ಪ್ರಾಧೀಕಾರ ದ ಅಧ್ಯಕ್ಷ ಉಡುಪಿ ಜಿಲ್ಲೆಯ ಅಲ್ಪಸಂಖ್ಯಾತ ನಾಯಕರಿಗೆ ಕೊಡಬೇಕು ಎಂದು ಜಿಲ್ಲೆಯ ನಾಯಕರು, ಬ್ರಹ್ಮಾವರ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷರಾದ ಅಲ್ತಾಫ್ ಅಹಮ್ಮದ್ , ಪಕ್ಷದ ರಾಜ್ಯ ನಾಯಕರನ್ನು ಒತ್ತಾಯಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿದಿದ್ದಾರೆ.




