ಮೈಸೂರು ರೋಟರಿ ಯುವ ನಾಯಕತ್ವ ಅಕಾಡೆಮಿ ವತಿಯಿಂದ, ಜನವರಿ.10 ರಿಂದ 11ರ ವರೆಗೆ ವಿಶ್ವವಿದ್ಯಾನಿಲಯದ ವಿಜ್ಞಾನ ಭವನ ಸಭಾಂಗಣದಲ್ಲಿ ಎರಡು ದಿನಗಳ ‘ನಾಯಕತ್ವ ತರಬೇತಿ, ಸಾರ್ವಜನಿಕ ಹಾಗು ಸಿಪಿಆರ್ ಸೇವೆಗಳ’ ಕುರಿತಾಗಿ ಕಾರ್ಯಾಗಾರ
ಯಶಸ್ವಿಯಾಗಿ ನಡೆಯಿತು.
ಯುವಕರಲ್ಲಿ ಭವಿಷ್ಯದ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಾಗಾರದಲ್ಲಿ, ಸಮುದಾಯ ಸೇವೆಯ ಅರಿವು, ಯೋಜನಾ ರೂಪಣೆ ಹಾಗೂ ಜೀವ ಉಳಿಸುವ ಕೌಶಲ್ಯಗಳ ಕುರಿತು ಸಮಗ್ರ ತರಬೇತಿಯನ್ನು ನೀಡಲಾಯಿತು.

ಕಾರ್ಯಾಗಾರದ ಪ್ರಮುಖ ಆಕರ್ಷಣೆಯಾಗಿ ಸಿ.ಪಿ.ಆರ್ (CPR) ಜೀವ ಉಳಿಸುವ ತುರ್ತು ಚಿಕಿತ್ಸಾ ತರಬೇತಿ,
ಮುಖ್ಯ ಭಾಷಣಕಾರರಾದ ರೋಟೇರಿಯನ್ ಕೆ.ವಿ. ಮೋಹನ್ ಕುಮಾರ್ -ನಾಯಕತ್ವ ತರಬೇತಿ, ಒಬ್ಬ ನಾಯಕ ಹೇಗೆ ಮಾದರಿಯಾಗಿ ಮುನ್ನಡೆಸಬೇಕು ವಿಚಾರ ಮಂಡಿಸಿದರು. ಪಿ.ಕೆ.ರಾಮ್ -ರೋಟರಿಯ ಮೌಲ್ಯಗಳು ಮತ್ತು ಕಾರ್ಯಾಗಾರದ ಅಗತ್ಯ, ಆರ್ವೈಎಲ್ಎ ಕ್ಯಾಪ್ಟನ್ ನವೀನ್ ನಾಗಪ್ಪ-ಯುದ್ಧ ಮೌಲ್ಯಗಳು ಮತ್ತು ಭಾರತದ ಭದ್ರತೆಯ ಕುರಿತಾಗಿ, ಮಂಗಳ ವರ್ಮಾ- ವ್ಯಕ್ತಿತ್ವ ವಿಕಸನದ ಕುರಿತಾಗಿ, ಆರ್ಟಿಎನ್ಎನ್ಎಸ್ ಆನಂದ್-ಸಾಮಾಜಿಕ ಸೇವೆಯ ಮೌಲ್ಯಗಳ ಕುರಿತು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ‘ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ
ಕಾರ್ಯಾಗಾರದಲ್ಲಿ ಜಿಲ್ಲಾ ಗವರ್ನರ್ ಪಿ.ಕೆ. ರಾಮಕೃಷ್ಣ, ಗೌರವ ಅತಿಥಿಗಳಾಗಿ ರಾಜಸ್ಥಾನದ ಯಶಸ್ವಿ ಸೋಮಶೇಖರ್, ರೋಟರಿ ನಾಯಕತ್ವ ಸಂಸ್ಥೆಯ ನಿರ್ದೇಶಕ ಮೋಹನ್ ಕುಮಾರ್ ಕೆ.ವಿ, ಪಿಎಚ್ಎಫ್ ನ ಡಾ. ಅನುಪ್ ಎನ್.ಆರ್, ಹೋಸ್ಟ್ ಕ್ಲಬ್ನ ಕಾರ್ಯದರ್ಶಿ ಮೋಹನ್ ಗುರುಮೂರ್ತಿ, ಎನ್.ಎಸ್. ಆನಂದ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.





