ಕೊಡಗು | ಸಿಪಿಐ(ಎಂಎಲ್‌)ಆರ್‌ಐ ಜಿಲ್ಲಾ ಸಮಿತಿಯಿಂದ ಯುವಜನರ ಕಾರ್ಯಗಾರ

Date:

ಪ್ರಸ್ತುತ ಸಮಾಜದಲ್ಲಿ ಯುವಜನರ ಸಮಸ್ಯೆಗಳು ಮತ್ತು ಕೋಮುವಾದಿ ಸರ್ವಾಧಿಕಾರಿಗಳ ನೀತಿಗಳ ಬಗ್ಗೆ, ಯುವ ಜನಾಂಗ ಡೋಂಗಿ ರಾಜಕಾರಣಿಗಳ, ಆರ್‌ಎಸ್ಎಸ್, ಸಂಘ-ಪರಿವಾರದ ಕೈ ಗೊಂಬೆಯಾಗದೆ ಎಂದು ಕಾಮ್ರೇಡ್  ಬಿ.ಆರ್. ರಂಗಸ್ವಾಮಿ ಹೇಳಿದರು.

ಕೊಡಗಿನ ಕುಶಾಲನಗರದಲ್ಲಿ ನ.13ರಂದು ಸಿಪಿಐ(ಎಂಎಲ್‌)ಆರ್‌ಐ ಜಿಲ್ಲಾ ಸಮಿತಿ ಯುವಜನರ ಕಾರ್ಯಗಾರವನ್ನು ವೈ.ಎ. ಮಂಜುನಾಥ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿತ್ತು. ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗದಿಂದ ನೂರಕ್ಕೂ ಹೆಚ್ಚು ಯುವ ಜನರು, ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಬಿ.ಆರ್. ರಂಗಸ್ವಾಮಿ ಮಾತನಾಡಿದರು.

ಇಡೀ ಸಿಸ್ಟಮ್ ಅನ್ನು ಅರ್ಥಮಾಡಿಕೊಳ್ಳಬೇಕು ನಮಗೆ ರಾಜಕೀಯ ಪಕ್ಷಗಳು ಅವುಗಳ ಅಧಿಕಾರಗಳು ಬದಲಾದರೆ ಸಾಲದು? ಶತಶತಮಾನಗಳಿಂದ ಈ ದೇಶದ ಅಧಿಕಾರ, ಸಂಪತ್ತು ಎಲ್ಲವನ್ನೂ ಒಂದೇ ವರ್ಗ, ಶ್ರೀಮಂತ, ಬಂಡವಾಳಶಾಹಿ, ಕಾರ್ಪೊರೇಟ್  ಶಕ್ತಿಗಳೇ ಅನುಭವಿಸಿ ಕೊಂಡು ಬರುತ್ತಿರುವ ವ್ಯವಸ್ಥೆ ಬದಲಾಗಬೇಕು. ಆಗ ಮಾತ್ರ ನಮ್ಮ ಸಮಾನತೆ ಸಾಧ್ಯ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಡಾ. ಪದ್ಮಶ್ರೀ ಮಾತನಾಡಿ, ಯುವಜನರು ಸೆಲ್ ಫೋನ್ ದಾಸರಾಗಿದ್ದಾರೆ. ಸೆಲ್ ಅಂದರೆ ಜೈಲು. ಮೊಬೈಲ್ ಜೈಲಿನೊಳಗೆ ಸಿಲುಕಿದ್ದಾರೆ. ಜಿಯೋ ಕಂಪನಿ ಅವರನ್ನು ನಿಯಂತ್ರಣ ಮಾಡುತ್ತಿದೆ. ಸಮಾಜದ, ತಂದೆ, ತಾಯಿಗಳ ಮಾತುಗಳನ್ನು ಕೇಳಲಾರದಷ್ಟು ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಆದರೂ, ಕೂಡ ಸೆಲ್ ಫೋನ್ ಒಳಗಡೆ ಬರುವ ಅಹಿತಕರ ಘಟನೆಗಳಿಗೆ, ಜನವಿರೋಧಿ ನೀತಿಗಳಿಗೆ, ಬೆತ್ತಲೆ ಮೆರವಣಿಗೆ, ಅತ್ಯಾಚಾರದ ವಿರುದ್ಧ, ಬಡವರ ಶೋಷಣೆಯ ವಿರುದ್ಧ ಸೆಲ್ ಫೋನ್‌ನಲ್ಲಿಯೇ ಉತ್ತರ ನೀಡಬಹುದು. ಆದರೆ, ಅದನ್ನು ಮಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಮ್ರೆಡ್ ಡಿ.ಎಸ್. ನಿರ್ವಾಣಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತಾ  ಕೊಡಗು, ಮಲೆನಾಡಿನ ಭಾಗದ ದುಡಿಯುವ ಯುವ ಜನಾಂಗದ ಸಮಸ್ಯೆಗಳ ಬಗ್ಗೆ ವಿವರವಾಗಿ ಮಾತನಾಡಿದರು.

ಕಾರ್ಯಗಾರದ ವೇದಿಕೆಯಲ್ಲಿ ಸಿಪಿಐಎಂಎಲ್ಆರ್ಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ವೈ.ಎಂ.ಸುರೇಶ್, ಜಗದೀಶ್, ಎಚ್.ಜೆ.ಪ್ರಕಾಶ್, ವೈ.ಪಿ.ಮೋಹನ, ಮುತ್ತಣ್ಣ ಸೌಂದರ್ಯ, ಇಂದಿರಾ ಬಾಬು ಇತರರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...