ಕೊಪ್ಪಳ | ಜನಸಾಮಾನ್ಯರಿಗೆ ಸಂವಿಧಾನ ಪರಿಚಯಿಸುವ ಅಗತ್ಯವಿದೆ: ಬಸವರಾಜ್ ಸೂಳಿಬಾವಿ

Date:

ಸಂವಿಧಾನ ಜಾಗೃತಿ ಅಭಿಯಾನದ ಮೂಲಕ ಜನಸಾಮಾನ್ಯರಿಗೆ ಸಂವಿಧಾನ ಪರಿಚಯಿಸುವ ಕೆಲಸವಾಗಬೇಕು. ಅದರಲ್ಲಿ ಪ್ರಶ್ನಿಸುವ ಹಕ್ಕು ಇದೆ, ಸಮಾನತೆ, ಸೌಹಾರ್ದತೆ ಇದೆ’ ಎಂದು ಲಡಾಯಿ ಪ್ರಕಾಶಕ ಹಾಗೂ ಬಂಡಾಯ ಸಾಹಿತಿ ಬಸವರಾಜ್ ಸೂಳಿಬಾವಿ ಹೇಳಿದರು.

ಕೊಪ್ಪಳ ಜಿಲ್ಲೆಯ ಕುಕನೂರಿ‌ಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವವನ್ನು ಆಚರಿಸಲಾಯಿತು. ಅಂಬೇಡ್ಕರ್ ಅವರ ಭಾವಚಿತ್ರವನ್ನು ಮುಖ್ಯ ರಸ್ತೆಯಲ್ಲಿ ಹಾದು ಕಾರ್ಯಕ್ರಮ ಆಯೋಜಿಸಿದ್ದ ಬಾಬಾ ಸಾಹೇಬರ ವೃತ್ತದವರೆಗೆ ಮೆರವಣಿಗೆ ಮಾಡಿದ ಬಳಿಕ ಮಾತನಾಡಿದರು.

“ಅಂಬೇಡ್ಕರ್ ದಿನ ಆಚರಿಸುವಾಗ ಅವರ ಗೀತೆಗಳನ್ನು ಹಾಡಬೇಕು ಅಥವಾ ಸಂವಿಧಾನ ಪೂರ್ವ ಪೀಠಿಕೆ ಓದುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಬೇಕು. ಆದರೆ, ಬಾಬಾ ಸಾಹೇಬರ ದಿನದ ಕಾರ್ಯಕ್ರಮದಲ್ಲಿ ದೇವರ ಭಕ್ತಿಗೀತೆ ಹಾಡುತ್ತೇವೆಂದರೆ ನಮಗೆ ಅಂಬೇಡ್ಕರ್ ಭಾವಚಿತ್ರ ಪರಿಚಯವಾಗಿದೆಯೇ ಹೊರತು, ಅವರ ಚಿಂತನೆ, ವಿಚಾರ, ಸಿದ್ಧಾಂತಗಳು ಹಾಗೂ ಆದರ್ಶ ಬದುಕು ಬಹಳಷ್ಟು ಪರಿಚಯವಾಗಿಲ್ಲ” ಎಂದು ಕಾರ್ಯಕ್ರಮದ ಪೂರ್ವದಲ್ಲಿ ದೇವರ ಭಕ್ತಿಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಿಸಿದ್ದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನಾವು ಸಾಹೇಬರ ಜಯಂತಿಗೆ ಬಂದಿದ್ದೇವೋ ಅಥವಾ ಯಾವುದಾದರೂ ಜಾತ್ರೆಗೆ ಬಂದಿದ್ದೇವೋ ಎನ್ನುವ ಅನುಮಾನ ನನ್ನನ್ನು ಕಾಡಲಾರಂಭಿಸಿತು. ಇವತ್ತಿಗೂ ದೇವಸ್ಥಾನದಲ್ಲಿ ದಲಿತರಿಗೆ ಅವಕಾಶ ಇದೆಯೇ? ದೇವಸ್ಥಾನದಲ್ಲಿ ಎಲ್ಲ ಸಮುದಾಯಗಳಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡುವುದು ಸಂವಿಧಾನದ ಹಾಗೂ ಅಂಬೇಡ್ಕರ್ ಅವರ ಆಶಯವಾಗಿದೆ. ಸಂವಿಧಾನ ಇಲ್ಲದೇ ಇದ್ದಿದ್ದರೆ, ದೇವಾಲಯ ಪ್ರವೇಶಕ್ಕು ಸಾಧ್ಯವಾಗುತ್ತಿರಲಿಲ್ಲ, ಈ ದೇಶದ ಮುಖ್ಯ ನ್ಯಾಯಾಧೀಶರಾಗಲೂ ಸಾಧ್ಯವಾಗುತ್ತಿರಲಿಲ್ಲ. ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗಲು, ಚಹಾ ಮಾರುತ್ತಿದ್ದೆ ಎಂದವರು ಪ್ರಧಾನಿಯಾಗಿರುವುದು ಯಾವುದೇ ದೇವರಿಂದಲೂ ಅಲ್ಲ, ಧರ್ಮಗ್ರಂಥಗಳಿಂದಲೂ ಅಲ್ಲ. ಅದು ಬಾಬಾ ಸಾಹೇಬರು ರಚಿಸಿದ ಸಂವಿಧಾನದಿಂದ” ಎಂದರು.

“ನಮ್ಮ ದೆಶದ ಸಂಪನ್ಮೂಲ ಹಂಚಿಕೆಯಾಗಬೇಕು. ಅದರೆ, ಸಂಪತ್ತು ಕೆಲವೇ ಕೆಲವು ಜನರ ಕೈಯಲ್ಲಿದೆ. ಕೊರೊನಾ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಸಂಪನ್ಮೂಲ 6 ಪಟ್ಟು ಜಾಸ್ತಿಯಾಗುತ್ತದೆ. ಅದರೆ, ಸಾಮನ್ಯರ ಜನರ ಬದುಕು ದುರ್ಬಲವಾಗಿತ್ತು. ಸಂವಿಧಾನವನ್ನು ಸಾಮಾನ್ಯರಿಗೆ ಪರಿಚಯಿಸುವ ಕೆಲಸ ಮಾಡಿಲ್ಲ. ಯಾಕೆಂದರೆ, ಸಂವಿಧಾನ ಪ್ರಶ್ನಿಸುವ ಕೆಲಸ ಮಾಡುತ್ತದೆ. ಸಂವಿಧಾನ ಪರಿಚಯಿಸುವ ಕೆಲಸ ಮಾಡಿದ್ದರೆ ಈ ದೇಶದ ಸ್ಥಿತಿ ವಿಷಮ ಸ್ಥಿತಿಯಲ್ಲಿರುತ್ತಿರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಪಂಚಮಸಾಲಿ ಸಮಾಜದ ಹಿಡಿತಕ್ಕೆ ಎರಡು ಗುಂಪುಗಳ ನಡುವೆ ಸಂಘರ್ಷ

“ಈ ದೇಶದ ಶ್ರೀಮಂತನಿಗೂ ಒಂದೇ ಮತ, ಸಾಮನ್ಯ ವ್ಯಕ್ತಿಗೂ ಒಂದೇ ಮತ. ಸಂವಿಧಾನ ಅಂತಹ ಸಮಾನತೆಯನ್ನು ಕಲ್ಪಿಸಿಕೊಟ್ಟಿದೆ. ಈ ದೇಶದ ಯಜಮಾನರು ಪ್ರಜೆಗಳು. ಯಾವುದೇ ನಾಯಕನೂ ಹಾಗೂ ಅಧಿಕಾರಿಗಳು ಈ ದೇಶದ ನಾಯಕನಲ್ಲ. ಅವರೆಲ್ಲ ಪ್ರಜೆಗಳ ಸೇವಕರು. ಸಂವಿಧಾನ ಓದುವ ಅಭಾವ ಹಾಗೂ ಕಾನೂನಿನ ಅರಿವಿನ ಕೊರತೆಯಿಂದ ನಮ್ಮ ಹಕ್ಕುಗಳ ಬಗ್ಗೆ ನಮಗೇ ಗೊತ್ತಾಗುತ್ತಿಲ್ಲ. ಸಂವಿಧಾನದ ಬಗ್ಗೆ ನಮ್ಮಲ್ಲಿ ಅರಿವು ಬಂದರೆ ಈ ದೇಶದ ಆಂತರಿಕ ಅರಿವು ಬರುತ್ತದೆ. ದಾರ್ಶನಿಕರನ್ನು ಜಾತಿಗೆ ಮೀಸಲಿಟ್ಟಿದ್ದೇವೆ. ಎಲ್ಲ ಸಮುದಾಯಕ್ಕೆ ನ್ಯಾಯ ಒದಗಿಸಿಕೊಟ್ಟಿರುವ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಮೀಸಲಿಟ್ಟಿರುವುದು ದುರಂತವೇ ಸರಿ” ಎಂದು ಕಳವಳ ವ್ಯಕ್ತಪಡಿಸಿದರು.

ಮಹಾಂತೇಶ ಆರಬೆರಳಿನ್, ಪೀರಸಾಬ್ ದಫೇದಾರ, ಶರಣಪ್ಪ ವೀರಪೂರ, ಲಕ್ಷ್ಮಣ ಕಾಳಿ, ರತ್ನಾಕರ ತಳವಾರ, ರವೀಂದ್ರ ಬಾಗಲಕೋಟೆ, ಎಚ್ ಪ್ರಾಣೇಶ ತಹಶೀಲ್ದಾರ್, ಸಂತೋಷ ಬಿರಾದರ ಪಾಟೀಲ್ ತಾ.ಪಂ.ಕಾ.ನಿ.ಅಧಿಕಾರಿ, ಶಶಿದರ ಸಕ್ರಿ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...