ಇನಾಂವೀರಾಪೂರ ಗ್ರಾಮದಲ್ಲಿ ಮೇಲ್ಜಾತಿ ಯುವತಿ ದಲಿತ ಯುವಕನ ಮದುವೆ ಆಗಿದ್ದಕ್ಕೆ 7 ತಿಂಗಳ ಗರ್ಭಿಣಿಯನ್ನು ಕೊಂದ ತಂದೆ ಮತ್ತು ಇತರರಿಗೆ ಕಠಿಣ ಶಿಕ್ಷೆ ವಿಧಿಸಲು ದಲಿತ ಸಂಘಟನೆಗಳ ಸಂಯುಕ್ತ ವತಿಯಿಂದ ಲಿಂಗಸೂಗೂರು ಸಹಾಯಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಹುಬ್ಬಳ್ಳಿಯಲ್ಲಿ ಅನ್ಯ ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ತಂದೆ ಹಾಗೂ ಇತರರು ಸೇರಿಕೊಂಡು ಗರ್ಭಿಣಿಯಾಗಿದ್ದ, ಮಾನ್ಯ ವಿವೇಕಾನಂದ ದೊಡ್ಡಮನಿ (19) ಎಂಬ ಯುವತಿಯನ್ನು ಹತ್ಯೆ ಮಾಡಿದ್ದಾರೆ ಕೂಡಲೇ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 13,154 ಕ್ಕೂ ಅಧಿಕ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳಾಗಿವೆ. ಇಂತಹ ಹಲವಾರು ಘಟನೆಗಳು ನಡೆಯುತ್ತಿವೆ. ಕೆಲವು ನಡೆದರೂ ಬೆಳಕಿಗೆ ಬಾರದೆ ಮುಚ್ಚಿ ಹೋಗುತ್ತಿವೆ. ಆದ್ದರಿಂದ ರಾಜ್ಯ ಸರಕಾರ ಕೂಡಲೇ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ಆರೋಪಿಗಳಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಈ ಕೃತ್ಯ ಎಸಗಿದವರನ್ನು ಈ ಕೂಡಲೇ ಕ್ರಮವಾಗಬೇಕು ಎಂದರು.
ಯುವಕನ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸಬೇಕು ಹಾಗೂ ಸರಕಾರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮರ್ಯಾದಾ ಹತ್ಯೆ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ
ಪ್ರತಿಭಟನೆಯಲ್ಲಿ ಮಾಜಿ ಪುರಸಭೆ ಸದಸ್ಯರು ರುದ್ರಪ್ಪ ಬ್ಯಾಗಿ
ನಾಮನಿರ್ದೇಶಿತ ಸದಸ್ಯರು ಮೋಹನ್ ಗೋಸ್ಲೆ, SC/ST ದೌರ್ಜನ್ಯ ನಿಯಂತ್ರಣ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷರು ರಮೇಶ್ ಗೋಸ್, ಪ್ರಭುಲಿಂಗ ಮ್ಯಾಗಮನಿ, ಕಿರಣಕುಮಾರ ಚಿಕ್ಕಹೆಸರೂರು, ಶಿವಣ್ಣ ಮಾಚನೂರು, ಮುತ್ತು ಚಿಕ್ಕಹೆಸರೂರು, ಆಂಜನೇಯ ಭಂಡಾರಿ, ಚಿನ್ನಪ್ಪ ರಾರಾವಿ ಮುದಗಲ್, ಅಮರೇಶ ಮ್ಯಾಗೇರಿ ದಲಿತ ಮುಖಂಡರು, ಹನುಮಂತ ಮುದಗಲ್ ಇನ್ನಿತರರು ಹಾಜರಿದ್ದರು.





