ಪ್ರಸುತ್ತ ಹೆಣ್ಣುಮಕ್ಕಳು ಎದುರಿಸುವ ಬಾಲ್ಯವಿವಾಹ ಸಮಸ್ಯೆ, ಲಿಂಗ ತಾರತಮ್ಯ ಮತ್ತು ಹಿಂಸಾಚಾರದಂತಹ ಸವಾಲುಗಳನ್ನು ಕುರಿತು ಚರ್ಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಸಮುದಾಯದ ಪ್ರತಿಯೊಬ್ಬರೂ ಉತ್ತೇಜಿಸಬೇಕು ಎಂದು ಸಖಿ ಘಟಕ ಆಡಳಿತಾಧಿಕಾರಿ ಯಮುನಾ ತಿಳಿಸಿದರು.
ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ದಿನದ ಅಂಗವಾಗಿ ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ತಾಯಿ ಮತ್ತು ಮಗು ಹೆರಿಗೆ ಆಸ್ಪತ್ರೆ, ಕಿಮ್ಸ್, ಜಿಲ್ಲಾ ಆಸ್ಪತ್ರೆ ಸಹಯೋಗದೊಂದಿಗೆ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಹೆಣ್ಣುಮಕ್ಕಳ ಸಬಲೀಕರಣ ಮಹತ್ವದ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹದಿಹರೆಯದ ಮಕ್ಕಳು ಹಾಗೂ ತಾಯಂದಿರ, ಮಹಿಳೆಯರ ಸುರಕ್ಷತೆ, ಸಂರಕ್ಷಣೆ, ಹೆರಿಗೆಯ ಆರೈಕೆ, ಹಕ್ಕುಗಳು, ಸಬಲೀಕರಣ ಮತ್ತು ಶಿಕ್ಷಣದ ಮಹತ್ವದ ಕುರಿತ ಜಾಗೃತಿ ಕಾರ್ಯಕ್ರ ಮಂಡಿಸಲಾಯಿತು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಿದ್ದೇಶ್ವರ ಸಹಕಾರ ಬ್ಯಾಂಕ್ ಶೆಡ್ಯೂಲ್ ಬ್ಯಾಂಕ್ ಸ್ಥಾನ ಪರಿವರ್ತನೆಗೆ ಅವಕಾಶವಿದೆ: ಸಚಿವ ಶಿವಾನಂದ ಪಾಟೀಲ
ಗ್ರಾಮ ಪಂಚಾಯಿತಿಯ ಸದಸ್ಯ ದುರ್ಗಪ್ಪ ಗಾದಿನೂರು, ಶಿವಪ್ಪ, ಶುಶ್ರೂಷಾಧಿಕಾರಿಗಳು ಗೀತಾ, ಸಖಿ ಘಟಕದ ವಕೀಲೆ ಪುಷ್ಪಲತಾ, ಮಲ್ಟಿ ಪರ್ಪಸ್ ವರ್ಕರ್ ಶೋಭಾ ಅಳವಂಡಿ, ಗ್ರಾಮದ ಆಶಾ ಕಾರ್ಯಕರ್ತೆಯರು ಆಸ್ಪತ್ರೆಯ ಆರೈಕೆದಾರರು ಹಾಗೂ ಇತರರು ಇದ್ದರು.





