ಕೊಪ್ಪಳ | ವಿವಿಧ ಸಂಸ್ಕೃತಿ, ಧರ್ಮಗಳ ದೇಶದಲ್ಲಿ ಎಲ್ಲರೂ ಕೂಡಿ ಸಾಗಬೇಕಿದೆ: ಅಲ್ಲಮಪ್ರಭು ಬೆಟ್ಟದೂರು

Date:

ಭಾರತ ದೇಶದಲ್ಲಿ ವಿವಿಧ ಸಂಸ್ಕೃತಿಗಳು, ಅನೇಕ ಬಗೆಯ ಧರ್ಮಗಳಿವೆ. ಇವರೆಲ್ಲರೂ ಕೂಡಿ ಸಾಗಬೇಕಿದೆ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಮುಖಂಡ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ಕೊಪ್ಪಳ ನಗರದ ಹಟಗಾರ ಪೇಟೆ ಓಣಿಯಲ್ಲಿರುವ ಹಝ್ರತ್ ಮಹೆಬೂಬ್ ಸುಭಾನಿ ಅರಬ್ಬಿ ತರಬೇತಿ ಕೇಂದ್ರದ ಆವರಣದಲ್ಲಿ ಹಟಗಾರ ಪೇಟೆ ಓಣಿಯ ಯುವಕರ ಕಮಿಟಿಯಿಂದ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.

ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಹಟಗಾರ ಪೇಟೆ ಓಣಿಯವರು ನಮ್ಮ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಸದಸ್ಯರಿಗೆ ಇಫ್ತಾರ್ ಕೂಟಕ್ಕೆ ಆಮಂತ್ರಿಸಿ ಒಳ್ಳೆಯ ಊಟ ಮಾಡಿಸಿದ್ದಾರೆ. ಹಿಂದೂ, ಮುಸ್ಲಿಂ, ಸಿಖ್, ಇಸಾಯಿ, ಪಾರ್ಸಿ, ಲಿಂಗಾಯತ, ಶೈವ, ಬೌದ್ಧ ಯಾವುದೇ ಧರ್ಮ ಇರಲಿ ನಾವು ಎಲ್ಲರೂ ಕೂಡಾ ಕೂಡಿ ಬಾಳಬೇಕು, ಎಲ್ಲ ಧರ್ಮಗಳೂ ಕೂಡ ದೇವನು ಒಬ್ಬನೇ ಎನ್ನುವಂತಹ ಸೂತ್ರವನ್ನು ಹೇಳುತ್ತವೆ. ನಾವು ದೇವರಿಗಾಗಿ, ಧರ್ಮಕ್ಕಾಗಿ, ಕಾದಾಟ ಮಾಡದೆ ನಮ್ಮ ರೀತಿಯಲ್ಲಿ ಪ್ರೀತಿ ವಿಶ್ವಾಸ ಗೌರವ ಸೌಹಾರ್ದದಿಂದ ನಾವೆಲ್ಲ ಭಾರತೀಯರೂ ಕೂಡಿ ಬಾಳಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಭಾರತ ಒಂದು ದೊಡ್ಡ ದೇಶ, ಈ ದೇಶಕ್ಕೆ ಇರುವ ದೊಡ್ಡ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬೇಕಲ್ಲದೆ ದಡ್ಡ ಸಂಸ್ಕೃತಿಯನ್ನು, ಕೋಮುವಾದಿ ಸಂಸ್ಕೃತಿಯನ್ನು ನಾವು ಯಾರೂ ಕೂಡ ಬೆಳೆಸಿಕೊಂಡು ಹೋಗಬಾರದು. ಎಲ್ಲ ಧರ್ಮಗಳ ಬಾಂಧವರಲ್ಲಿ ಸೌಹಾರ್ದ ಭಾವನೆ ಉಂಟಾದರೆ ಆಗ ಭಾರತ ನಂಬರ್ ಒನ್ ಆಗಲು ಸಾಧ್ಯ” ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಸದ ಸರ್ಕಾರ, ಅನ್ಯಾಯ ಧೋರಣೆ ತೋರುತ್ತಿದೆ: ಬಿ ಎಸ್ ಮಹೇಶ್ ಕುಮಾರ್

ಮಾನವ ಬಂದುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಟಿ ರತ್ನಾಕರ ಮಾತನಾಡಿ, “ನಮ್ಮ ಬಳಗದಿಂದ ಮುಸ್ಲಿಂ ಬಾಂಧವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ನಾವು ಪಾಲ್ಗೊಂಡಿದ್ದೇವೆ. ಮುಸ್ಲಿಮರು ಭಗವಂತನಿಗೆ ಸ್ಮರಣೆ ಮಾಡುತ್ತಾರೆ. ಅವರವರ ಧಾರ್ಮಿಕ ನಂಬಿಕೆ ಗೌರವಿಸಬೇಕು. ನಿಮ್ಮ ವಿಮೋಚನೆಯಲ್ಲಿ ನಾವೂ ಕೂಡ ಸೌಹಾರ್ದ ಸಂದೇಶದೊಂದಿಗೆ ಭಾಗಿಯಾಗಿದ್ದೇವೆ” ಎಂದು ಹೇಳಿದರು.

ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್ ಎ ಗಫಾರ್, ಹಿರಿಯ ಕಾರ್ಮಿಕ ಮುಖಂಡ ಕೆ ಬಿ ಗೋನಾಳ, ಶರಣು ಗಡ್ಡಿ, ಶರಣು ಪಾಟೀಲ್, ಕಾಶಪ್ಪ ಚಲವಾದಿ, ಹಟಗಾರ ಪೇಟೆ ಓಣಿಯ ಯುವಕರ ಕಮಿಟಿಯ ಉಪಾಧ್ಯಕ್ಷ ಸಲೀಮ್ ಹ್ಯಾಟಿ, ಗೌಸ್ ನೀಲಿ, ಮೊಹಮ್ಮದ್ ಕಾಝೀಮ್ ಸಂಗಟಿ, ಫಾರೂಖ್ ನೀಲಿ, ಮೌಲಾ ಹುಸೇನ್ ಗೊಂಡಬಾಳ, ಮರ್ದಾನ್ ಸಂಗಟಿ, ಇಮ್ರಾನ್ ಗಂಗಾವತಿ, ರಾಜಾ ಹುಸೇನ್ ಕಾತರಕಿ, ಖಲಂದರ್ ಗೊಂಡಬಾಳ, ಇಬ್ರಾಹಿಮ್ ತಂಬ್ರಳಿ, ರಿಯಾಝ್ ಸಂಗಟಿ, ಖಾಸೀಮ್ ಸಾಬ್ ಲೇಬಗೇರಿ, ಖಾಜಾ ಹುಸೇನ್ ನೀಲಿ, ಖಾಸೀಮ್ ಸಾಬ್ ನೀಲಿ ಹಾಗೂ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...