ಸೀರತ್ ಅಭಿಯಾನದ ಪ್ರಯುಕ್ತ ಸಾರ್ವಜನಿಕ ಸಮಾವೇಶ

Date:

ಕೋಲಾರ : ಸೀರತ್ ಅಭಿಯಾನ ಸಮಿತಿ ಹಾಗೂ ಜಮಾತೆ ಇಸ್ಲಾಮಿ ಹಿಂದ್ ಕೋಲಾರ ಸಮಿತಿ ವತಿಯಿಂದ ಇಂದು ನಗರದ ಸ್ಕೌಟ್ಸ್ ಭವನದಲ್ಲಿ ಸೀರತ್ ಅಭಿಯಾನ ಪ್ರಯುಕ್ತ ಸಾರ್ವಜನಿಕ ಸಮಾವೇಶ ಕಾರ್ಯಕ್ರಮ ನಡೆಯಿತು.

ಪ್ರವಾದಿ ಮುಹಮ್ಮದ್ ಪೈಗಂಬರ್ ಜೀವನ ಚರಿತ್ರೆಯನ್ನು ನಾವು ಅಳವಡಿಸಿಕೊಳ್ಳಬೇಕು. ಪವಿತ್ರ ಕುರಾನ್ ನಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದೆ, ಪ್ರವಾದಿ ಮುಹಮ್ಮದ್ ರವರು ಎಲ್ಲರಿಗೂ ಶಾಂತಿ, ಸತ್ಯ, ನ್ಯಾಯದ ಪರಿಕಲ್ಪನೆಯನ್ನು ತಿಳಿಸಿದರು.

ನ್ಯಾಯದ ಪಾಲನೆ ನಮ್ಮಲ್ಲಿ ಬಂದ್ರೆ ಸಮಾಜದಲ್ಲಿ ಶಾಂತಿ ನಿರ್ಮಾಣವಾಗುತ್ತೆ, ಅಪರಾಧ ಹಾಗೂ ಭ್ರಷ್ಟಾಚಾರವು ಕಡಿಮೆಯಾಗುತ್ತೆ, ನ್ಯಾಯದ ಅಗತ್ಯತೆ ಸಾಮಾಜಕ್ಕೆ ಬಳಹ ಅಗತ್ಯವಿದ್ದು, ಮನೆಯಿಂದಲೇ ಮಕ್ಕಳಿಗೆ ನ್ಯಾಯದ ಅರಿವು ಷೋಷಕರು ಮೂಡಿಸಬೇಕಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಹಿಳೆಯರಿಗೆ ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸರಿಯಾದ ರೀತಿಯಲ್ಲಿ ಸ್ಥಾನಮಾನ ಇರಲಿಲ್ಲ, ಜೀವಂತವಾಗಿ ಹೆಣ್ಣು ಮಕ್ಕಳನ್ನು ಹೂಡುತ್ತಿದ್ದರು ಆದರೆ ಪ್ರವಾದಿ ಮುಹಮ್ಮದ್ ಪೈಗಂಬರ್ ರವರು ಹೆಣ್ಣು ಮಕ್ಕಳ ಮೇಲೆ ಆಗುತ್ತಿದ್ದ ದೌರ್ಜನ್ಯವನ್ನು ತಡೆಗಟ್ಟಿ ಸಮಾನವಾದ ಅವಕಾಶ ಕಲ್ಪಿಸಿಕೊಟ್ಟರು.

ತಂದೆ ತಾಯಿ ಜೊತೆ ನಮ್ರತೆ, ಪ್ರೀತಿಯಿಂದ ವರ್ತಿಸಬೇಕು, ಅವರ ಕೆಲಸಗಳಲ್ಲಿ ಸಹಾಯ ಮಾಡ್ಬೇಕು,ನಿಮ್ಮ ತಂದೆ ತಾಯಿಯಿಂದಲೇ ಸ್ವರ್ಗ ಸಿಗುತ್ತೆ, ಎಂದು ಪ್ರವಾದಿಯವರು ಹೇಳುತ್ತಾರೆ.

ಎರಡು ಗುಂಪುಗಳ ನಡುವೆ ಸಂಘರ್ಷ ಇದ್ರೆ ನ್ಯಾಯದ ಆಧಾರದ ಮೇಲೆ ಶಾಂತಿಯ ಸಂಧಾನ ಮಾಡಬೇಕು. ಮನುಷ್ಯರೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸಬೇಕು, ವ್ಯವಹಾರದಲ್ಲಿ ಪ್ರಾಮಾಣಿಕವಾಗಿಬೇಕು. ಯಾರ ಹಕ್ಕನ್ನು ಹೊಡೆಯಬಾರದು, ಮೋಸ ಮಾಡಬಾರದು. ದ್ವೇಶದ ಮಾರ್ಗ ನ್ಯಾಯದಲ್ಲಿ ಅಡ್ಡ ಬರಬಾರದು.ಪ್ರವಾದಿಯವರು ಸರಿಗೆ ಸರಿ ತಪ್ಪಿಗೆ ತಪ್ಪು ಅಂತ ತೀರ್ಪು ಕೊಡುತ್ತಿದ್ದರು. ಅವರ ಜೀವನ ಚರಿತ್ರೆ ನಾವು ರೂಡಿಸಿಕೊಳ್ಳಬೇಕು ಎಂದು ಜಮಾತೆ ಇಸ್ಲಾಮಿ ಹಿಂದ್ ಬೆಂಗಳೂರು ಸಲಹಾ ಸಮಿತಿ ಸದಸ್ಯರಾದ ಡಾ. ಮಸೂದ್ ಶರೀಫ್ ತಿಳಿಸಿದರು.

ಶ್ರೀ ಶ್ರೀ ಸ್ವಾಮಿ ದತ್ತಪಾದನಂದ ಆಚಾರ್ಯರು ಮಾತನಾಡಿ ಮನುಷರು ಎಲ್ಲರೂ ಒಂದೇ, ಎಲ್ಲರ ರಕ್ತವು ಸಹ ಒಂದೇ ತರ ಇರುತ್ತೆ, ಎಲ್ಲಾ ಧರ್ಮದ ಗ್ರಂಥಗಳು ಜೀವನ ಯಾವ ರೀತಿ ಮಾಡಬೇಕು ಎಂದು ತಿಳಿಸುತ್ತದೆ, ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜೀವನ ಶೈಲಿಯಲ್ಲಿ ನಾವು ಅಳವಡಿಸಿಕೊಳ್ಳಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಅನ್ವರ್ ಪಾಷ ಮಾತನಾಡಿ ಸುಮಾರು ವರ್ಷಗಳಿಂದ ಹಿಂದೆ ಪ್ರವಾದಿಗಳು, ದಾರ್ಶನಿಕರು, ಮಹಾ ಪುರುಷರು ಸಮಾಜ ಸುಧಾರಣೆ ಮಾಡುವ ಕೆಲಸ ಮಾಡಿದರು. ಬೇರೆ ಸಮಾಜದ ಜೊತೆ ಜಗಳ ಮಾಡುವ ಕೆಲಸ ಯಾರು ಕೊಡಲಿಲ್ಲ ಎಲ್ಲರ ಉದ್ದೇಶ ಆರೋಗ್ಯಕರವಾದ ಸಮಾಜ ಇರಬೇಕು ಎಂದು ಆದರೆ ಇವತ್ತು ದೇಶದಲ್ಲಿ ಯಾರು ದ್ವೇಷ ಭಾಷಣ ಮಾಡ್ತಾರೆ ಅವರಿಗೆ ಹಿರೋ ತರ ಬಿಂಬಿಸುತ್ತಾರೆ. 1400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್ ರವರು ಸೌದಿ ಅರೇಬಿಯಾದಲ್ಲಿ ಜನ್ಮ ತಾಳಿದರು.ಆ ಸಮಯದಲ್ಲೂ ಸಮಾಜ ಒಳ್ಳಯರೀತಿ ಇರಲಿಲ್ಲ, ಬಹಳ ಕೆಟ್ಟ ಕೆಲಸ ಇತ್ತು, ಆಗ ಪ್ರವಾದಿ ಮುಹಮ್ಮದ್ ರವರು ಸಮಾಜ ಸುಧಾರಣೆ ಮಾಡುವ ಕೆಲಸ ಮಾಡಿದರು, ಜನರ ಜೀವನವನ್ನು ಸುಧಾರಣೆ ತಂದರು, ಶಾಂತಿ, ನ್ಯಾಯ ಸತ್ಯದ ಪರಿಕಲ್ಪನೆ ನೀಡಿದರು. ಇಂದು ಜಗತ್ತಿನಲ್ಲಿ ಸುಮಾರು 200 ಕೋಟಿಗೂ ಹೆಚ್ಚು ಜನ ಪ್ರವಾದಿ ಅವರನ್ನು ಅನುಸರಿಸುತ್ತಿದ್ದಾರೆ.

ಜಮಾತೆ ಇಸ್ಲಾಮಿ ಹಿಂದ್ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜೀವನ ಚರಿತ್ರೆ ಅವರು ಮಾಡಿದ ಸಮಾಜ ಸುಧಾರಣೆಯ ಕ್ರಮಗಳನ್ನು ಜನರಿಗೆ ಹಾಗೂ ಎಲ್ಲಾ ಸಮಾಜದವರಿಗೆ ಅರಿವು ಮೂಡಿಸಿ ತಪ್ಪು ಕಲ್ಪನೆ ಹೋಗಲಾಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನು ಓದಿದ್ದೀರಾ..? ದರೋಡೆ ಮಾಡಲು ಹಾಗೂ ಸಮಾಜಘಾತಕ ಕೃತ್ಯಗಳನ್ನು ಎಸಗಲು ಹೊಂಚು ಹಾಕುತ್ತಿದ್ದ ತಂಡ ಅಂದರ್

ಈ ಸಂದರ್ಭದಲ್ಲಿ ಕೋಲಾರ ನಗರಸಭೆ ಅಧ್ಯಕ್ಷರಾದ ಲಕ್ಷ್ಮೀ ದೇವಮ್ಮ, ಹಿರಿಯ ಮುಖಂಡ ರಾದ ಮುನಿಯಪ್ಪ, ಶಾಂತಕುಮಾರ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ರುಹುಲ್ಲಾ, ನಗರಸಭೆ ಮಾಜಿ ಅಧ್ಯಕ್ಷ ಅಪ್ರೋಜ್ ಪಾಷ, ಹಿರಿಯ ಮುಖಂಡರಾದ ಸಲಾವುದ್ದೀನ್ ಬಾಬು, ನಗರಸಭೆ ಸದಸ್ಯ ಅಂಬರೀಷ್ ಹಲವಾರು ಸಂಘಟನೆಗಳ ಮುಖಂಡರು,ಅನ್ಸರ್, ಅಜ್ಮಲ್, ನಫೀಜ್ ಮುಂತಾದವರು ಉಪಸ್ಥಿತರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ ಪ್ರಾಂತ ರೈತ ಸಂಘ ನೂತನ ರಾಜ್ಯ ಸಮಿತಿ ಆಯ್ಕೆ

ಕೋಲಾರ : ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌)ದ 18ನೇ ರಾಜ್ಯ ಸಮ್ಮೇಳನ...

ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುವ ವರ್ತಕರ ವಿರುದ್ಧ ಈ ಕಾನೂನು ಕ್ರಮ : ಡಾ. ಎಂ. ಆರ್. ರವಿ

ಕೋಲಾರ:ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳು...

ಇರಾನ್ ಯುದ್ದ ನಿಲ್ಲಿಸುವಂತೆ ಯು ಬಸವರಾಜ್ ಒತ್ತಾಯ.

ಕೋಲಾರ: ಇರಾನ್ ದೇಶದಲ್ಲಿರುವ ತೈಲ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವ ದುರುದ್ದೇಶದಿಂದ ಆ...

ಟೊಮೆಟೊ ಬೆಲೆ ಕುಸಿತ: ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಸಂಕಷ್ಟ

ಪ್ರತಿದಿನ ಟೊಮೆಟೊ ಬೆಲೆ ಕುಸಿಯುತ್ತಿರುವ ಕಾರಣ ರೈತರು ನಿರಾಶೆಗೆ ಒಳಗಾಗಿದ್ದಾರೆ. ಕೋಲಾರ...