ಕನಕಪುರ | ಜಗದ ಅಂತ್ಯದವರೆಗೂ ಕುವೆಂಪು ಚಿರಸ್ಥಾಯಿಯಾಗಿ ಇರುತ್ತಾರೆ : ಚಿಕ್ಕಮರೀಗೌಡ

Date:

ಜಗದ ಅಂತ್ಯದವರೆಗೂ ಕುವೆಂಪು ಚಿರಸ್ಥಾಯಿಯಾಗಿ ಇರುತ್ತಾರೆ. ಕುವೆಂಪು ಚಿಂತನೆಗಳು, ಸರಳ ಜೀವನದ ಪ್ರತಿಪಾದನೆ, ಮಂತ್ರ ಮಾಂಗಲ್ಯದ ಪರಿಕಲ್ಪನೆ ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕ ಆಗಿವೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಕ್ಕಮರಿಗೌಡ್ರು ಅಭಿಪ್ರಾಯಪಟ್ಟರು.

IMG 20241230 WA0025

ಅವರು ಸೋಮವಾರ ಕನಕಪುರದ ರಂಗನಾಥ ಬಡಾವಣೆಯ ಹೊಂಗಿರಣ ಆವರಣದಲ್ಲಿ ಜಿಲ್ಲಾ ಲೇಖಕರ ವೇದಿಕೆ ಹಾಗೂ ನೇಗಿಲಯೋಗಿ ಸಾಮಾಜಿಕ ಟ್ರಸ್ಟ್ ವತಿಯಿಂದ ರಾಷ್ಟ್ರಕವಿ ಕುವೆಂಪು 120 ನೇ ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ, ಕೃತಿ ಲೋಕಾರ್ಪಣೆ, ಪ್ರಶಸ್ತಿ ಪ್ರಧಾನ ಮತ್ತು ಗೀತ ಗಾಯನವನ್ನು ಆಯೋಜಿಸಲಾಗಿತ್ತು.

ಡಾ. ಹೆಚ್ ತುಕಾರಾಮ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಲೇಖಕರ ವೇದಿಕೆ ಕಳೆದ 12 ವರ್ಷಗಳಿಂದ ಕರ್ನಾಟಕದ ವೈಶಿಷ್ಟ್ಯಗಳನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸುವ ಮಹೋನ್ನತ ಕಾರ್ಯಗಳನ್ನು ಮಾಡುತ್ತಿದೆ. ಸಮಾಜದಲ್ಲಿ ಮೌಲ್ಯ ತುಂಬುವ ಕಾವ್ಯ ಕೃಷಿ ಕಾಯಕ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಖ್ಯಾತ ಸಾಹಿತಿ ಕೂ.ಗಿ ಗಿರಿಯಪ್ಪ ಮಾತನಾಡಿದರು. ನೋಡೋಣ ಬನ್ನಿ ಕರುನಾಡ ಕೃತಿ ಬಿಡುಗಡೆ ಮಾಡಿ ಮಾತನಾಡಿದ ವಿಜಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ವಾದಿರಾಜ್ ಕೃತಿಯಲ್ಲಿ ಕರ್ನಾಟಕದ 74 ಸ್ಥಳಗಳ ದಿಗ್ದರ್ಶನವನ್ನು ಲೇಖಕರು ಸವಿವರವಾಗಿ ಮಾಡಿಸಿದ್ದಾರೆ. ಪುಸ್ತಕವನ್ನು ಓದಿದರೆ ಕರ್ನಾಟಕದ ಪ್ರವಾಸ ಮಾಡಿದ ದಿವ್ಯಾನುಭವ ಮೂಡುತ್ತದೆ ಎಂದರು.

IMG 20241230 WA0027

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರು, ಹಾಗೂ ಜಯಕರ್ನಾಟಕ ಮಾಜಿ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ, ಭೂ ದಾಖಲೆಗಳಾದ ನಿರ್ದೇಶಕ ನಂದೀಶ್, ಪಶು ವೈದ್ಯಾಧಿಕಾರಿ ಡಾ.ಕುಮಾರ್, ನಗರಸಭೆಯ ಸಮುದಾಯ ಸಂಘಟಕರಾದ ನಟರಾಜುಗೆ “ವಿಶ್ವ ಮಾನವ” ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುಮಾರಸ್ವಾಮಿ, ಕುವೆಂಪು ಜಗದ ಕವಿ, ಯುಗದ ಕವಿ, ಸಂತ ಕವಿ , ರಾಷ್ಟ್ರಕವಿ ಮಾತ್ರವಲ್ಲ ಜಗತ್ತಿನ ಸಮಾನತೆಯ ಪರಿಕಲ್ಪನೆಗೆ ಸೂತ್ರ ಸಾರಿದ ಮಹಾನ್ ದಾರ್ಶನಿಕರು. ಸಮಾಜದ ಮೌಢ್ಯಗಳ ವಿರುದ್ದ ಚಾಟಿ ಬೀಸಿ ಮೌಲ್ಯಗಳ ಬಿತ್ತಿದ ಮಹಾನ್ ಪುರುಷ. ಜಾತೀಯತೆಯ ವಿರುದ್ದ ಹೋರಾಡಿದ ಸಾಮಾಜಿಕ ಸಮಾನತೆಯ ಹೋರಾಟಗಾರರು ಸಹ ಹೌದು ಎಂದರು.

ಇದನ್ನು ಓದಿದ್ದೀರಾ? ರಾಮನಗರ | ರಕ್ತದಾನ ಮಹಾ ಜೀವದಾನ : ಡಾ. ಮುತ್ತಣ್ಣ

ತಮ್ಮ ಕಾವ್ಯದ ವಿಚಾರಧಾರೆಗಳಿಂದ ಸಮಾಜದಲ್ಲಿ ಇಂದಿಗೂ ಅವರ ಜೀವಂತಿಕೆ ಕಾಣಬಹುದು. ಜ್ಞಾನಪೀಠ ಪ್ರಶಸ್ತಿಗೆ ಬುನಾದಿ ಹಾಕಿಕೊಟ್ಟ ಮಹನೀಯರು. ಕನ್ನಡ ಭಾಷೆಯ ಸಿರಿ ಸಂಪತ್ತನ್ನು ಜಗತ್ತಿಗೆ ತಿಳಿಸಿ ಕೊಟ್ಟವರು. ನಿರ್ದಿಷ್ಟವಾಗಿ ಸಾರ್ವತ್ರಿಕ ಮಾನವತಾವಾದವನ್ನು ಪ್ರತಿಪಾದಿಸಿ ವಿಶ್ವ ಮಾನವರೆಸಿನಿದ್ದಾರೆ. ಅಂತವರ ಹೆಸರಲ್ಲಿ ಪ್ರಶಸ್ತಿಗೆ ಭಾಜನನಾಗಿದ್ದು ನನ್ನ ಜೀವಿತದ ಅವಿಸ್ಮರಣೀಯ ಘಳಿಗೆಯಾಗಿದ್ದು, ಅದಕ್ಕಾಗಿ ಜಿಲ್ಲಾ ಲೇಖಕರ ವೇದಿಕೆ, ಹಾಗೂ ನೇಗಿಲಯೋಗಿ ಸಾಮಾಜಿಕ ಟ್ರಸ್ಟಿಗೆ ನಾ ಚಿರ ಋಣಿಯಾಗಿರುತ್ತೇನೆ ಎಂದು ಭಾವುಕರಾಗಿ ಹೇಳಿದರು.

ನೇಗಿಲಯೋಗಿ ಟ್ರಸ್ಟಿನ ಚಿಕ್ಕೆಂಪೆಗೌಡರು ಸ್ವಾಗತ ಭಾಷಣ ಮಾಡಿದರೆ , ಕಸಾಪ ಅಧ್ಯಕ್ಷರಾದ ಶಿವನಹಳ್ಳಿ ಶಿವಲಿಂಗಯ್ಯ ಕುವೆಂಪು ಬಗ್ಗೆ ಸವಿವರವಾಗಿ ಉಪನ್ಯಾಸ ನೀಡಿದರು. ಎಸ್. ಶೋಭ ಕಾರ್ಯಕ್ರಮವನ್ನು ನಿರೂಪಿಸಿದರು. ವಿಜಯ ಶಂಕರ್ ಹಾಗೂ ವಿನಯ್ ಕುಮಾರ್ ಹಾಗೂ ತಂಡದವರು ಕುವೆಂಪು ವಿರಚಿತ ಗೀತ ಗಾಯನ ನಡೆಸಿಕೊಟ್ಟರು.

ಇದನ್ನು ನೋಡಿದ್ದೀರಾ? ಗದಗ | ಮನೆ ಹಂಚಿಕೆಯಲ್ಲಿ ತಾರತಮ್ಯ ಆರೋಪ

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಡೇಗೌಡ, ಕನ್ನಡ ಭಾಸ್ಕರ್, ಜಿಕೆವಿಕೆ ರಾಮಯ್ಯ, ಚಿಕ್ಕ ರಂಗಯ್ಯ, ನಮನ ಚಂದ್ರು, ಅಸ್ಗರ್ ಖಾನ್ , ಕೆಂಚಪ್ಪ, ನಾಗರಾಜು, ಶಿವಣ್ಣ , ಎಸ್. ವೆಂಕಟೇಶ್ ಗೋಪಾಲ ಕಾಂಬ್ಳೆ, ನಾಗೇಂದ್ರ, ರಾವುಗೋಡ್ಲು ವೆಂಕಟಗಿರಿಯಪ್ಪ ಮತ್ತು ಮುಂತಾದ ಸಾಹಿತಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...