ಮಂಡ್ಯ | ಭೀಮಾ ಕೋರೆಗಾಂವ್ ವಿಜಯೋತ್ಸವದಂತೆ ಬಾಡೂಟ ಚಳವಳಿ: ಬಿಟಿವಿ

Date:

ಕೇವಲ 500 ಮಂದಿ ಮಹರ್ ಸೈನಿಕರು 30,000 ಮಂದಿ ಪೇಶ್ವೆ ಸೈನ್ಯವನ್ನು ಸೋಲಿಸಿದಂತೆ ಮಂಡ್ಯ ಬಾಡೂಟದ ಚಳವಳಿಯೂ ಸಸ್ಯಹಾರ ಶ್ರೇಷ್ಟತೆಯ ಕೋಮುವಾದಿ ಅಜೆಂಡಾವನ್ನು ಮುಂದೊಂದು ದಿನ ಸೋಲಿಸಲಿದೆ ಎಂದು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲಾಧ್ಯಕ್ಷ ಬಿಟಿ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯದ ವಕೀಲರ ಕಚೇರಿ ಬಿಟಿವಿ ಕಾರ್ಯಾಲಯದಲ್ಲಿ 2025ರ ಹೊಸ ವರ್ಷದ ಆಚರಣೆಯ ಭಾಗವಾಗಿ ಹಾಗೂ ಭೀಮಾ ಕೋರೆಗಾಂವ್ ಯುದ್ಧ ವಿಜಯದ ಸ್ಮರಣೆಯನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಸಮಾನ ಮನಸ್ಕ ಅನೇಕ ವಕೀಲರು ಭಾಗವಹಿಸಿದ್ದ ಈ ವೇಳೆ ಮಂಡ್ಯದ ಬಾಡೂಟ ಚಳವಳಿಯನ್ನು ಕೋರೆಗಾಂವ್ ಯುದ್ಧದ ವಿಜಯೋತ್ಸವಕ್ಕೆ ಸಮೀಕರಿಸಿ ಮಾತನಾಡಿದರು.

“ಬಿಜೆಪಿ ಕೋಮುವಾದದ ಕುಟಿಲ ನೀತಿಯ ಮೂಲಕ ದೇಶದ ರಾಜಕೀಯ ಅಧಿಕಾರವನ್ನು ಹಿಡಿದಿದ್ದು, ದೇಶವನ್ನು ಸುದೀರ್ಘವಾಗಿ ಆಳಿದ ಕಾಂಗ್ರೆಸ್‌ನ ಸೈದ್ಧಾಂತಿಕ ಮೌನವೇ ಅದಕ್ಕೆ ಕಾರಣವಾಯಿತು. ಇಂತಹ ರಾಜಕಾರಣದಿಂದಾಗಿ ದೇಶದಲ್ಲಿನ ಸಾಂವಿಧಾನಿಕ ಕೇಂದ್ರಗಳು ದುರ್ಬಲಗೊಳ್ಳಲು ಕಾರಣವಾಯಿತು. ದೇಶದಲ್ಲಿ ಚಾಲ್ತಿಯಲ್ಲಿರುವ ಕೋಮು ರಾಜಕಾರಣವು ಆಹಾರ ಅಸ್ಪೃಶ್ಯತೆಯನ್ನು ಸಸ್ಯಹಾರ ಶ್ರೇಷ್ಟತೆಯ ಹುಸಿವಾದವನ್ನು ದೇಶದ ಮೇಲೆ ಹೇರಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಆ ಮೂಲಕ ಬಹುಸಂಖ್ಯಾತ ಮಾಂಸಾಹಾರಿಗಳಾದ ಶೂದ್ರ ದಲಿತ ಹಿಂದುಳಿದ ವರ್ಗಗಳ ಪ್ರಜೆಗಳನ್ನು ಆ ಸಮುದಾಯದ ರಾಜಕೀಯ ನಾಯಕರನ್ನು ಎರಡನೇ ದರ್ಜೆಗೆ ಇಳಿಸಿ ತಾನು ಸಸ್ಯಹಾರ ಶ್ರೇಷ್ಠತೆಯ ರಾಜಕೀಯದ ಮೂಲಕ ಅಧಿಕಾರ ಕಬಳಿಸಿದೆ. ಆ ಅಧಿಕಾರಕ್ಕಾಗಿ ಕೋಮು ರಾಜಕಾರಣ ಶತಮಾನ ಕಾಲ ಕಾದಿತ್ತು. ಆದರೆ ಈ ಅವಕಾಶವಾದಿ ರಾಜಕೀಯದ ಬುಡಕ್ಕೆ ಬಾಡೂಟದ ಚಳವಳಿಯ ಕಿಡಿಬಿದ್ದಿದೆ. ಆ ಕಾರಣಕ್ಕಾಗಿಯೇ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಬಾಡೂಟ ಚಳವಳಿಯ ಮುಂಚೂಣಿಯಲ್ಲಿದ್ದ ಸಂಘಟನೆಗಳೊಂದಿಗೆ ಜೊತೆಯಾಗಿದ್ದು” ಎಂದರು.

“ಭಾರತದಲ್ಲಿ ಕೋಮುಸಾಮರಸ್ಯವನ್ನು ಉಳಿಸಿಕೊಳ್ಳಲು ಭಾರತವನ್ನು ಬಹುಜನ ಭಾರತವನ್ನಾಗಿ ಶಾಂತಿಯ ತೋಟವನ್ನಾಗಿ ಉಳಿಸಿಕೊಳ್ಳಲು ಇರುವ ಮುಂಗಾಣಿಕೆಯನ್ನು ಬಾಡೂಟ ಚಳವಳಿ ಹೊಂದಿತ್ತು. ದೇಶದ ಬಹುಸಂಖ್ಯಾತರು ಮಾಂಸಹಾರಿಗಳೇ ಆಗಿದ್ದು, ಆಹಾರ ಅಸ್ಪೃಶ್ಯತೆಯ ಕೋಮುವಾದಿ ರಾಜಕೀಯ ಅಜೆಂಡಾವನ್ನು ಸೋಲಿಸಲು ಅವರೆಲ್ಲ ಒಂದಾಗಬೇಕಾದ ವರ್ತಮಾನದ ತುರ್ತಿದೆ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ‘ಭೀಮಾ ಕೋರೆಗಾಂವ್ ವಿಜಯೋತ್ಸವ’ ಸಂಭ್ರಮ

“ಸರ್ಕಾರಿ ಪ್ರಾಯೋಜಿತ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾಂಸಹಾರ ಮತ್ತು ಸಸ್ಯಹಾರ ಎರಡಕ್ಕೂ ಸಮಗೌರವ ಸಲ್ಲುವಂತೆ ನೋಡಿಕೊಳ್ಳಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕೋರೆಗಾಂವ್ ಯುದ್ಧದ ವಿಜಯ ಸಂಭ್ರಮಾಚರಣೆಯಲ್ಲಿ ವಕೀಲರಾದ ನದೀಮ್, ಕಿಶೋರ್, ಚೇತನ್, ಪಲ್ಲವಿ, ಸಹನಾ, ರಶ್ಮಿತಾ, ಆಕಾಶ್, ಸಚಿನ್ ಮತ್ತು ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...