ಕೊಪ್ಪಳ | ಯುದ್ಧ ತ್ಯಜಿಸಿದ ಬುದ್ಧ ಅಹಿಂಸಾ ತತ್ವಕ್ಕೆ ಶರಣಾದ: ಎಚ್ ಎಸ್ ಪಾಟೀಲ್

Date:

ರೋಹಿಣಿ ನದಿಯ ನೀರಿಗಾಗಿ ನಡೆಯುತ್ತಿದ್ದ ಯುದ್ಧ ಹಾಗೂ ಅದರಿಂದ ಆಗುತ್ತಿದ್ದ ರಕ್ತಪಾತದ ಘೋರತೆಗೆ ಬೇಸತ್ತು ಶಾಂತಿಗಾಗಿ ಬುದ್ಧ ವೈರಾಗ್ಯದ ಕಡೆಗೆ ಮುಖ ಮಾಡಿದ ಎಂದು ಹಿರಿಯ ಹೋರಾಟಗಾರ ಎಚ್ ಎಸ್ ಪಾಟೀಲ್ ಹೇಳಿದರು.

ಕೊಪ್ಪಳ ವಿಶ್ವವಿದ್ಯಾಲಯ ಹಾಗೂ ಜ್ಞಾನಬಂಧು ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಬುದ್ಧ ಪೂರ್ಣಿಮದ ಅಂಗವಾಗಿ ಹಮ್ಮಿಕೊಂಡಿದ್ದ ʼಕಾವ್ಯ ಪೂರ್ಣಿಮಾ-2025ʼ ಕಾವ್ಯಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಬುದ್ದ ಪೂರ್ಣಿಮೆಯನ್ನು ಕೊಪ್ಪಳದಲ್ಲಿ ಆಚರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ. ಕಳೆದ ಒಂದೂವರೆ ವರ್ಷದಿಂದ ನಾನೂ ಕೂಡ ಬುದ್ಧನ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ನೂರಾರು ವರ್ಷಗಳಿಂದ ಬುದ್ಧನ ಸಮಾನತೆ ಸಹಜೀವನದ ತತ್ವಗಳನ್ನು ಕಲಿತಿದ್ದೇವೆ. ಕೊಪ್ಪಳದ ಪಾಲ್ಕಿಗುಂಡ ಶಾಸನ ಹಾಗೂ ಗವಿ ಮಠದ ಶಾಸನಗಳಲ್ಲಿ ಅಶೋಕ ಇತ್ಯರ್ಥಪಡಿಸಿದ್ದಾನೆ. ಮಸ್ಕಿಯ ಶಾಸನದಲ್ಲಿ ಅಶೋಕ ಬೇರೆ ಪ್ರಿಯದರ್ಶಿನಿ ಬೇರೆ ಎಂದು ಉಲ್ಲೇಖಿಸುತ್ತಾನೆ. ಬುದ್ಧ ವೈರಾಗ್ಯ ಜೀವನ ಸ್ವೀಕರಿಸಲು ಕಾರಣ ರೋಹಿಣಿ ನದಿಯ ನೀರಿನ ಹಂಚಿಕೆಯ ಕುರಿತು ಯುದ್ದ ಸಂಭವಿಸುವ ಪ್ರಸಂಗ ಬಂದಾಗ ಯುದ್ಧ ತ್ಯಜಿಸಿ ರಕ್ತಪಾತ ಬೇಡ ಎಂದು ರಾಜ್ಯ ತೊರೆದು ಸನ್ಯಾಸ ಸ್ವೀಕರಿಸುತ್ತಾನೆ. ‘ಬೌದ್ಧರನ್ನ ಕಡಿದು ತಂದವರಿಗೆ ಬಂಗಾರದ ನಾಣ್ಯ ಕೊಡುತ್ತೇವೆʼ ಎಂದು ಆಮಿಷವೊಡ್ಡಿದ್ದರಿಂದ ಬೌದ್ಧರು ಭಾರತ ಬಿಟ್ಟು ಹೋದರು‌. ಆದರೆ, ಜಗತ್ತು ಸ್ವೀಕರಿಸಿತು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿವಿ ಕುಲಪತಿ ಬಿ ಕೆ ರವಿ ಮಾತನಾಡಿ, “ಕೊಪ್ಪಳದಲ್ಲಿ ಪ್ರಗತಿಪರರು ಹಾಗೂ ಕವಿ ಮನಸುಗಳು ಹೆಚ್ಚಾಗಿದ್ದಾರೆ. ಅವರ ಸಹಕಾರ, ಉತ್ಸಾಹ ಪ್ರೇರಣೆಯಿಂದ ಬುದ್ಧ ಪೂರ್ಣಿಮಾ ದಿನದಂದ‌ ಕಾವ್ಯ ಪೂರ್ಣಿಮಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಯಿತು. ಬುದ್ದನನ್ನು ಇವತ್ತಿನ ಯುವ ಪೀಳಿಗೆ ಓದಲಿಲ್ಲ. ಜಗತ್ತಿನ ಹಲವು ರಾಷ್ಟ್ರಗಳು ಬುದ್ಧನ ಚಿಂತನೆಯನ್ನು ಅಪ್ಪುಕೊಂಡವು. ಭಾರತ ಬುದ್ಧನನ್ನು ಒಪ್ಪಿ, ಅಪ್ಪಿಕೊಂಡಿದ್ದರೆ, ಭಾರತ ಇಂದು ಮೌಢ್ಯ, ಅಂಧಕಾರ ಹಾಗೂ ಅಸಮಾನತೆಯಿಂದ ದೂರ ಇದ್ದು ಅಭಿವೃದ್ಧಿಯ ಪಥದಲ್ಲಿರುತ್ತಿತ್ತು” ಎಂದರು.

ಇದನ್ನೂ ಓದಿ: ಕೊಪ್ಪಳ | ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಇಬ್ಬರ ಬಂಧನ

ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಡಿ ಎಮ್ ಬಡಿಗೇರ, ಪಾರ್ವತಿ ಕನಕಗಿರಿ, ಪ್ರವಿಣ ಪಾಟೀಲ್, ಸಂತೋಷ, ಸಾವಿತ್ರಿ ಮುಜುಮದಾರ್, ರವುಕಾಂತ್, ಸಿರಾಜ್ ಬೀಸರಳ್ಳಿ, ಮಾಲತಿ ಬಡಿಗೇರ, ಈಸ್ವರ ಹತ್ತಿ, ಮಹೇಶ ಬಳ್ಳಾರಿ, ಕೆ ಬಿ ಗೋನಾಳ ಮೂವತ್ತು ಕವಿಗಳು ಹಾಗೂ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...