ಕೋಲಾರ ನಗರದಲ್ಲಿ ದಿನೇದಿನೆ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಾದ್ಯಂತ ರಾತ್ರಿ ಮತ್ತು ಹಗಲು ಪೊಲೀಸ್ ಗಸ್ತು ತಿರುಗುತ್ತಿದ್ದು, ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ.
ಕೋಲಾರ ನಗರದಲ್ಲಿ ಕಳೆದ ಒಂದು ವಾರದಿಂದ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ನೂತನ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಅವರು ಈಗಾಗಲೇ ಈ ಹಗಲು, ರಾತ್ರಿ ಹೆಚ್ಚಿನ ಪೊಲೀಸ್ ಗಸ್ತನ್ನು ನಿಯೋಜಿಸಿದ್ದು, ಈಗಾಗಲೇ ಕಳ್ಳತನವಾಗಿರುವ ಬೈಕ್ಗಳ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಒಂದಷ್ಟು ವಾಹನ ಕಳ್ಳರನ್ನು ಸೆರೆ ಹಿಡಿಯಲಾಗಿದ್ದು, ಅವರಿಂದ ಒಂದಷ್ಚು ವಾಹನಗಳನ್ನು ಪಡೆದಿದ್ದಾರೆಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಅಪಘಾತ ಪ್ರಕರಣಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ: ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ
ಈ ಕುರಿತು ಮಾತನಾಡಿದ ರಕ್ಷಣಾಧಿಕಾರಿ, ದ್ವಿಚಕ್ರ ವಾಹನಗಳ ಪತ್ತೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಸಾರ್ವಜನಿಕರು, ಮನೆಯ ಹೊರಗೆ ವಾಹನ ನಿಲ್ಲಿಸುವವರು ಅದರಲ್ಲೂ
ರಾತ್ರಿ ವೇಳೆ ವಾಹನ ನಿಲ್ಲಿಸುವವರು ವಾಹನ ಬೀಗ ಹಾಗೂ ಇನ್ನಿತರೆ ವಸ್ತುಗಳ ಭದ್ರತೆ ಬಗ್ಗೆ ನಿಗಾ ವಹಿಸುವಂತೆ ಮನವಿ ಮಾಡಿದ್ದಾರೆ.





