ನಾರಾಯಣಗೌಡ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಪಧಾಧಿಕಾರಿಗಳ ಅಯ್ಕೆ ಹಾಗೂ ವಾರ್ಷಿಕ ಸಭೆಯು ಉಡುಪಿ ಬನ್ನಂಜೆ ನಾರಯಣ ಗುರು ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ ನೆರವೇರಿಸಿದರು. ಬಳಿಕ ಜಿಲ್ಲಾ ಪಧಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ನಡೆಯಿತು.ಉಡುಪಿ ಕರವೇ ಪ್ರಧಾನ ಕಾರ್ಯದರ್ಶಿಯಾಗಿ ಸುಧೀಶ್ ಶೇಟ್ ರನ್ನು ಅಯ್ಕೆ ಮಾಡಲಾಯಿತು ನಗರ ಅಧ್ಯಕ್ಷರಾಗಿ ಅಜರುದ್ದೀನ್, ಜಿಲ್ಲಾ ಸಂಚಾಲಕರಾಗಿ ಸಂದೀಪ್ ಪೂಜಾರಿ, ಕಾರ್ಯದರ್ಶಿಯಾಗಿ ಪ್ರಶಾಂತ್ ದೇವಾಡಿಗ ಬಾರ್ಕೂರು ಅಯ್ಕೆ ಮಾಡಲಾಯಿತು.ಇದೇ ಸಂಧರ್ಭದಲ್ಲಿ ನೂತನ ಸದಸ್ಯರನ್ನು ಸೇರ್ಪಡೆ ಗೊಳಿಸಲಾಯಿತು.
ನೂತನ ಪ್ರಧಾನ ಕಾರ್ಯದರ್ಶಿ ಅಯ್ಕೆಯಾದ ಸುಧೀಶ್ ಶೇಟ್ ಮಾತನಾಡಿ ಉಡುಪಿ ಕರವೇ ಸಂಘಟನೆಗೆ ಸಾಧ್ಯವಾದಷ್ಟು ಯುವಕರು ಸೇರ್ಪಡೆಯಾಗಬೇಕು ಈ ಮೂಲಕ ಕನ್ನಡ ರಕ್ಷಣೆ ಕಾರ್ಯದ ಲ್ಲಿ ಭಾಗಿಯಾಗಬೇಕು. ಸಂಘಟನೆಯನ್ನು ಕಟ್ಟಲು ಬಹಳ ಪರಿಶ್ರಮದ ಅವಶ್ಯಕತೆ ಇದೆ ಕರ್ನಾಕಟಕ ರಕ್ಷಾಣಾ ವೇದಿಕೆ ಅಸ್ತಿತ್ವ ಉಳಿಸುವಲ್ಲಿ ನಾನು ಕೂಡ ಮುಂಚೂಣಿಯಲ್ಲಿರುತ್ತೇನೆ ಎಂದರು.

ಉಡುಪಿ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯನ್ನು ಬಲಿಷ್ಟವಾಗಿ ಬೆಳೆಸಬೇಕಾಗಿದೆ. ಇತರ ಜಿಲ್ಲೆಯ ಹೋರಾಟಗಳಂತೆ ಉಡುಪಿಯಲ್ಲೂ ನಾಡು ನೆಲ ಜಲ ಭಾಷೆ ಉಳಿವಿಗಾಗಿ ಹೋರಾಟಕ್ಕೆ ಇಳಿಯಬೇಕಾಗಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಸಂಘಟನೆ ನಿಮ್ನ ಬೆನ್ನೆಲುಬಾಗಿ ನಿಲ್ಲುತ್ತೆ ಎಂದು ಹೇಳಿದರು.
ವೇದಿಕೆಯಲ್ಲಿ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಗೀತಾಪಾಂಗಾಳ,, ಗೌರವಾಧ್ಯಕ್ಷ ಗೋಪಾಲ್ ಮೆಂಡನ್, ಕಾಪು ತಾಲೂಕು ಅಧ್ಯಕ್ಷ ವೀರೇಶ್ ಟಿ ಕೆ ಕಾಪು ಮಹಿಳಾ ಅಧ್ಯಕ್ಷೆ ಶಶಿಕಲಾ ಪೂಜಾರಿ ಹಾಗೂ ಜಿಲ್ಲಾ ಪದಾಧಿಕಾರಿಗಳು ತಾಲ್ಲೂಕು ಅಧ್ಯಕ್ಷರುಗಳು ಇಲ್ಲ ಕಾರ್ಯದರ್ಶಿ ಮಜೀದ್ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಇಲ್ಲ ಮಹಿಳಾಧ್ಯಕ್ಷ ಅಶ್ವಿನಿ ನಾಯಕ್ ಜಿಲ್ಲಾ ಮಹಿಳಾ ಮುಖಂಡೇ ಜಯಶ್ರೀ ಸುವರ್ಣ. ಗೀತಾ ಸುಜಾತ ಪೂಜಾರ್ತಿ ವಿದ್ಯಾರ್ಥಿ ಘಟಕದ ನಾಯಕಿ ಪ್ರಿಯಾಂಕಾ ಜಿಲ್ಲಾ ಮುಖಂಡ ಪ್ರಸಾದ್ ಪೂಜಾರಿ ಜಿಲ್ಲಾ ಮುಖಂಡೆ ಶ್ರೀಮತಿ ಮೋಹಿನಿ ಜಿಲ್ಲಾ ಮುಖಂಡರು ಗಣೇಶ್ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು.





