ಕೋಲಾರ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 639 ಲಕ್ಷದ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ 35 ಫಲಾನುಭವಿಗಳಿಗೆ ಮಂಜೂರಾಗಿರುವ ಉಚಿತ ಕೊಳವೆಬಾವಿ ಕೊರೆಯುವ ಕಾರ್ಯಕ್ರಮಕ್ಕೆ ಶಾಸಕ ಕೊತ್ತೂರು ಜಿ ಮಂಜುನಾಥ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕೋಲಾರ ನಗರಸಭೆ ಡಲ್ಟ್ ಅನುದಾನದಲ್ಲಿ ನಗರದ ಪೊಲೀಸ್ ವರಿಷ್ಠಾಧಿಕಾರಿಗಳ ವಸತಿ ಗೃಹದಿಂದ ಚಿಕ್ಕಬಳ್ಳಾಪುರ ರಸ್ತೆ ರೈಲ್ವೆ ಸೇತುವೆ ವರೆಗೆ 389 ಲಕ್ಷಗಳ ವೆಚ್ಚದಲ್ಲಿ ರಸ್ತೆ ಮತ್ತು ಫುಟ್ ಪಾತ್ ಅಭಿವೃದ್ಧಿ ಹಾಗೂ ಕೋಲಾರ ನಗರಸಭೆಯ ಎಸ್.ಡಿ.ಎಂ.ಎಫ್ ಅನುದಾನದಲ್ಲಿ ಅಂದಾಜು ಮೊತ್ತ 250 ಲಕ್ಷಗಳ
ವೆಚ್ಚದಲ್ಲಿ ಕೋಲಾರ ನಗರದ ಕೋಲಾರಮ್ಮ ಕೆರೆಗೆ ಸೇರುವ ರಾಜಕಾಲುವೆಯಲ್ಲಿ ಸೇತುವೆ ಮತ್ತು ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಎಂಎಲ್ಸಿ ಎಂ ಎಲ್ ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್, ಕೂಡ ಅಧ್ಯಕ್ಷ ಹನೀಫ್, ನಗರಸಭೆ ಸದಸ್ಯರಾದ ಅಪ್ಸರ್, ಏಜಾಜ್, ಅಂಬರೀಷ್, ಶಾಮೀರ್, ಶಫಿ, ಏಜಾಜ್, ಮುರಳೀಗೌಡ, ರಾಕೇಶ್, ಕೆಎಂಡಿಸಿ ನಿರ್ದೇಶಕ ಅಬ್ದುಲ್ ಖಯ್ಯುಂ,ಮಂಜುನಾಥ್ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಸುಜಾತ ಚಾಂದಕವಟೆ, ಕ್ಷೇತ್ರ ಅಧಿಕಾರಿ ಅಂಬರೀಶ್, ಸಿಬ್ಬಂದಿ ವಿಶ್ವನಾಥ, ಗುತ್ತಿಗೆದಾರ ಚಲಪತಿ ಮುಖಂಡರಾದ ಮೈಲಾಂಡಹಳ್ಳಿ ಮುರಳಿ ಮುಂತಾದವರಿದ್ದರು.
ಇದನ್ನೂ ಓದಿ: ಕೋಲಾರ | ಜು. 9ರ ಅಖಿಲ ಭಾರತ ಕಾರ್ಮಿಕರ ಸಾರ್ವತ್ರಿಕ ಮುಷ್ಕರಕ್ಕೆ ಸಿಪಿಐಎಂ ಪಕ್ಷ ಬೆಂಬಲ





