ಕೊರಟಗೆರೆ | ಕುರಂಗರಾಯನ ಕೋಟೆಯಲ್ಲಿ ಮೂರು ಕೃತಿಗಳು ಜನಾರ್ಪಣೆ

Date:

‘ಕತ್ತಲರಾತ್ರಿಯಲ್ಲಿ ಒಂದು ದಿನ’ ಕಾರ್ಯಕ್ರಮದಲ್ಲಿ ಮೂರು ಕೃತಿಗಳ ಜನಾರ್ಪಣೆ ಮಾಡಿದ್ದು, ಈ ಮೂಲಕ ಸಾಹಿತ್ಯ ಆಸಕ್ತರಿಗೆ ಹೊಸ ಅನುಭವ ಲೋಕವನ್ನೇ ತೆರೆದಿಟ್ಟಿದ್ದಾರೆ. ಕತ್ತಲಲ್ಲೇ ಬೆಳಕಿನ ಕಿಡಿ ಉಂಟು ಎಂದು ಲೇಖಕ ಡಾ.ಪ್ರಕಾಶ್ ಮಂಟೇದ ಹೇಳಿದರು.

ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ನೆತ್ತಿಯ ಕುರಂಗರಾಯನ ಕೋಟೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಜನಜಂಗುಳಿಯಿರುವ ನಗರ ಪ್ರದೇಶಕ್ಕಿಂತ ಬೆಟ್ಟವೊಂದರ ಮೇಲೆ 45 ಜನ ಸಾಹಿತ್ಯಾಸಕ್ತರನ್ನು ಸೇರಿಸಿ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ ಎಂದರು.

ಸಾಹಿತ್ಯಾಸಕ್ತರ ತಂಡದಿಂದ ಕುರಂಕೋಟೆಯ ದೊಡ್ಡಕಾಯಪ್ಪನ ಗುಡಿ ಬಳಿಯ ದೇವರಹೊಳೆಯಿಂದ ಚಾರಣದ ಮೂಲಕ ಬೆಟ್ಟದ ತುದಿಯಲ್ಲಿ, ನ.25, ಶನಿವಾರ ರಾತ್ರಿಯಿಡೀ, ಡಾ.ರವಿಕುಮಾರ್ ನೀಹರವರ ಪ್ರಕಟಪೂರ್ವ ಕುರಂಗರಾಯನ ಸಂಸ್ಥಾನದ ನಾಟಕದ ಓದು ಮತ್ತು ಚರ್ಚೆ ನಡೆಸಲಾಯಿತು. ನ.26, ಭಾನುವಾರ ಬೆಳಗ್ಗೆ ಕುರಂಗರಾಯನ ಕಾಲದ ಗಲ್ಲೇಬಾನಿ, ಕೋಟೆ ಮುಂತಾದ ಸ್ಮಾರಕಗಳ ವೀಕ್ಷಣೆ ಮತ್ತು ಅವುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾಂತರಾಜು ಗುಪ್ಪಟ್ಣರವರ ‘ಅರ್ಗಂಜಿಯ ಕೊರಳು’ ಕೃತಿಯನ್ನು ಕುರಿತು ಮೋದೂರು ತೇಜ ಮಾತನಾಡಿ, ಈ ತಲೆಮಾರಿನ ಯುವ ಕವಿಗಳು ಅಂಬೇಡ್ಕರರ ಕೊಡುಗೆಯನ್ನು ಕೇವಲ ಮೀಸಲಾತಿಗಾಗಿ ಬಳಸಿಕೊಳ್ಳುತ್ತಿರುವುದು ಮತ್ತು ನೆಲಮೂಲ ಸಂಸ್ಕೃತಿಯನ್ನು ಮರೆತು ಬ್ರಾಹ್ಮಣ್ಯದತ್ತ ವಾಲಿರುವುದನ್ನು ಕವಿ ತಮ್ಮ ಕವನಗಳಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ ಎಂದರು.

ಲಕ್ಷ್ಮೀಶ ದುರ್ಗದಳ್ಳಿಯ ‘ಕುಳಮೆತ್ತಿದ ಮಣ್ಣು’ ಕೃತಿಯನ್ನು ಕುರಿತು ಡಾ. ಮಂಜುನಾಥ ಬುಡಸನಹಳ್ಳಿ ಬಿಡುಗಡೆ ಮಾಡಿ, ತನ್ನ ಸುತ್ತಲಿನ ಘಟನೆ, ಸನ್ನಿವೇಶ, ದಾಂಪತ್ಯ, ಸ್ನೇಹ, ಪ್ರೀತಿಯನ್ನು ಕಾವ್ಯದ ವಸ್ತುವಾಗಿ ಹೆಣೆಯಲಾಗಿದೆ ಎಂದು ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪ್ರಶಸ್ತಿ ಪಡೆದ ಬಾಲಸುಧಾಕರ್ ಮೌಳಿಯವರ ‘ಭೂಮಿ ಪೆದಾಲ್ ಪೈ’ ಎಂಬ ತೆಲುಗು ಕೃತಿಯನ್ನು, ಅಶೋಕ್ ಅಗಿಲ್ ಅನುವಾದಿಸಿರುವ ‘ನದಿಯ ಹುಡುಕಾಟ’ ಕುರಿತು ಡಾ. ಮೂರ್ತಿ ತಿಮ್ಮನಳ್ಳಿ ಮಾತನಾಡಿ, ಇಲ್ಲಿನ ಕವಿತೆಗಳು ಯಾವುದೇ ಒಂದು ತತ್ವದಡಿಯಲ್ಲಿ ರಚನೆಯಾಗದೇ ಎಲ್ಲಾ ದಿಕ್ಕಿನೆಡೆಗು ಕಣ್ಣು ಹಾಯಿಸಿವೆ. ಪದವಿ ಓದುತ್ತಿರುವ ವಿದ್ಯಾರ್ಥಿಗಳು ಆಧುನೀಕರಣದತ್ತ ಹೊರಳಿಕೊಂಡಿರುವಾಗ ಅಶೋಕ್ ಸಾಹಿತ್ಯದತ್ತ ಹೆಜ್ಜೆ ಹಾಕಿರುವುದು ಮಾದರಿಯಾಗಿದೆ ಎಂದರು.

ಕಥೆಗಾರ ಡಾ. ರವಿಕುಮಾರ್ ನೀಹ ಮಾತನಾಡಿ ಪ್ರಾಗೈತಿಹಾಸಕಾಲದಿಂದ 18ನೇ ಶತಮಾನದವರೆಗೂ ಹಲವು ಕಾಲಘಟ್ಟಗಳಲ್ಲಿ ವೈಭವಯುತವಾಗಿ ಮೆರೆದು, ಅಳಿವಿನಂಚಿನಲ್ಲಿರುವ ಸಿದ್ದರಬೆಟ್ಟ ಮತ್ತು ಕುರಂಗರಾಯನ ಕೋಟೆ ಆವರಣದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಕವಿಗಳಾದ ದುಡ್ಡನಹಳ್ಳಿ ಮಂಜುನಾಥ್, ಬಿದಲೋಟಿ ರಂಗನಾಥ್, ಶಿವಶಂಕರ್ ಶೀಗೆಹಟ್ಟಿ, ಮಧುಸೂದನ್ ಬೈಚೇನಳ್ಳಿ, ಡಾ. ಎ.ಒ. ನರಸಿಂಹಮೂರ್ತಿ, ಡಾ. ಮಹೇಶ್ ಕುಮಾರ್, ಮುನಿರಾಜು, ಲಿಂಗರಾಜು, ಫಕ್ಕೀರೇಶ್, ನವೀನ್ ಕುಮಾರ್ ಸೇರಿದಂತೆ 40ಕ್ಕೂ ಅಧಿಕ ಮಂದಿ  ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...