ಕನಕಪುರ | ಹೋರಾಟ ಮಾಡುತ್ತಲೇ ಜೀವತೆತ್ತ ಹೆಚ್.ಎಸ್ ಲಿಂಗೇಗೌಡ

Date:

ಹೋರಾಟವೇ ಜೀವನವೆಂದು ಜೀವಿಸಿ, ಹೋರಾಟ ಮಾಡುತ್ತಲೇ ಜೀವತೆತ್ತ ಹೆಚ್.ಎಸ್ ಲಿಂಗೇಗೌಡರ ಜೀವನ ಪ್ರತಿ ಹೋರಾಟಗಾರರಿಗೂ ಆದರ್ಶಮಯವಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಕನಕಪುರದ ಚನ್ನಬಸಪ್ಪ ಸರ್ಕಲ್ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಕೆಆರ್‌ಎಸ್ ಪಕ್ಷದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಹುದ್ದೆಗಾಗಿ ವಾಮಮಾರ್ಗದಲ್ಲಿ ಲಾಭಿ ಮಾಡುವ ಇಂದಿನ ಕಾಲದಲ್ಲಿ ಇದ್ದ ಉನ್ನತ ಸರಕಾರಿ ಹುದ್ದೆಯನ್ನೆ ತೊರೆದು ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿದ ಇತಿಹಾಸ ಬೆರಳೆಣಿಕೆಯಷ್ಟಿದ್ದು ಅಂತಹವರಲ್ಲಿ ಹೆಚ್.ಎಸ್ ಲಿಂಗೇಗೌಡರು ಕೂಡ ಒಬ್ಬರು.

ಭ್ರಷ್ಟಾಚಾರ ಮುಕ್ತ ಕರ್ನಾಟಕದ ಕನಸು ಕಟ್ಟಿ, ಅದಕ್ಕಾಗಿ ಮನಸು ಕೊಟ್ಟು ಹೋರಾಡಿದರು. ಇತರರ ಒಳಿತಿಗಾಗಿ ಜೀವನವನ್ನೇ ಮುಡುಪಾಗಿಟ್ಟ ಲಿಂಗೇಗೌಡರ ದುರಂತ ಸಾವು ಮಾತ್ರ ಇಷ್ಟು ಘೋರವಾಗಿ ಸಂಭವಿಸಿದ್ದು ಮಾತ್ರ ನೋವಿನ ಸಂಗತಿ. ಸರಕಾರ ಕೂಡ ಇಂತಹ ಹೋರಾಟಗಾರರನ್ನು ಕಡೆಗಣಿಸಿದ್ದು ಖಂಡನಿಯ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೆಆರ್‌ಎಸ್ ಪಕ್ಷದ ಸೈನಿಕ ಹಾಗೂ ಜೀವನ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಹೊಸದುರ್ಗ ಮಾತನಾಡಿ, ಹೆಚ್.ಎಸ್.ಲಿಂಗೇಗೌಡರು ನಮ್ಮಂತಹ ಅನೇಕ ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದವರು, ಉಂಡು ಉಟ್ಟು ಹೊರಳಿ ಹೋದರಾಯ್ತೆ ಬದುಕು ಪಾವನ, ಕೊಂಡ ಮೇಲೆ ಮರಳಿ ಕೊಡದೆ ಪೂರ್ಣವೆಂತು ಜೀವನ ಎಂಬ ಆದರ್ಶವ ಕಲಿಸಿಕೊಟ್ಟ ಪೂಜ್ಯನೀಯರು ಎಂದು ನೆನಪಿಸಿಕೊಂಡರು.

ಇದನ್ನು ಓದಿದ್ದೀರಾ? ಮಂಡ್ಯ | ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ಸಂವಿಧಾನಕ್ಕೆ ವಿರುದ್ಧ: ಬಿ.ಟಿ.ವಿಶ್ವನಾಥ್

ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರಗಳಿಗೆ ತ್ವರಿತಗತಿಯ ನ್ಯಾಯ ಮತ್ತು ಗರಿಷ್ಠ ಮಟ್ಟದ ಶಿಕ್ಷೆಗಾಗಿ ಆಗ್ರಹಿಸಿ ಮಂಗಳೂರಿನಿಂದ ದೆಹಲಿಯವರೆಗೆ ಪಾದಯಾತ್ರೆ ಕೈಗೊಂಡು ಒಂದು ಉದಾತ್ತ ಆಶಯವನ್ನು ಗುರಿ ಕಾಣಿಸಲು ವಿಧಿ ಬಿಡದ ಕಾರಣ ಗುಜರಾತ್ ನ ಬರುಚ್ ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಹ ಹೋರಾಟಗಾರ ಕುಂಞ ಮೂಸಾ ಶರೀಪ್ ಅವರೊಟ್ಟಿಗೆ ಧಾರುಣ ಸಾವು ಕಂಡರು ಎಂದು ತಮ್ಮ ಒಡನಾಟವನ್ನು ನೆನೆದರು.

ಇತರರ ಒಳಿತಿಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ಹೋರಾಟದಲ್ಲಿಯೇ ಜೀವ ಬಿಟ್ಟಿದ್ದಾರೆ. ಅವರ ಆಶಯದಂತೆ ಸರಕಾರ ಮಹಿಳೆಯರ ಮೇಲಿನ ಶೋಷಣೆಗೆ ನ್ಯಾಯ ಒದಗಿಸಿದರೆ ಅವರ ಆತ್ಮ ತೃಪ್ತವಾಗುತ್ತದೆ‌. ಆ ದಿಕ್ಕಿನಲ್ಲಿ ರಾಜ್ಯದಲ್ಲಿ ಮಹಿಳೆಯರ ಹಿತಕಾಯಲು ಮಹೋನ್ನತ ಹೋರಾಟಕ್ಕೆ ಎಲ್ಲಾ ಸಂಘಟನೆಗಳು ಒಗ್ಗೂಡಬೇಕಿದೆ ಎಂದು ಹೇಳಿದರು ಆಗ್ರಹಿಸಿದರು.

ಇದನ್ನು ನೋಡಿದ್ದೀರಾ? ಸಾಹಿತ್ಯ ಸಮ್ಮೇಳನದಲ್ಲಿ ನಾನ್ ವೆಜ್ ಇರಲೇಬೇಕಾ?

ಕಸಾಪ ಅಧ್ಯಕ್ಷ ಶಿವಲಿಂಗಯ್ಯ, ಚೀಲೂರು ಮುನಿರಾಜು, ಕಬ್ಬಾಳೇಗೌಡ, PWD ಇಂಜಿನಿಯರ್ ಶಶಿಧರ್, ಕೂ.ಗಿ.ಗಿರಿಯಪ್ಪ, ನೀಲಿ ರಮೇಶ್ , ವೀರೇಶ್ ಹೆಚ್. ಎಸ್ ಲಿಂಗೇಗೌಡರ ಮೇರುಗುಣ ಹಾಗೂ ಆದರ್ಶಮಯ ಜೀವನದ ಗುಣಗಾನ ಮಾಡಿ, ಇಂತಹ ಶ್ರೇಷ್ಠ ಹೋರಾಟಗಾರರ ಸಾವು ನಿಜಕ್ಕೂ ಅನುಮಾನಸ್ಪದವಾಗಿದ್ದು ಈ ಘಟನೆಯ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸ್ಟುಡಿಯೋ ಚಂದ್ರು, ಭಾಸ್ಕರ್, ನಟರಾಜ್, ಜೀವನ್ ಕೆ.ಆರ್ ಎಸ್ ಪಕ್ಷದ ಶಿವಮ್ಮ. ತಾಮಸಂದ್ರ ಕಿರಣ್, ಶೋಭಾ, ಅಸ್ಗರ್ ಖಾನ್, ಚೀರಣಗುಪ್ಪೆ ರಾಜೇಶ್, ಮಿಲ್ಟ್ರಿ ರಾಮಣ್ಣ, ಮಿಲ್ಟ್ರಿ ದೇವರಾಜು, ಪುಟ್ಟಲಿಂಗಯ್ಯ, ಸಾಸಲಾಪುರ ಜಗದೀಶ್ . ಮತ್ತು ಇತರರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...