ಕೊಪ್ಪಳಕ್ಕೆ ಹತ್ತಿರವಿರುವ ಭಾಗ್ಯನಗರ ಪಟ್ಟಣದ ಸಂತೆಯಲ್ಲಿ ಸುಮಾರು 2 ಗಂಟೆ ಅವಧಿಯಲ್ಲಿ 4 ಲಕ್ಷಕ್ಕೂ ಅಧಿಕ ಬೆಲೆಬಾಳುವ ಬರೋಬ್ಬರಿ 8 ಮೊಬೈಲ್ ಕಳುವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಂದು ಬೆಳಗ್ಗೆ 6 ಗಂಟೆ ನಂತರ ಪಟ್ಟಣದಲ್ಲಿ ಆರಂಭವಾಗುವ ಸಂತೆ ಜನಜಂಗುಳಿಯಿಂದ ತುಂಬಿರುತ್ತದೆ. ಸಹಜವಾಗಿಯೇ ಸಂತೆಗೆ ತರಕಾರಿ ಖರಿದಿಸುವವರಂತೆ ಬಂದು, ಕೊಳ್ಳುವ ಗ್ರಾಹಕರಂತೆ ಸುತ್ತಾಡುವ ಖತರ್ನಾಕ್ ಕಳ್ಳರು ಗ್ರಾಹಕರ ಅರಿವಿಗೆ ಬಾರದಂತೆ ಅವರ ಜೇಬ್ನಲ್ಲಿರುವ ಮೊಬೈಲ್ ಫೋನ್ ಎಗರಿಸಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಕೊಪ್ಪಳ | ತಿರಸ್ಕೃತ ಸಸಿಯಿಂದಲೇ ಲಾಭದ ಬದುಕು! ನಿಂಬೆ ಬೆಳೆದು ಯಶಸ್ಸು ಕಂಡ ರೈತ ಗವಿಸಿದ್ದಪ್ಪ
ಸಂತೆಯಲ್ಲಿ ಮೊಬೈಲ್ ಕಳೆದುಕೊಂಡವರಲ್ಲಿ ಹೋರಾಟಗಾರ ಹಾಗೂ ಪತ್ರಕರ್ತ ಬಸವರಾಜ್ ಶೀಲವಂತರ ಕೂಡ ಒಬ್ಬರು. ಕೂಡಲೇ ಹತ್ತಿರದ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರು ಸಲ್ಲಿಸುವಾಗ 8 ಮೊಬೈಲ್ ಕಳುವಾಗಿರುವ ಸುದ್ಧಿ ತಿಳಿದಿದೆ. ಬೆಳ್ಳಂಬೆಳಗ್ಗೆಯೇ ಹೀಗೆ ಕಳ್ಳತನವಾಗಿರುವುದು ಸಾರ್ವಜನಿಕರ ಆತಂತಕ್ಕೆ ಕಾರಣವಾಗಿದೆ. ಸದ್ಯ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.





